ಕೋಸ್ಟಲ್‌ವುಡ್‌ನ‌ಲ್ಲಿ ಇಲ್ಲೊಕ್ಕೆಲ್‌ಗೆ ರೆಡಿ !


Team Udayavani, Mar 21, 2019, 7:07 AM IST

21-march-9.jpg

ತುಳುನಾಡು ಎನ್ನುವುದು ಸಂಸ್ಕೃತಿ, ಆಚಾರ ಮತ್ತು ಕಲೆಗಳ ಬೀಡು. ಆದರೆ ಈಗ ತುಳುನಾಡಿನ ಅನೇಕ ಸಂಪ್ರದಾಯಗಳು ಮತ್ತು ವಸ್ತುಗಳು ನಶಿಸಿ ಹೋಗುತ್ತಿವೆ. ಮುಂದಿನ ಜನಾಂಗಕ್ಕೆ ತುಳುನಾಡಿನ ಸಂಸ್ಕೃತಿ- ಸಂಸ್ಕಾರಗಳನ್ನು ಹೇಳಿಕೊಡುವ, ತೋರಿಸಿಕೊಡುವ ಅನಿವಾರ್ಯತೆಗೆ ನಾವು ಒಳಗಾಗಿದ್ದೇವೆ.  ಅಚ್ಚರಿ ಎಂದರೆ ಮರೆತುಹೋದ ತುಳುನಾಡಿನ ಸಂಸ್ಕೃತಿ- ಸಂಸ್ಕಾರದ ವಿಶೇಷತೆಗಳನ್ನು ನೆನಪು ಮಾಡುವ ನೆಲೆಯಲ್ಲಿ ತುಳುವಿನ ‘ಇಲ್ಲೊಕ್ಕೆಲ್‌’ ಸಿನೆಮಾ ವಿನೂತನ ಸಾಹಸಕ್ಕೆ ಕೈ ಹಾಕಿದೆ.

ನಶಿಸಿ ಹೋಗುತ್ತಿರುವ ತುಳುವರ ಸಂಪ್ರದಾಯ, ವಸ್ತುಗಳ ಬಗ್ಗೆ ಮನಮುಟ್ಟುವಂತೆ ಅದ್ಭುತ ಸಾಹಿತ್ಯ ಮತ್ತು ಸಂಗೀತದೊಂದಿಗೆ ‘ಇಲ್ಲೊಕ್ಕೆಲ್‌’ ಸಿನೆಮಾದಲ್ಲಿ ಹಾಡು ಮೂಡಿಬಂದಿದೆ. ‘ಮುರ್ಕುದು ಪೋಪುಂಡುಯೇ ಮಾತಾ’ ಎಂಬ ಚರಣದ ಈ ಹಾಡು ಸದ್ಯ ತುಳುನಾಡಿನಲ್ಲಿ ವಿನೂತನ ಟ್ರೆಂಡ್‌ ಹುಟ್ಟುಹಾಕಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ವೈರಲ್‌ ಆಗಿದೆ. ನಿಜಕ್ಕೂ ತುಳುನಾಡಿನ ಮರೆತುಹೋದ ಒಂದೊಂದು ನೆನಪುಗಳನ್ನು ಇಂದು ಕಾಡುವಂತೆ ಮಾಡಿದೆ.

ಡಾ| ಸುರೇಶ್‌ ಚಿತ್ರಾಪು ಅವರ ಸಾಹಿತ್ಯಕ್ಕೆ ರಾಜ್‌ ಷಾ ಅವರ ಅದ್ಬುತ ಸಂಗೀತ ಮತ್ತು ಮೈಮ್‌ ರಾಮ್‌ದಾಸ್‌, ಡಾ| ಸುರೇಶ್‌ ಚಿತ್ರಾಪು, ರಾಜ್‌ ಷಾ ಹಾಗೂ ವೇಲು ಅವರ ಸಿರಿಕಂಠದಲ್ಲಿ ಮೂಡಿಬಂದ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಹಾಡಿಗೆ ಶಾನಾಯಿಯಲ್ಲಿ ಬಾಲೇಶ್‌, ಟೇಪ್‌ ಮತ್ತು ಪೆರ್ಕಶ್‌ನಲ್ಲಿ ಡಿ. ವಿಕ್ಕಿ ಮತ್ತು ನವೀನ್‌ ರಾವ್‌, ಮ್ಯಾಂಡೊಲಿನ್‌ನಲ್ಲಿ ಸೀನು, ಕೀಬೋರ್ಡ್‌ನಲ್ಲಿ ರಾಜ್‌ ಷಾ ಕೈಜೋಡಿಸಿದ್ದಾರೆ.

ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ಅದ್ವಿತಿ ಶೆಟ್ಟಿ, ಅಪ್ಪೆ ಟೀಚರ್‌ ಖ್ಯಾತಿಯ ನಿರೀಕ್ಷೆ ಶೆಟ್ಟಿ, ಭವ್ಯಾ ಗೌಡ, ವಿಸ್ಮಯ ವಿನಾಯಕ್‌, ವಿಜೆ ವಿನೀತ್‌, ಪಿಲಿಬೈಲು ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್‌, ಸೀತಾ‌ರಾಮ್‌ ಕಟೀಲು ಮತ್ತು ಇನ್ನೂ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ.

ವಿಶಿಷ್ಟ ಪಾತ್ರದಲ್ಲಿ ಹಾಸ್ಯ ಕಲಾವಿದರಾದ ಕುರಿಬಾಂಡ್‌ ರಂಗ ಅಭಿನಯಿಸಿದ್ದು ಇವರು ಪ್ರಥಮ ಬಾರಿಗೆ ಕೋಸ್ಟಲ್‌ವುಡ್‌ ಗೆ ಕಾಲಿಡುತ್ತಿದ್ದಾರೆ. ಈ ಸಿನೆಮಾವು ಶ್ರೀ ಗಜನಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ತಯಾರಾಗುತ್ತಿದೆ. ಇಲ್ಲ್ ಒಕ್ಕೆಲ್‌ಗೆ ಡಾ| ಸುರೇಶ್‌ ಎಸ್‌. ಕೋಟ್ಯಾನ್‌ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಎಸ್‌. ಚಿತ್ರಾಪು ಮತ್ತು ಡಿ.ಎಂ. ಶೆಟ್ಟಿ ಅವರು ನಿರ್ಮಾಪಕರಾಗಿದ್ದಾರೆ. ಶೀಘ್ರದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

Dandeli ಮತದಾನದ ದಿನವೇ ಗ್ಯಾರೇಜ್ ಸೇರಿದ ಪಿಎಸ್ಐ ವಾಹನ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್‌ ನೀಡುತ್ತಿರಲಿಲ್ಲ

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರದ ಜನರು

Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್‌ ಶೆಟ್ಟರ್‌

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

9-koratagere

Koratagere: ಜೂ.9 ರಂದು ಉಚಿತ ಸಾಮೂಹಿಕ ವಿವಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.