ಇಂದಿನ ಗ್ರಹಬಲ: ಈ ರಾಶಿಯವರಿಂದು ಕಂಡಕಂಡವರ ಮೈಮೇಲೆ ಬಿದ್ದು ಗೆಳೆತನದ ಚಟದಿಂದ ದೂರವಿರಿ!


Team Udayavani, Mar 5, 2021, 7:55 AM IST

horoscope

05-03-2021

ಮೇಷ: ಈ ದಿನದಲ್ಲಿ ನಿಮಗೆ ಹೊಸಬರನ್ನು ಭೇಟಿಯಾಗುವ ಅವಕಾಶ ಸಿಗುವುದರಿಂದ, ಸಂಬಂಧ ಬೆಳೆಸುವ ಮುನ್ನ ಯೋಚಿಸಿ, ಚಿಂತಿಸಿ ಮುನ್ನಡೆದರೆ ಉತ್ತಮ. ನೀವು ಒಂಟಿಯಾಗಿದ್ದರೆ ನಿಮಗೆ ಜಂಟಿಯಾಗುವ ಆಸೆ.

ವೃಷಭ: ನೂತನ ಗೆಳೆಯ, ಗೆಳತಿಯರ ಸಂಗ ಆನಂದ ನೀಡಬಲ್ಲದು. ನಿಮಗೆ ಬೇಕಾಗಿರುವುದು ಒಂದು ಅರ್ಥಪೂರ್ಣ ಸಂಬಂಧ. ಮನೆಯವರು ನಿಮಗೆ ಸದಾಕಾಲ ಜೊತೆಯಾಗಿ ಪತ್ನಿಯು ಸಹಕಾರ ದೊರೆಯುವುದು. ದಿನಾಂತ್ಯ ಶುಭವಿದೆ.

ಮಿಥುನ: ಶಾಂತಿಪ್ರಿಯರಾದ ನಿಮಗೆ ಶಾಂತಿಯ ಕೊಳಲ ನಾದವನ್ನು ಕೇಳಬಯಸುವಿರಿ. ಆದರೆ ಈಗ ಅದು ಶ್ರುತಿ ತಪ್ಪಿದ ಹಾಡಾಗಲಿದೆ. ಅದಕ್ಕೆ ಕಾರಣ ಸಂಬಂಧಗಳ ಲಯ ತಪ್ಪಿರುವುದು. ಎಲ್ಲರಿಗೂ ಸಮಾಧಾನಿಸುವ ತವಕ.

ಕರ್ಕ: ನಿಮ್ಮ ಮನಸ್ಸಿಗೆ ತೋಚಿದ್ದನ್ನು ನುಡಿಯುವ ಬಾಯಿ ಚಪಲ ನಿಮ್ಮದು. ಅದನ್ನು ಅರ್ಥೈಸಿಕೊಂಡರೆ ಉತ್ತಮ. ಇಲ್ಲದಿದ್ದಲ್ಲಿ ಹಳಸಲಿದೆ. ನಿಮ್ಮಿಂದ ಉಪಕೃತರಾದವರೇ ನಿಮ್ಮನ್ನು ಜರೆಯುವರು. ಇದಕ್ಕೆಲ್ಲ ತಲೆ ಕೆಡಿಸದಿರಿ.

ಸಿಂಹ: ನಿಮಗೆ ಹುಡುಕಿಕೊಂಡು ಬಂದ ಅವಕಾಶವನ್ನು ಬಳಸಿಕೊಳ್ಳಿರಿ. ಅವಿಭಕ್ತ ಕುಟುಂಬದಲ್ಲಿ ಕಷ್ಟ ತಪ್ಪಿದ್ದಲ್ಲ ಎಂದು ನಿಮಗರಿವಿರಲಿ. ಕಂಡಕಂಡವರ ಮೈಮೇಲೆ ಬಿದ್ದು ಗೆಳೆತನದ ಚಟದಿಂದ ದೊರವಿರಿ. ಮುನ್ನಡೆಯಿರಿ.

ಕನ್ಯಾ: ಅನಿಶ್ಚಿತತೆಯ ಬುನಾದಿ ಮೇಲೆ ಸ್ಥಾಪನೆಯಾಗುವ ಸಂಬಂಧ ನಿಮ್ಮನ್ನೆಲ್ಲೋ ಕೊಂಡೊಯ್ಯಲಿದೆ. ಕುಡುಕರ ವ್ಯಭಿಚಾರಿಗಳ ಸ್ನೇಹದಿಂದ ದೂರವಿದ್ದಷ್ಟು ಉತ್ತಮ. ನಿಮ್ಮ ಜೀವನ ಸರಿ ಹೋದೀತು. ಗೃಹದಲ್ಲಿ ಸುಖ, ಸಂತೋಷವಿದೆ.

ತುಲಾ: ಏಕಾಂತದಲ್ಲಿ ಕಾಲ ಕಳೆಯುವುದರಲ್ಲಿರುವ ಸುಖದ ಅರಿವು ನಿಮಗಾಗಲಿದೆ. ಈ ಮೂಲಕ ನೀವು ಈ ಹಿಂದೆ ಮಾಡಿದ ಹಲವಾರು ಆಯ್ಕೆಗಳನ್ನು ಮರುಮೌಲ್ಯಮಾಪನ ಮಾಡಬಹುದು. ಸರಿಯಾದ ದಿಕ್ಕಲ್ಲಿ ಆಲೋಚಿಸಿರಿ.

ವೃಶ್ಚಿಕ: ಸಂಬಂಧಗಳಲ್ಲಿ ಎಲ್ಲಾ ಏಳುಬೀಳುಗಳ ನಂತರವೂ ಸಂಗಾತಿ ನಿಮ್ಮನ್ನೇ ನೆಚ್ಚಿಕೊಳ್ಳುವುದಕ್ಕೆ ತೀರ್ಮಾನಿಸಿರುವುದು ನಿಮಗೊಂದು ಪಾಠವಾಗಲಿದೆ. ಅವಿವಾಹಿತರು ತಮ್ಮ ಸಂಗಾತಿಯಿಂದ ಮಿಶ್ರ ಪತ್ರಿಕ್ರಿಯೆ ಸ್ವೀಕರಿಸಬಹುದು.

ಧನು: ನಿಮ್ಮ ಸಹೋದ್ಯೋಗಿಗಳನ್ನು ಅತೀ ಎಚ್ಚರಿಕೆಯಿಂದ ಗಮನಿಸಿರಿ. ನಿಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದನ್ನು ನೀವು ದೂರ ಮಾಡಿರಿ. ಮನೆಯಲ್ಲಿ ಹಿರಿಯರೊಂದಿಗೆ ವಾದ, ವಾಗ್ವಾದಕ್ಕೆ ಇಳಿಯದಿರಿ. ಪ್ರೀತಿಯಿಂದ ವ್ಯವಹರಿಸಿರಿ.

ಮಕರ: ಹಳೆಯ ಗೆಳೆಯರು ಪುನಃ ಬಂದು ನಿಮಗೆ ಭೇಟಿಯಾದರು. ನೀವು ಸಂಭ್ರಮಿಸುವ ಕಾಲವಿದು. ಹಳೆಯ ವೈಷಮ್ಯವನ್ನು ಬಿಟ್ಟು ಬಿಡಿರಿ. ಗೆಳೆತನದ ಹಸ್ತ ಚಾಚಿರಿ. ಕಡಿದು ಹೋದ ಸಂಬಂಧ ಜೋಡಣೆಯಾಗಲಿದೆ.

ಕುಂಭ:ಕೆಲವೊಂದು ವಿಚಾರವನ್ನು ಥಟ್ಟನೆ ಹೇಳುವ ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಿರಿ. ನಿಮ್ಮ ವೃತ್ತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಬಹಳ ನಿಧಾನಗತಿಯಲ್ಲಿರುತ್ತದೆ. ಸಹನೆ, ತಾಳ್ಮೆ ಅಗತ್ಯ.

ಮೀನ: ನಿಮ್ಮ ಕೆಲಸ ಕಾರ್ಯಗಳಲ್ಲಿ ಇಡೀ ದಿನ ತೊಡಗಿಸಿಕೊಂಡು ಬಿಡುವು ಇಲ್ಲವಾದೀತು. ಸಹೋದ್ಯೋಗಿಗಳೊಡನೆ ಎಚ್ಚರಿಕೆಯಿಂದ ವ್ಯವಹರಿಸಿರಿ. ಯಾರಾದರೂ ಕೊಂಚ ಹೊಗಳಿದರೆ ಅಟ್ಟಕ್ಕೇರ ಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ.

ಎನ್.ಎಸ್.ಭಟ್

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.