ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಶುಭ ಹಾಗೂ ಅಶುಭ ಫಲಗಳ ಸಮ್ಮಿಲನವಿದೆ
Team Udayavani, Dec 27, 2020, 7:07 AM IST
27-12-2020
ಮೇಷ: ಸಣ್ಣಪುಟ್ಟ ಅಪಘಾತಗಳಿಂದ ಪಾರಾಗುವಿರಿ. ಲೇವಾದೇವಿ ವ್ಯವಹಾರ ಆದಷ್ಟು ಕಡಿಮೆ ಮಾಡಿರಿ. ಗೃಹದಲ್ಲಿ ಸಣ್ಣಪುಟ್ಟ ಜಗಳಗಳು ಕಂಡುಬಂದಾವು. ಆರ್ಥಿಕ ಒತ್ತಡವು ಕಂಡುಬರಲಿದೆ.
ವೃಷಭ: ಕೃಷಿ, ಪಶು, ಹೈನುಗಾರಿಕೆ ಉದ್ದಿಮೆಯವರಿಗೆ ಕೈತುಂಬಾ ಕೆಲಸವಿದ್ದರೂ ಅದಕ್ಕೆ ತಕ್ಕ ಫಲವು ದೊರಕುವುದಿಲ್ಲ. ವಿಲಾಸೀ ಸಾಮಾಗ್ರಿಗಳ ವೃತ್ತಿಯವರಿಗೆ ಆದಾಯ ವೃದ್ಧಿ ಇರುತ್ತದೆ. ವಾಹನಾದಿಯಿಂದ ಲಾಭ.
ಮಿಥುನ: ಖನಿಜ, ಲೋಹ ವಸ್ತುಗಳ ಮಾರಾಟದಲ್ಲಿ ಸ್ವಲ್ಪ ಲಾಭವು ಕಂಡುಬರಲಿದೆ. ಆಕಸ್ಮಿಕ ಧನ ವ್ಯಯವಾಗುವುದು ಕಂಡುಬಂದು ಚಿಂತಿತರಾಗುವಿರಿ. ಗೃಹಿಣಿಗೆ ರಕ್ತದೊತ್ತಡ ಭಾದೆ ಕಾಣಬಹುದು.
ಕರ್ಕ: ವಿದೇಶ ಯಾನದ ಯೋಗವು ಸ್ವಲ್ಪದರಲ್ಲೇ ತಪ್ಪಿಹೋದೀತು. ವಾಹನ ರಿಪೇರಿ, ಕಟ್ಟಡ ರಚನೆಯ ಕಾರ್ಯದವರಿಗೆ ಲಾಭ ಕಂಡುಬಂದೀತು. ಕಮಿಶನ್ ವ್ಯವಹಾರದಲ್ಲಿ ಕುಸಿತ ಕಂಡುಬರಲಿದೆ. ಶುಭವಾರ್ತೆ.
ಸಿಂಹ: ಬಂಧುಗಳಿಂದ ವ್ಯವಹಾರದಲ್ಲಿ ಮನಸ್ತಾಪವು ಕಂಡುಬರಲಿದೆ. ಪರೋಪಕಾರ ಮಾಡಲು ಹೋಗಿ ಕೈ ಸುಟ್ಟುಕೊಂಡೀರಾ ಜೋಕೆ. ನಿಮಗೆ ಎಲ್ಲಾ ತರಹದ ಸಮೃದ್ಧಿ ಇದ್ದರೂ ಚಿಂತೆಯು ನಿಮ್ಮನ್ನು ಹಿಂಬಾಲಿಸಲಿದೆ.
ಕನ್ಯಾ: ಮಂಗಲಕಾರ್ಯ ಹಾಗೂ ದೇವತಾ ಕಾರ್ಯಗಳಿಗೆ ವಿಳಂಬ ತಂದೀತು. ವಿದ್ಯಾರ್ಜನೆಯಲ್ಲಿ ನೀವು ನಿರೀಕ್ಷಿಸಿದಷ್ಟು ಫಲ ದೊರಕದು. ಶುಭ ಹಾಗೂ ಅಶುಭ ಫಲಗಳ ಸಮ್ಮಿಲನವಿದೆ. ಆರ್ಥಿಕ ಕ್ಲೇಶವಿದೆ.
ತುಲಾ: ಮನಸ್ಸು ತಾನು ಬಯಸಿದ್ದನ್ನು ಮಾಡಲು ಮುಂದೆ ಹೋದರೆ ಹಿರಿಯರಿಂದ ತಡೆ ಬರುತ್ತದೆ. ಆಕಸ್ಮಿಕ ಧನಲಾಭ, ನೂತನ ಬಂಧು, ಮಿತ್ರರ ಭೇಟಿಯಿಂದ ಸಂತೋಷ, ಸಂಭ್ರಮಗಳು ಇದ್ದೀತು.
ವೃಶ್ಚಿಕ: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ನೂತನ ಉದ್ಯೋಗಲಾಭದಿಂದ ಸಂತಸವಾಗಲಿದೆ. ನೌಕರ ವರ್ಗಕ್ಕೆ ಮುಂಭಡ್ತಿ ಯೋಗವಿದೆ. ನೂತನ ಕಾರ್ಯದ ಒತ್ತಡ ಮನಕ್ಲೇಶ ತಂದರೂ ಸಮಾಧಾನ ಮಾಡಿಕೊಳ್ಳಿರಿ.
ಧನು: ಅಲರ್ಜಿಯಂತಹ ಪೀಡೆಗಳು ಕಂಡುಬರಲಿದೆ. ದೀರ್ಘಕಾಲೀನ ಅಸ್ತಮಾ ಪೀಡೆಯವರಿಗೆ ಸ್ವಲ್ಪ ಜಾಗ್ರತೆ ಮಾಡಬೇಕಾದೀತು. ಜನಹಿತ ಕಾರ್ಯದಿಂದ ಶ್ಲಾಘನೆ ದೊರಕಲಿದೆ. ಆರೋಗ್ಯ ಜಾಗ್ರತೆ.
ಮಕರ: ಕೃಷಿ ಕಾರ್ಯ, ರಖಂ ವ್ಯವಹಾರದವರಿಗೆ ಉತ್ತಮ ಲಾಭವಿದೆ. ಸ್ತ್ರೀ ನಿಮಿತ್ತ ನ್ಯಾಯಾಲಯದ ದರ್ಶನವಾದೀತು. ಅನಗತ್ಯವಾಗಿ ಹಣದ ಪೋಲಾದೀತು. ವಿದ್ಯಾರ್ಥಿಗಳಿಗೆ ಯಶೋಭಿವೃದ್ಧಿ ಇದೆ.
ಕುಂಭ: ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರಕಲಿದೆ. ವಿಮೆ, ಕಮಿಶನ್ ವ್ಯವಹಾರ ಕಠಿಣ ತರದ ದುಡಿಮೆ ಇತ್ಯಾದಿಗಳವರಿಗೆ ಹೆಚ್ಚಿನ ಲಾಭವು ಇರದು. ಸ್ತ್ರೀಗೆ ಆರೋಗ್ಯದಲ್ಲಿ ಏರುಪೇರು.
ಮೀನ: ಬಂಧುವರ್ಗದವರ ಸಹಾಯ ಯಾಚನೆ, ಪುಣ್ಯ ಕಾರ್ಯ ಯಾ ದೇವತಾ ಕಾರ್ಯಗಳು ನಿಮ್ಮಿಂದ ಜರಗಲಿವೆ. ಸಣ್ಣಪುಟ್ಟ ಅಡಚಣೆಗಳಿಂದಾಗಿ ಕೈಗೊಂಡ ಕಾರ್ಯಗಳು ವಿಳಂಬವಾದೀತು. ಶುಭವಿದೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ