ಇವು ಕೇವಲ ಆಹಾರ ಪದಾರ್ಥಗಳಲ್ಲ… ಹಲವು ರೋಗ ನಿವಾರಕದ ಅಮೃತದ ಕಣಜ
ಅರಿಶಿನದ ಚೂರನ್ನು ಸುಟ್ಟು ಪುಡಿ ಮಾಡಿಕೊಂಡು ಬೆರೆಸಿ ಹಲ್ಲುಜ್ಜುವುದರಿಂದ ದಂತಕ್ಷಯ ನಿವಾರಣೆಯಾಗುತ್ತದೆ
ಆದರ್ಶ ಕೊಡಚಾದ್ರಿ
ಆದರ್ಶ ಕೊಡಚಾದ್ರಿ
ಭಾರತೀಯ ಆಹಾರ ಕ್ರಮಕ್ಕೂ ಹಾಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಪುರಾತನ ಕಾಲದಿಂದಲೂ ಬೆಳೆಸಿಕೊಂಡು ಬಂದ ಆಹಾರ ಕ್ರಮಗಳು ನಮ್ಮನ್ನು ಕಾಡಬಲ್ಲ ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತಾ ಬಂದಿದೆ. ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಧಗಳಾದ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಅರಶಿನಗಳು ನಮ್ಮ ಆರೋಗ್ಯವನ್ನು ಕಾಪಾಡುವ ಮೂಲಕ ಸುಂದರ ಬದುಕಿಗೆ ಸಹಾಯಕವಾಗಿವೆ. ಅಂತಹಾ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಅರಶಿನಗಳ ನಾನಾ ಉಪಯೋಗಗಳು ಈ ಕೆಳಗಿನಂತಿದೆ…