ಸೋಮವಾರದ ನಿಮ್ಮ ಗ್ರಹಬಲ ಹೇಗಿದೆ?
Team Udayavani, Dec 7, 2020, 7:33 AM IST
ಮೇಷ: ಸಾಂಸಾರಿಕವಾಗಿ ಸಾಮರಸ್ಯ ನಿಮಗೆ ಸುಖ, ಸಂತೋಷ, ನೆಮ್ಮದಿಯನ್ನು ತಂದು ಕೊಡಲಿದೆ. ವೃತ್ತಿರಂಗದಲ್ಲಿ ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಹೋಗದಿರಿ. ಒಳ್ಳೆಯ ಫಲಗಳು ಗೋಚರಿಸಲಿವೆ.
ವೃಷಭ: ಒಳಿತು ಕೆಡುಕು ಇವೆರಡನ್ನೂ ಸಮಚಿತ್ತದಿಂದ ಸ್ವೀಕರಿಸುವುದು ಒಳಿತು. ಎಲ್ಲಾ ರೀತಿಯಲ್ಲಿ ಒಮ್ಮೆಲೇ ಮುನ್ನುಗ್ಗುವುದು ಬೇಡ. ಜೀವನವನ್ನು ಸದ್ಯದ ಸ್ಥಿತಿಯಲ್ಲಿ ಇದ್ದ ಹಾಗೇ ಎದುರಿಸಬೇಕಾದೀತು. ಕಿರು ಸಂಚಾರವಿದೆ.
ಮಿಥುನ: ಹೆಚ್ಚಿನ ಕೆಲಸ ಕಾರ್ಯಗಳು ಅನಿರೀಕ್ಷಿತ ರೀತಿಯಲ್ಲಿ ಯಶಸ್ಸು ತಂದು ಕೊಡಲಿವೆ. ಆತ್ಮವಿಶ್ವಾಸ ಹಾಗೂ ಪ್ರಯತ್ನಬಲ ನಿಮಗೆ ಪೂರಕವಾಗಿ ನಿಲ್ಲಲಿದೆ. ಹೊಸ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕಾಗುವುದು.
ಕರ್ಕ: ಪ್ರತಿಭಾ ಹಾಗೂ ಪ್ರಭಾವಶಾಲಿಗಳಾದ ನಿಮಗೆ ಅದೃಷ್ಟವು ಆಟ ಆಡಿಸಲಿದೆ. ಆದರೂ ಹೆದರದೆ ಧೈರ್ಯದಿಂದ ಎದುರಿಸಿದ್ದಲ್ಲಿ ನಿಮಗೆ ಯಶಸ್ಸಿನ ಅನುಭವವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿರುತ್ತದೆ.
ಸಿಂಹ: ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳು ಆಸಕ್ತಿಯಿಂದ ನೆರವೇರಲಿದೆ. ವಾಹನ ಖರೀದಿ ಹಾಗೂ ಅದರ ವಿಲೇವಾರಿಯಲ್ಲಿ ಲಾಭವನ್ನು ತಂದು ಕೊಡಲಿದೆ.
ಕನ್ಯಾ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫಲವು ಸಂತಸ ತರಲಿದೆ. ಉತ್ತಮ ಹಿತೈಷಿಗಳು ಮಿತ್ರ ವರ್ಗದವರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ.
ತುಲಾ: ಪ್ರಯತ್ನ ಮಾಡುವ ಮುನ್ನವೇ ಫಲದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟುಬಿಡಿರಿ. ಹಲವು ಕಾರಣಗಳಿಂದ ನಿಮ್ಮ ಆರೋಗ್ಯಕ್ಕೆ ಭಂಗ ಬರಲಿದೆ. ಶ್ರಮ ಪಟ್ಟರೂ ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆದಾವು.
ವೃಶ್ಚಿಕ: ಹಣಕಾಸಿನ ಹಾಗೂ ಆರೋಗ್ಯದ ವಿಚಾರದಲ್ಲಿ ನಿಗಾ ವಹಿಸುವುದು ಅಗತ್ಯವಿದೆ. ನಿಮ್ಮ ತಾಳ್ಮೆ ಸವಾಲಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ಹೈರಾಣಾಗುವಿರಿ. ಯೋಗ್ಯ ಸಂಬಂಧಗಳು ಬರಲಿವೆ.
ಧನು: ನಿಮಗೆ ಈಗ ಸಮಯವು ಪ್ರಸನ್ನವಾಗಿದ್ದುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಬದುಕು ಉಲ್ಲಾಸದಿಂದ ಕೂಡಿರುತ್ತದೆ. ಆದರೂ ಅನಗತ್ಯ ದುಂದುವೆಚ್ಚ ಬೇಡ. ಹಿರಿಯರ ಸಲಹೆಗೆ ಕಿವಿಗೊಡಿರಿ.
ಮಕರ: ನೀವು ವೈಯಕ್ತಿಕವಾಗಿ ಮಾಡಿದ ತಪ್ಪುಗಳ ಸುಳಿಯಲ್ಲಿ ಸಿಲುಕದಂತೆ ಜಾಗ್ರತೆ ಮಾಡಿರಿ. ವಿವಾಹಿತರಿಗೆ ಅನಾವಶ್ಯಕ ತಪ್ಪು ಅಭಿಪ್ರಾಯ ಮೂಡಿಬಂದು ಕಲಹಕ್ಕೆ ಕಾರಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಮಾಡಿರಿ.
ಕುಂಭ: ವೃತ್ತಿರಂಗದಲ್ಲಿ ಕೂಡ ಏರುಪೇರು ಕಂಡು ಬಂದು ಬೇಸರವಾಗಿಲಿದೆ. ಬಾಳ ಸಂಗಾತಿಗಳು ಪರಸ್ಪರ ಅರಿತು ಬಾಳಲಿದ್ದಾರೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ವಿದೇಶ ಪ್ರಯಾಣವು ಕೂಡಿ ಬರಲಿದೆ. ಸಹನೆ ಬೇಕು.
ಮೀನ: ನಿಮ್ಮ ನಿರಾಶಾ ಮನೋಭಾವವನ್ನು ದೂರ ಮಾಡಿದರೆ ಉತ್ತಮ. ಆರ್ಥಿಕವಾಗಿ ಚೇತರಿಕೆ ಕಂಡು ಬಂದರೂ ಕನ್ನಡಿಯೊಳಗಿನ ಗಂಟಾಗಲಿದೆ. ನಿಧಾನವಾಗಿ ದೊರಕಲಿದೆ. ನಿಮ್ಮ ಪ್ರಯತ್ನ ಬಲದಿಂದ ಕಾರ್ಯ ಸಾಧನೆಯಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ