ಈ ರಾಶಿಯವರಿಗಿಂದು ಉದ್ಯೋಗ, ವ್ಯವಹಾರಗಳು ಸರಾಗವಾಗಿ ನಡೆದು ಹಣ ಕೈಸೇರಲಿದೆ
Team Udayavani, May 29, 2021, 7:23 AM IST
29-05-021
ಮೇಷ: ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕಗಳು, ಉದ್ಯೋಗ ಬದಲಾವಣೆ, ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ತಾಪತ್ರಯಗಳು ಕಂಡುಬರಲಿವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಮೂಡಿ ಬಂದು ಮನಸ್ಸು ಕೆಡಿಸಲಿದೆ.
ವೃಷಭ: ಕುಟುಂಬದೊಳಗೆ ಭಿನ್ನಾಭಿಪ್ರಾಯ, ತಂಟೆ ತಕರಾರಿನಿಂದ ಮನಸ್ಸು ಉದ್ವೇಗಗೊಳ್ಳಲಿದೆ. ಕೆಲವೊಂದು ಘಟನೆಗಳಿಂದ ಮನಸ್ಸು ಉದ್ವೇಗ ಹಾಗೂ ಉದ್ವಿಗ್ನಗೊಳ್ಳಲಿದೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಉತ್ತಮ.
ಮಿಥುನ: ಧನಾರ್ಜನೆಗೆ ಹಲವು ಮೂಲಗಳು ಗೋಚರಿಸಲಿದೆ. ಅಭಿವೃದ್ಧಿಯು ಯಥೇತ್ಛವಾಗಿ ಕಂಡುಬರುವುದು. ಉದ್ಯೋಗ, ವ್ಯವಹಾರಗಳು ಸರಾಗವಾಗಿ ನಡೆದು ಹಣ ಕೈಸೇರಲಿದೆ. ಮನೆಯಲ್ಲಿ ಶುಭ ಕಾರ್ಯವಿದೆ.
ಕರ್ಕ: ಉತ್ಪತ್ತಿ ಲಾಭಾಂಶವು ಕುಂಠಿತಗೊಂಡರೂ ಖರ್ಚಿಗೇನೂ ಕಡಿಮೆಯಾಗಲಾರದು. ಕೆಲವೊಂದು ಮಹತ್ತರ ಕಾರ್ಯಗಳು ಕೈಗೂಡಲಿವೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕು. ಅಭಿವೃದ್ಧಿ ಕಂಡುಬಂದು ಸಂತಸವಾದೀತು .
ಸಿಂಹ: ಸಾಮಾಜಿಕ ಕಾರ್ಯದಲ್ಲಿ ಸ್ಥಾನಮಾನಗಳು ಲಭ್ಯವಾಗಲಿದೆ. ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ. ಕೋರ್ಟುಕಚೇರಿಗಳ ವ್ಯವಹಾರದಲ್ಲಿ ಅಡ್ಡಿ ಆತಂಕಗಳು ತೋರಿಬಂದು ತಲೆಚಿಟ್ಟು ಹಿಡಿದೀತು.
ಕನ್ಯಾ: ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ತೋರಿ ಬಂದಾವು. ಸಮಸ್ಯೆಗಳು ಮೇಲಿಂದ ಮೇಲೆ ಎದುರಾಗಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಾಗಲಿದೆ. ಏರುಪೇರಿಲ್ಲದ ಸಮಾಧಾನಕರ ಜೀವನ ನಿಮ್ಮದಾದೀತು.
ತುಲಾ: ದೈಹಿಕ, ಮಾನಸಿಕ ಹಾಗೂ ಆರ್ಥಿಕ ತಾಪತ್ರಯಗಳು ತೋರಿ ಬರುವುದು. ಆದರೂ ಅದನ್ನು ಸಂಭಾಳಿಸಿಕೊಂಡು ಹೋಗಿರಿ. ಆರ್ಥಿಕವಾಗಿ ಹೆಚ್ಚು ಖರ್ಚು ಕಂಡು ಬಂದರೂ ಅದನ್ನು ನಿಭಾಯಿಸಿಕೊಂಡು ಹೋದರೆ ಉತ್ತಮ.
ವೃಶ್ಚಿಕ: ಕೋರ್ಟು ಕಚೇರಿ ಕೆಲಸ ಕಾರ್ಯಗಳಲ್ಲಿ ವ್ಯಾಜ್ಯ, ತಗಾದೆಗಳು ಅನುಕೂಲ ರೀತಿಯಲ್ಲಿ ಇತ್ಯರ್ಥಗೊಂಡಾವು. ಮನೆಯಲ್ಲಿ ಶುಭಮಂಗಲ ಕಾರ್ಯದ ನಿರೀಕ್ಷೆಯಲ್ಲಿ ನೀವಿರುವಿರಿ. ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ ಕಿರುಕುಳವಿದೆ.
ಧನು: ಕುಟುಂಬದಲ್ಲಿ ಹಿರಿಯರ ಅನಾರೋಗ್ಯದ ಬಗ್ಗೆ ಚಿಂತೆಗೊಳಗಾಗುವಿರಿ. ನಿಧಾನವಾಗಿಯಾದರೂ ಗುಣಮುಖರಾಗುವರು. ವಾದವಿವಾದಗಳಿಂದ ಮಾನಸಿಕವಾಗಿ ಕ್ಲೇಶ ಕಂಡುಬಂದೀತು. ಅಭಿವೃದ್ಧಿಯು ನಿಧಾನವಾಗಿ ಕಂಡುಬಂದೀತು.
ಮಕರ: ಆರ್ಥಿಕ ಹಾನಿ, ಸತ್ಕರ್ಮ ಅನುಷ್ಠಾನದಲ್ಲಿ ವಿಮುಖತೆ ತೋರಿಬಾರದಂತೆ ಜಾಗ್ರತೆ ಮಾಡಿರಿ. ಸಾಂಸಾರಿಕ ವಿಚಾರದಲ್ಲಿ ಅವಶ್ಯ ಕಾರ್ಯಗಳು ಸಕಾಲದಲ್ಲಿ ಅನಿರೀಕ್ಷಿತವೆಂಬಂತೆ ಕೈಗೂಡಲಿವೆ. ಕಾರ್ಯಕ್ಷೇತ್ರದಲ್ಲಿ ಉದ್ವೇಗ ಕಾಡಲಿದೆ.
ಕುಂಭ: ದೂರ ಸಂಚಾರ, ನೀಚಜನರ ಒಡನಾಟ ಇತ್ಯಾದಿಗಳಿಗೆ ಸಾಧ್ಯತೆ ಇರುವುದರಿಂದ ಅದಷ್ಟು ಜಾಗ್ರತೆ ತೋರಿದಲ್ಲಿ ಉತ್ತಮ. ಧಾರ್ಮಿಕ, ಆಧ್ಯಾತ್ಮಿಕ ಪ್ರವೃತ್ತಿಯಲ್ಲಿ ಆಸಕ್ತಿ ತೋರಿಬಂದು ದೇವತಾ, ಮಂಗಲ ಕಾರ್ಯಗಳಿಗೆ ಅನುಕೂಲ.
ಮೀನ: ಹೆಚ್ಚಿನ ದುಡಿಮೆ, ಪ್ರಯತ್ನಬಲ ನಿಮ್ಮನ್ನು ಮುನ್ನಡೆಗೆ ಕೊಂಡೊಯ್ಯಲಿದೆ. ಬಂದ ಅವಕಾಶಗಳನ್ನು ಉತ್ತಮ ಹಾಗೂ ಅನುಕೂಲ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಹೆಚ್ಚಿನ ಕಷ್ಟನಷ್ಟಗಳು ಉಪಶಮನವಾಗಲಿದೆ. ಶುಭವಾರ್ತೆ ಇದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ