Karnataka Election ಸಿದ್ದಾಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅಮಿತ್ ಶಾ
Team Udayavani, Apr 29, 2023, 6:40 PM IST
ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಧ್ಯಾಹ್ನ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರ ಪರ ಮತ ಯಾಚಿಸಿದರು.
ಈ ವೇಳೆ ಮಾತನಾಡಿದ ಶಾ,” ರಾಜ್ಯದಲ್ಲಿ ಬಿಜೆಪಿ ಸರಕಾರ 4% ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದೆ. ಆ ಮೀಸಲಾತಿ ಸಂವಿಧಾನದ ಪ್ರಕಾರ ಇರಲಿಲ್ಲ. ನಮ್ಮ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸುವುದಿಲ್ಲ. ಅವರ ರಿವರ್ಸ್ ಗೇರ್ ಸರಕಾರ ಬಂದರೆ ಮತ್ತೊಮ್ಮೆ ಮುಸ್ಲಿಂ ಮೀಸಲಾತಿಯನ್ನು ತರುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತದೆ. ನಿಮಗೆ ಅದು ಬೇಕಾ” ಎಂದು ಪ್ರಶ್ನಿಸಿದರು.
#WATCH | #KarnatakaElections2023 | Union Home Minister Amit Shah holds a roadshow in Byndoor. pic.twitter.com/gWv5In3OaK
— ANI Digital (@ani_digital) April 29, 2023
ಬಿಜೆಪಿ ನಾಯಕರು, ಸಾವಿರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ರೋಡ್ ಶೋ ಬಳಿಕ ಮಂಗಳೂರು ನಗರದಲ್ಲಿ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ.