ಗಾಳಿಪಟ ಹಾರಾಟಕ್ಕೆನಿಬಂಧನೆಗಳೇ ಅಡ್ಡಿ!


Team Udayavani, Aug 21, 2020, 8:14 PM IST

ಗಾಳಿಪಟ ಹಾರಾಟಕ್ಕೆನಿಬಂಧನೆಗಳೇ ಅಡ್ಡಿ!

“ಈ “ಗಾಳಿಪಟ-2′ ಶೂಟಿಂಗ್‌ ಶೇಕಡಾ 55ರಷ್ಟು ಕಂಪ್ಲೀಟ್‌ ಆಗಿದೆ. ಎಲ್ಲ ಅಂದುಕೊಂಡಂಗೆ ಆಗಿದ್ರೆ ಇಷ್ಟೊತ್ತಿಗಾಗಲೇ ಶೂಟಿಂಗ್‌ ಮುಗಿದಿರಬೇಕಾಗಿತ್ತು. ಆದ್ರೆ ಇದ್ದಕ್ಕಿದ್ದಂತೆ ಬಂದ ಕೊರೊನಾ ಸದ್ಯಕ್ಕೆ ಎಲ್ಲರನ್ನೂ ಸೈಲೆಂಟ್‌ ಆಗಿರುವಂತೆ ಮಾಡಿದೆ. ಜಗತ್ತಿನಲ್ಲಿ ಕೋವಿಡ್ ಬಗ್ಗೆ ದಿನಕ್ಕೊಂದು ಸುದ್ದಿ ಬರ್ತಾ ಇದೆ.

ಹೀಗಿರುವಾಗ ಮತ್ತೆ ಯಾವಾಗ ಶೂಟಿಂಗ್‌ ಶುರು ಮಾಡೋದು, ಯಾವಾಗ ಮುಗಿಸೋದು ಅಂಥ ಏನೂ ಹೇಳ್ಳೋಕಾಗೊಲ್ಲ. ಸದ್ಯದ ಮಟ್ಟಿಗೆ ಏನಾಗ್ತಿದೆ ಅಂಥ ನೋಡ್ಕೊಂಡು ಸುಮ್ನೆ ಕೂರೂದು ಬಿಟ್ಟು ಬೇರೆ ಏನೂ ಮಾಡೋಕಾಗೊಲ್ಲ…’ – ಹೀಗೆ ಹೇಳುತ್ತ ಒಂದು ಕ್ಷಣ ಮೌನವಾದರು ನಿರ್ದೇಶಕ ಯೋಗರಾಜ್‌ ಭಟ್‌. ಹೌದು, ಯೋಗರಾಜ್‌ ಭಟ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬಿನೇಶನ್‌ನ “ಗಾಳಿಪಟ-2′ ಚಿತ್ರ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು, ಶೂಟಿಂಗ್‌ ಆರಂಭಿಸಿತ್ತು. ಚಿತ್ರದ ಅರ್ಧ ಭಾಗ ಶೂಟಿಂಗ್‌ ಮುಗಿಯುತ್ತಿರುವಾಗಲೇ ಕೋವಿಡ್ ಅಬ್ಬರ ಶುರುವಾಗಿದ್ದರಿಂದ ಯೋಗರಾಜ್‌ ಭಟ್‌ ಆ್ಯಂಡ್‌ ಟೀಮ್‌ ಕೆಲಕಾಲ ಗಾಳಿಪಟ ಹಾರಿಸುವ ಕೆಲಸಕ್ಕೆ ಬ್ರೇಕ್‌ ಹಾಕಿತ್ತು. ಆದರೆ ಆ ಬ್ರೇಕ್‌ ಎಷ್ಟು ದಿನಗಳ ಮಟ್ಟಿಗೆ ಮುಂದುವರೆಯುತ್ತದೆ ಅನ್ನೋದಕ್ಕೆ ಸದ್ಯದ ಮಟ್ಟಿಗಂತೂ ಭಟ್ಟರ ಬಳಿಯೂ ಉತ್ತರವಿಲ್ಲ. ಈಗಾಗಲೇ ನಿಧಾನವಾಗಿ ಚಿತ್ರರಂಗದ ಚಟುವಟಿಕೆಗಳು ರೀ-ಸ್ಟಾರ್ಟ್‌ ಆಗುತ್ತಿದ್ದರೂ, ಎಲ್ಲವೂ ಕೋವಿಡ್  ಭಯ ಮತ್ತು ಆತಂಕದ ನಡುವೆಯೇ ನಡೆಯುತ್ತಿದೆ.

ಸರ್ಕಾರದ ಕೆಲ ಮಾರ್ಗದರ್ಶಿ ಸೂತ್ರಗಳು ಶೂಟಿಂಗ್‌ ವೇಳೆ ಕೆಲವೊಮ್ಮೆ ಕಿರಿಕಿರಿಯೆನಿಸಿದರೂ, ಶೂಟಿಂಗ್‌ ಮಾಡಲೇಬೇಕು ಎಂದಾದರೆ, ಅನಿವಾರ್ಯವಾಗಿ ಅದೆಲ್ಲವನ್ನೂ ಫಾಲೋ ಮಾಡಲೇಬೇಕು. ಹೀಗಿರುವಾಗ ಇಂಥ ವಾತಾವರಣದಲ್ಲಿ ಈಗಲೇ ಶೂಟಿಂಗ್‌ ಮಾಡಬೇಕೆ? ಬೇಡವೇ ಎಂಬ ಗೊಂದಲ ಯೋಗರಾಜ್‌ ಭಟ್ಟರನ್ನೂ ಕಾಡುತ್ತಿದೆ.

ಈ ಬಗ್ಗೆ ಭಟ್ಟರು ಬೇರೆಯ ವಾದವನ್ನೇ ಮುಂದಿಡುತ್ತಾರೆ. “ಸರ್ಕಾರ ಏನೋ ಒಂದಷ್ಟು ಗೈಡ್‌ಲೈನ್‌ ಕೊಟ್ಟು ಶೂಟಿಂಗ್‌ ಮಾಡೋದಕ್ಕೆ ಅನುಮತಿ ಕೊಟ್ಟರೂ, ಇಂಥ ಪರಿಸ್ಥಿತಿಯಲ್ಲಿ ರಿಸ್ಕ್ ತೆಗೆದುಕೊಂಡು ಶೂಟಿಂಗ್‌ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಸಿನಿಮಾ ಶೂಟಿಂಗ್‌ ಅಂದ್ರೆ, ಅಲ್ಲಿ ನೂರಾರು ಜನ ಇರ್ತಾರೆ. ಒಬ್ಬೊಬ್ಬರು ಒಂದೊಂದು ಕೆಲಸ ಮಾಡ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಟುಂಬ ಇರುತ್ತೆ. ಜೀವನ ಇರುತ್ತೆ. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಶೂಟಿಂಗ್‌ ಮಾಡಬೇಕಾಗುತ್ತೆ. ಸ್ವಲ್ಪ ಹೆಚ್ಚು-ಕಮ್ಮಿಯಾದ್ರೂ ಅದಕ್ಕೆ ಎಲ್ರೂ ಹೊಣೆಗಾರರಾಗಬೇಕಾಗುತ್ತೆ. ಹೀಗಿರುವಾಗ, ಇಷ್ಟೇ ಸಮಯ ಕಳೆದಿದೆ.

ಇವೆಲ್ಲವೂ ಬಗೆಹರಿಯಲಿದೆ ಅನ್ನೋ ಭರವಸೆಯಿದೆ. ಇನ್ನೂ ಸ್ವಲ್ಪ ಸಮಯ ಸುಮ್ಮನಿದ್ದು ಎಲ್ಲವನ್ನೂ ನೋಡೋಣ’ ಎನ್ನುತ್ತಾರೆ ಭಟ್ಟರು. ಇನ್ನು ಯೋಗರಾಜ್‌ ಭಟ್‌ ನೀಡುವ ಮಾಹಿತಿಯಂತೆ, “ಗಾಳಿಪಟ-2′ ಚಿತ್ರದ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲಿ ನಡೆಯುವ ಚಿತ್ರೀಕರಣ ಪೂರ್ಣವಾಗಿದೆ. ಪ್ಲಾನ್‌ ಪ್ರಕಾರ ವಿದೇಶದಲ್ಲಿ ಮಾಡಬೇಕಾಗಿರುವ ಚಿತ್ರೀಕರಣ ಮಾತ್ರ ಬಾಕಿಯಿದೆ. ಆದರೆ, ಸದ್ಯದ ಮಟ್ಟಿಗೆ ವಿದೇಶ ಹಾರಾಟಕ್ಕೆ ನಿಬಂಧನೆಗಳಿರುವುದರಿಂದ, ಅದೆಲ್ಲವೂ ತೆರವಾಗುವವರೆಗೆ ಗಾಳಿಪಟ ಹಾರಿ ಸುವಂ ತಿಲ್ಲ ಎಂದು ಸೂಚ್ಯವಾಗಿ ಹೇಳುತ್ತಾರೆ ಭಟ್ಟರು.

“ಎಲ್ಲದಕ್ಕೂ ಒಂದು ಫ‌ುಲ್‌ಸ್ಟಾಪ್‌ ಅಂತಿರುತ್ತದೆ. ಹಾಗೇ ಕೊರೊನಾಕ್ಕೂ ಒಂದು ಫ‌ುಲ್‌ಸ್ಟಾಪ್‌ ಇದ್ದೇ ಇದೆ. ವ್ಯಾಕ್ಸಿನೇಶನ್‌ ಬರುತ್ತಿದ್ದಂತೆ, ಕೊರೊನಾಕ್ಕೆ ತೆರೆ ಬೀಳಲಿದೆ. ಕೋವಿಡ್ ಅಬ್ಬರ, ಆತಂಕ ಕಡಿಮೆಯಾಗ್ತಿದೆ. ಹೇಗೂ, ಇಷ್ಟು ದಿನ ಶಾಂತಿಯಿಂದ ಇದ್ದೀವಿ. ಇನ್ನೂ ಸ್ವಲ್ಪ ದಿನ ಹೀಗೆ ಇರೋಣ. ಜೀವನ – ಜಗತ್ತು ಯಾವತ್ತೂ ಹೀಗೆ ಇರಲ್ಲ, ನಿಂತಲ್ಲೇ ನಿಲ್ಲೋದಿಲ್ಲ. ಅದು ಏನೂ ಮಾಡ್ಬೇಕೋ ಹಾಗೇ ಮಾಡುತ್ತದೆ. ಅಲ್ಲಿವರೆಗಾದ್ರೂ ನಾವು ಸ್ವಲ್ಪ ಶಾಂತಿಯಿಂದ ಇರೋಣ’ ಎಂದು ಶಾಂತಿ ಮಂತ್ರ ಜಪಿಸುತ್ತಾರೆ ಭಟ್ಟರು.­

ರಮೇಶ್‌ ರೆಡ್ಡಿ ನಿರ್ಮಾಣ : “ಗಾಳಿಪಟ-2′ ಚಿತ್ರವನ್ನು ರಮೇಶ್‌ ರೆಡ್ಡಿ ತಮ್ಮ ಸೂರಜ್‌ ಪ್ರೊಡಕ್ಷನ್ಸ್‌ನಡಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ರಮೇಶ್‌ ರೆಡ್ಡಿ ತಮ್ಮ ಪ್ರೊಡಕ್ಷನ್ಸ್‌ನಡಿ “ಉಪ್ಪು ಹುಳಿ ಖಾರ’, “ಪಡ್ಡೆಹುಲಿ’, “100′ ಸಿನಿಮಾಗಳನ್ನು
ನಿರ್ಮಿಸಿದ್ದಾರೆ. ಅವರ ನಿರ್ಮಾಣದ “100′ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ರಮೇಶ್‌ ರೆಡ್ಡಿಯವರು ನಿರ್ಮಾಪಕ ರಾಗಿ ಬಂದಿದ್ದಾರೆ.

 

– ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.