ಮೊದಲ ಪರ್ಯಾಯಕ್ಕೆ 2 ಲಕ್ಷ ರೂಪಾಯಿ ಸಾಲ!


Team Udayavani, Dec 30, 2019, 6:06 AM IST

modala-parya

1950ರ ದಶಕದಲ್ಲಿ ಶ್ರೀಕೃಷ್ಣ ಮಠ – ಅಷ್ಟಮಠಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಪೇಜಾವರ ಶ್ರೀಗಳ ಮಾತಿನಲ್ಲಿ ಅರಿಯಬಹುದು. ಶ್ರೀಪಾದರ ಮೊದಲ ಪರ್ಯಾಯದ ಅವಧಿ 1952-53. ಅದಕ್ಕೂ ಹಿಂದಿನ ವರ್ಷಗಳಲ್ಲಿ ರೇಶನ್‌ ಇತ್ತು. ಅಂದರೆ ಊಟಕ್ಕೆ ಬೇಕಾದ ಅಕ್ಕಿಯ ಸರಬರಾಜು- ವಿತರಣೆಗೂ ನಿಯಂತ್ರಣವಿತ್ತು. ಆಹಾರ ಧಾನ್ಯದ ಪೂರೈಕೆ ಇರಲಿಲ್ಲ.

ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಆ ನಿರ್ಬಂಧ ಹೋಯಿತು. ಆಗ ಈಗಿನಂತೆ ಹೊರಗಿನ ಯಾತ್ರಿಕರು ಬರುತ್ತಿರಲಿಲ್ಲ. ಬಂದವರಿಗೆ ಊಟ ಒದಗಿಸುವುದೇ ಆ ಕಾಲದಲ್ಲಿ ಮಠಕ್ಕೆ ಬಹಳ ದೊಡ್ಡ ಖರ್ಚು. ಊಟಕ್ಕೆ ಬರುವವರಿಗೂ ಹಾಗೆಯೇ, ಒಂದು ಹೊತ್ತಿನ ಊಟ ಮಠದಲ್ಲಿ ಆದರೆ ಉಳಿತಾಯ.

ಆದರೆ ಮಠದ ಆಡಳಿತದ ದೃಷ್ಟಿಯಿಂದ ಇದೊಂದು ಕೇವಲ ಖರ್ಚಿನ ಬಾಬ್ತು ಎಂದಿತ್ತು. ಆಗ ಪರ್ಯಾಯ ಪೀಠವೇರುವ ಮಠದ ಯೋಜನೆಗಳೆಂದರೆ ಕಟ್ಟಡಗಳನ್ನು ಕಟ್ಟುವುದು ಇರಲಿಲ್ಲ. ಯಾತ್ರಿಕರು, ಭಕ್ತರಿಗೆ ಅನ್ನಪ್ರಸಾದ ನೀಡುವುದೇ ದೊಡ್ಡ ಯೋಜನೆ.

ಪ್ರಥಮ ಪರ್ಯಾಯ ಕಾಲದಲ್ಲಿ ಪೇಜಾವರ ಶ್ರೀಗಳು ಆಗುಂಬೆಯಿಂದ ಕಷ್ಟಪಟ್ಟು ಅಕ್ಕಿ ತರಿಸಬೇಕಾಯಿತು. ಪೀಠದಿಂದ ನಿರ್ಗಮಿಸುವಾಗ ಶ್ರೀಮಠಕ್ಕೆ 2 ಲಕ್ಷ ರೂ. ಗಳಷ್ಟು ಸಾಲವಾಯಿತು. ಇದು ಆ ಕಾಲದಲ್ಲಿ ದೊಡ್ಡ ಮೊತ್ತದ ಸಾಲ. ಆಗ ಮಠಗಳ ಮೇಲೆ ಸರಕಾರದ್ದೂ ನಿಯಂತ್ರಣವಿತ್ತು.

ಈಗ ಯಾತ್ರಿಕರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವು ಬಾರಿ 25 ಸಾವಿರ ಜನರು ಊಟ ಮಾಡುವುದಿದೆ. ಈಗ ಸಾಲ ಇಲ್ಲ. ಬಂದ ಹಣ ಅಲ್ಲಿಂದಲ್ಲಿಗೆ ಸರಿಯಾಗುತ್ತದೆ. ಸಾಲ ಮಾಡಬೇಕಾದ ಪರಿಸ್ಥಿತಿ ಇಲ್ಲ. ಶ್ರೀಕೃಷ್ಣ ಮಠಕ್ಕೆ ಬಂದ ಹಣದಿಂದಲೇ ಮೂಲ ಸೌಕರ್ಯ, ಅಭಿವೃದ್ಧಿಗಳನ್ನು ಮಾಡಬಹುದಾಗಿದೆ.

ಇದೇ ವೇಳೆಗೆ ಆಗಿನ ಆಸ್ತಿಪಾಸ್ತಿ ಈಗ ಯಾವುದೂ ಇಲ್ಲ. ಆಗ ಒಂದೊಂದು ಮಠಕ್ಕೆ ಮೂರ್‍ನಾಲ್ಕು ಸಾವಿರ ಅಕ್ಕಿ ಮುಡಿ ಬರುವಷ್ಟು ಆಸ್ತಿಗಳಿದ್ದವು. ಈಗ ಇವು ಯಾವುದೂ ಇಲ್ಲ. ಆಗ ಅಕ್ಕಿಯ ಸಾಮರ್ಥ್ಯವಿದ್ದರೂ ಅದಕ್ಕೆ ಪೂರಕವಾಗಿ ಬೇಕಾದ ಹಣಕಾಸು ಸಾಮರ್ಥ್ಯವಿರಲಿಲ್ಲ.

ಆಗ ಪೇಜಾವರ ಮಠಕ್ಕೆ 3,000 ಅಕ್ಕಿ ಮುಡಿ ಬರುತ್ತಿತ್ತು. ಆಗ ಸೇವೆ ಈಗಿನಂತೆ ಬರುತ್ತಿರಲಿಲ್ಲ. 3,000 ಅಕ್ಕಿ ಮುಡಿಯಿಂದ ಪೇಜಾವರ ಮಠದ ಖರ್ಚು ನಡೆಯುತ್ತಿತ್ತೇ ವಿನಾ ಶ್ರೀಕೃಷ್ಣಮಠದ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಸಾಲ ಮಾಡಬೇಕಾಗುತ್ತಿತ್ತು ಎಂದು ಶ್ರೀಗಳು ಹೇಳುತ್ತಿದ್ದರು.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.