karnataka polls 2023;ಉಮೇದೇ ದೊಡ್ಡದು ಠೇವಣಿ ಬಲು ಚಿಕ್ಕದು


Team Udayavani, Apr 8, 2023, 3:49 PM IST

karnataka polls 2023;ಉಮೇದೇ ದೊಡ್ಡದು ಠೇವಣಿ ಬಲು ಚಿಕ್ಕದು

ಉಡುಪಿ: ಚುನಾವಣೆಯಲ್ಲಿ ಪಕ್ಷ ಬಿ-ಫಾರ್ಮ್ ನೀಡಲಿ ಅಥವಾ ನೀಡದಿರಲಿ ಸ್ಪರ್ಧೆಗೆ ಇಳಿಯುವ ಉಮೇ ದುವಾರರು ಇದ್ದೇ ಇರುತ್ತಾರೆ. ಜತೆಗೆ ಪಕ್ಷೇತರ ಅಭ್ಯರ್ಥಿಗಳಿರುತ್ತಾರೆ. ಫ‌ಲಿತಾಂಶ ಬಂದಾಗ ಬಹುತೇಕರಿಗೆ ಠೇವಣಿಯೂ ಸಿಗದು. ಈ ಮಧ್ಯೆ ನಾಮಪತ್ರ ಸಲ್ಲಿಸಿ, ಎರಡೇ ದಿನದಲ್ಲಿ ವಾಪಸ್‌ ಪಡೆಯುವ ಚಾಣಾಕ್ಷರೂ ಇದ್ದಾರೆ.
2008, 2013 ಹಾಗೂ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 5 ಕ್ಷೇತ್ರ ದಲ್ಲೂ ಠೇವಣಿ ಕಳೆದುಕೊಂಡವರ ಪಟ್ಟಿ ದೊಡ್ಡದು. ಯಾರನ್ನೋ ಮಣಿ ಸಬೇಕು, ಇನ್ಯಾರಿಗೋ ಅನುಕೂಲ ಮಾಡಿ ಕೊಡಬೇಕು ಅಥವಾ ಕ್ಷೇತ್ರದಲ್ಲಿ ಗೆದ್ದು ಇಡೀ ವ್ಯವಸ್ಥೆಯನ್ನೇ ಬದಲಿಸಬೇಕು-ಹೀಗೆ ನಾನಾ ಕಾರಣ ಸ್ಪರ್ಧೆಯ ಹಿಂದಿರುತ್ತದೆ.

2018ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ 14 ಮಂದಿ ನಾಮ ಪತ್ರ ಸಲ್ಲಿಸಿದ್ದರು. ನಾಲ್ವರ ನಾಮಪತ್ರ ತಿರಸ್ಕೃತಗೊಂಡರೆ, ಇಬ್ಬರು ವಾಪಸ್‌ ಪಡೆದರು. ಕಣದಲ್ಲಿದ್ದ 8 ಮಂದಿಯಲ್ಲಿ 6 ಜನರಿಗೆ ಠೇವಣಿ ಸಿಗಲಿಲ್ಲ. ಕುಂದಾಪುರ ಕ್ಷೇತ್ರದಲ್ಲಿ 8 ಮಂದಿಯಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡರೆ, ಇಬ್ಬರು ವಾಪಸ್‌ ಪಡೆದಿದ್ದರು. ಉಳಿದವರಲ್ಲಿ ಮೂವರು ಠೇವಣಿ ಕಳೆದುಕೊಂಡರು. ಉಡುಪಿ ಕ್ಷೇತ್ರದಿಂದ 5 ಮಂದಿ ನಾಮ ಪತ್ರ ಸಲ್ಲಿಸಿ, ಇಬ್ಬರು ವಾಪಸ್‌ ಪಡೆದಿದ್ದರು. ಮೂವರಲ್ಲಿ ಒಬ್ಬರು ಠೇವಣಿ ಕಳೆದು ಕೊಂಡರು. ಕಾಪು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ 10 ಮಂದಿಯಲ್ಲಿ 1 ತಿರಸ್ಕೃತಗೊಂಡು, ಇಬ್ಬರು ವಾಪಸ್‌ ಪಡೆದಿದ್ದರು. ಏಳರಲ್ಲಿ ಐದು ಮಂದಿ ಠೇವಣಿ ಕಳೆದುಕೊಂಡಿದ್ದರು. ಕಾರ್ಕಳ ಕ್ಷೇತ್ರದಲ್ಲಿ 5 ಮಂದಿ ನಾಮಪತ್ರ ಸಲ್ಲಿಸಿ ದ್ದು, 1 ತಿರಸ್ಕೃತಗೊಂಡು, ಇಬ್ಬರು ವಾಪಸ್‌ ಪಡೆದಿದ್ದರು. ಇಬ್ಬರು ಠೇವಣಿ ಗಳಿಸಿದ್ದರು. ಯಾವ ಕ್ಷೇತ್ರದಲ್ಲೂ ಮಹಿಳೆಯರು ನಾಮಪತ್ರ ಸಲ್ಲಿಸಿರಲಿಲ್ಲ.

2013ರಲ್ಲಿ ಬೈಂದೂರು ಕ್ಷೇತ್ರದಿಂದ 14 ಮಂದಿ ನಾಮಪತ್ರ ಸಲ್ಲಿಸಿದ್ದು ಒಬ್ಬರು ವಾಪಸ್‌ ಪಡೆದಿದ್ದು, ಉಳಿದವರಲ್ಲಿ 11 ಮಂದಿ ಠೇವಣಿ ಕಳೆದುಕೊಂಡರು. ಕುಂದಾಪುರದಿಂದ 9 ಮಂದಿಯಲ್ಲಿ 1 ನಾಮಪತ್ರ ತಿರಸ್ಕೃತಗೊಂಡಿದ್ದು, ಇಬ್ಬರು ವಾಪಸ್‌ ಪಡೆದಿದ್ದರು. 6 ಮಂದಿಯಲ್ಲಿ ನಾಲ್ವರಿಗೆ ಠೇವಣಿ ಸಿಗಲಿಲ್ಲ. ಉಡುಪಿ ಕ್ಷೇತ್ರದಿಂದ 8 ಮಂದಿಯಲ್ಲಿ ಇಬ್ಬರಿಗಷ್ಟೇ ಠೇವಣಿ ಸಿಕ್ಕಿತ್ತು. ಕಾಪು ಕ್ಷೇತ್ರ ದಿಂದ 13 ನಾಮಪತ್ರದಲ್ಲಿ ಇಬ್ಬರು ವಾಪಸ್‌ ಪಡೆದಿದ್ದರು. ಉಳಿದ 11 ಮಂದಿಯಲ್ಲಿ 9 ಮಂದಿ ಠೇವಣಿ ಗಳಿಸಲಿಲ್ಲ. ಕಾರ್ಕಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ, ಕಣದಲ್ಲಿದ್ದ 9 ಮಂದಿಯಲ್ಲಿ 7 ಮಂದಿ ಠೇವಣಿ ಕಳೆದುಕೊಂಡಿದ್ದರು. ಆಗ ಉಡುಪಿ, ಬೈಂದೂರು ಹಾಗೂ ಕಾರ್ಕಳದಲ್ಲಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.

2018ರಲ್ಲಿ ಬೈಂದೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ 10 ಮಂದಿಯಲ್ಲಿ 1 ತಿರಸ್ಕೃತಗೊಂಡು, ಕಣದಲ್ಲಿದ್ದ 9ರಲ್ಲಿ 7 ಮಂದಿಗೆ ಠೇವಣಿ ಉಳಿಸಿಕೊಳ್ಳಲಿಲ್ಲ. ಕುಂದಾಪುರದಲ್ಲಿ 8 ಮಂದಿ ನಾಮಪತ್ರ ಸಲ್ಲಿಸಿದ್ದರು. 1 ತಿರಸ್ಕೃತಗೊಂಡರೆ, ಇಬ್ಬರು ವಾಪಸ್‌ ಪಡೆದಿದ್ದರು. ಕಣದಲ್ಲಿದ್ದ ಐವರಲ್ಲಿ ಮೂವರು ಠೇವಣಿ ಕಳೆದುಕೊಂಡಿದ್ದರು. ಉಡುಪಿಯಲ್ಲಿ 10 ಮಂದಿಯಲ್ಲಿ ಇಬ್ಬರು ವಾಪಸ್‌ ಪಡೆದಿದ್ದರು. ಉಳಿದವರಲ್ಲಿ 6 ಮಂದಿ ಠೇವಣಿ ಕಳೆದುಕೊಂಡಿದ್ದರು. ಕಾಪು ಕ್ಷೇತ್ರದಿಂದ 5 ಮಂದಿ ನಾಮಪತ್ರ ಸಲ್ಲಿಸಿ, ಕಣದಲ್ಲಿದ್ದರು. ಮೂರವರು ಠೇವಣಿ ಕಳೆದುಕೊಂಡಿದ್ದರು. ಕಾರ್ಕಳದಿಂದ 10 ಮಂದಿ ನಾಮಪತ್ರ ಸಲ್ಲಿಸಿದ್ದು ಇಬ್ಬರದ್ದು ತಿರಸ್ಕೃತಗೊಂಡರೆ, ಒಬ್ಬರು ವಾಸಪ್‌ ಪಡೆದಿದ್ದರು. ಉಳಿದ 7 ಮಂದಿಯಲ್ಲಿ ಐವರಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಕಾಪುವಿನಿಂದ ಓರ್ವ ಮಹಿಳೆ ಅಭ್ಯರ್ಥಿ ಕಣದಲ್ಲಿದ್ದರು.

2013ರಲ್ಲಿ ಮೂವರು ಹಾಗೂ 2018ರಲ್ಲಿ ಓರ್ವ ಮಹಿಳೆ ಪಕ್ಷೇತರ ರರಾಗಿ ಅಂತಿಮ ಕಣದಲ್ಲಿ ದ್ದರು. ಆದರೆ, ಎರಡೂ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯ ವಾಗಿಲ್ಲ. ವಿಶೇಷ ಎಂಬಂತೆ ಮೂರು ಚುನಾವಣೆಯಲ್ಲಿ ಠೇವಣಿ ಉಳಿಸಿಕೊಂಡಿದ್ದ ಮೊದಲೆರೆಡು ಸ್ಥಾನದಲ್ಲಿದ್ದವರು ಮಾತ್ರ. 2013
ರಲ್ಲಿ ಕುಂದಾಪುರದಲ್ಲಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿದ್ದ ಒಬ್ಬರು ಠೇವಣಿ ಕಳೆದುಕೊಂಡಿದ್ದು ಉಂಟು.

  -ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.