Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 


Team Udayavani, Apr 10, 2024, 7:30 AM IST

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

ಚಾರಿತ್ರಿಕವಾಗಿ, ಐತಿಹಾಸಿಕವಾಗಿ, ಭೌಗೋಳಿಕವಾಗಿ ಒಂದಲ್ಲ ಒಂದು ವಿಶೇಷತೆ ಹೊಂದಿರುವ ಹಲವು ಜಿಲ್ಲೆಗಳಲ್ಲಿ ಕೊಪ್ಪಳವೂ ಒಂದು. ಈ ಜಿಲ್ಲೆಯ ಗಂಗಾವತಿ ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಹಿರೇಬೆಣಕಲ್‌ ಗ್ರಾಮದ ಸರಹದ್ದಿನ ಬೆಟ್ಟ ಸಾಲುಗಳಲ್ಲಿ, ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ಮೊರ್ಯಾರ್‌ ಮನೆಗಳನ್ನು ಕಾಣಬಹುದು. ಆ ಸ್ಥಳವನ್ನು ಸ್ಥಳೀಯರು ಮೊರ್ಯಾರ್‌ ಬೆಟ್ಟ ಎಂದೇ ಕರೆಯುವುದುಂಟು. ಮೊರ್ಯಾರ್‌ ಮನೆಗಳನ್ನು ನೋಡಬೇಕೆಂದರೆ 2 ಬೆಟ್ಟ ಹತ್ತಿ ಇಳಿದು ಸಾಗಬೇಕಾಗುತ್ತದೆ. ಅಷ್ಟೇನೂ ಪ್ರಯಾಸದಾಯಕವಲ್ಲದ, ಅಂದಾಜು 1.5/2 ಕಿ.ಮೀ. ಚಾರಣ ಮಾಡಿದರೆ, ಬೆಟ್ಟದ ಮೇಲೆ ಸಮತಟ್ಟಾದ ವಿಶಾಲ ಪ್ರದೇಶ ತೆರೆದುಕೊಳ್ಳುತ್ತದೆ. ಅಲ್ಲಿ ಸುಮಾರು 400ರವರೆಗೆ ಚಿಕ್ಕ ಚಿಕ್ಕ 2, 3 ಅಡಿ ಎತ್ತರದಿಂದ ಹಿಡಿದು 7, 8 ಅಡಿ ಎತ್ತರದಷ್ಟು ಯಾವುದೇ ಥರದ ಗಾರೆ ಬಳಸದೆ, ಗ್ರಾನೈಟ್‌ ಕಲ್ಲುಗಳನ್ನು ಚಪ್ಪಟೆ ಆಕಾರದಲ್ಲಿ ಕತ್ತರಿಸಿ ನಾಲ್ಕು ಗೋಡೆಗಳು ಮತ್ತು ವೃತ್ತಾಕಾರದಲ್ಲಿ ಕತ್ತರಿಸಿದ ಮೇಲ್ಛಾವಣಿಯಿರುವ ಚಿಕ್ಕ ಕೋಣೆಯಾಕಾರದ ರಚನೆಗಳನ್ನು ಕಾಣಬಹುದು.

3000 ವರ್ಷ ಹಿಂದಿನವು!:

ಹಿರೇಬೆಣಕಲ್‌ನ ಮೊರ್ಯಾರ್‌ ಮನೆಗಳು ಸುಮಾರು 3000 ವರ್ಷಗಳ ಹಿಂದೆ ನಿರ್ಮಿಸಲಾದ ಪ್ರಾಗೈತಿಹಾಸಿಕ ಮಹಾಶಿಲಾ ಸ್ಮಾರಕಗಳ ತಾಣ. ಶಿಲಾಯುಗದಲ್ಲಿ ನಮ್ಮ ಪೂರ್ವಜರು ಅಲೆದಾಡಿದ್ದ ಈ ನೆಲ, ಅಲ್ಲಿನ ಆ ರಚನೆಗಳು ಇಂದಿಗೂ ನಮಗೆ ನೋಡಲಿಕ್ಕೆ ಉಳಿದಿದ್ದು ನಮ್ಮ ಅದೃಷ್ಟವೆಂದು ಭಾವಿಸಬಹುದು. ಈ ರಚನೆಗಳನ್ನು ಸ್ಥಳೀಯರು ಮೊರ್ಯಾರ್‌ ಮನೆಗಳೆಂದು ಕರೆಯುತ್ತಾರೆ. ಆದರೆ, ಅವು ಮನೆಗಳಾಗಿರದೆ ನವ ಶಿಲಾಯುಗದ ಮಧ್ಯದಲ್ಲಿ ಜೀವಿಸಿದ್ದ ಜನರ ಗೋರಿಗಳ ರಚನೆಗಳಾಗಿವೆ  ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಬೆಟ್ಟದ ಅಡಿಯಿಂದ ಕಾಲ್ನಡಿಗೆಯಲ್ಲಿ ಹೊರಟು ಮೇಲೆ ಸ್ಮಾರಕಗಳು ಇರುವ ಸ್ಥಳಕ್ಕೆ ತಲುಪುವವರೆಗೆ ದಾರಿಯುದ್ದಕ್ಕೂ ಅತ್ಯಾಕರ್ಷಕ ಬಂಡೆಗಳು, ಗುಹೆಗಳು ಮತ್ತು ಚಾಚಿದ ಬಂಡೆಗಳ ಆಶ್ರಯಗಳನ್ನು ಕಾಣಬಹುದು. ಅಂತಹ ಕೆಲವು ಬಂಡೆಗಳಲ್ಲಿ ಶಿಲಾಯುಗದ ಜನರು ರಚಿಸಿದ ಸುಂದರ ವರ್ಣಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು..

ಬೆಟ್ಟದ ಮೇಲುಂಟು ದೊಡ್ಡ ಕೆರೆ!

ಮೊರ್ಯಾರ್‌ ಬೆಟ್ಟದಲ್ಲಿ ಮೊರ್ಯಾರ್‌ ಮನೆಗಳನ್ನು ನೋಡಿ ಅಶ್ಚರ್ಯಪಡುವುದು ಒಂದಾದರೆ, ಆ ಬೆಟ್ಟದ ತುಂಬೆಲ್ಲಾ ಹರಡಿಕೊಂಡಿರುವ ಮರಳು ಕಲ್ಲುಗಳು ಮತ್ತು ಗ್ರಾನೈಟಿನ ಬೃಹತ್‌ ಬಂಡೆಗಳ ಚಿತ್ರ-ವಿಚಿತ್ರ ರಚನೆಗಳದ್ದೇ ಮತ್ತೂಂದು ಬಗೆಯ ಕಣ್ಣು ಸೆಳೆಯುವ ಸೌಂದರ್ಯ. ಬೆಟ್ಟದ ಮೇಲೆ ವಿಶಾಲವಾದ ಕೆರೆಯೂ ಇರುವುದು ಮತ್ತೂಂದು ಆಶ್ಚರ್ಯ. ಮಳೆಗಾಲದಲ್ಲಿ ಹರಿಯುವ ತೊರೆಗಳು, ಹಳ್ಳಕೊಳ್ಳಗಳು, ಬೆಟ್ಟದ ತುಂಬೆಲ್ಲಾ ಇವೆ. ಮೂರ್ನಾಲ್ಕು ತಾಸು ಸುತ್ತಾಡುವಷ್ಟು ಸಮಯ ಹೊಂದಿಸಿಕೊಂಡು ಹೋದರೆ ಸದಾ ನೆನಪಲ್ಲಿ ಉಳಿಯುವಂತಹ ಒಂದೊಳ್ಳೆ ಗತಕಾಲದ ವಿಶಿಷ್ಟ ಸ್ಥಳದ ಪರಿಚಯವಾಗುವದಂತೂ ಸುಳ್ಳಲ್ಲ. ಈ ಮೊರ್ಯಾರ್‌ ಗುಡ್ಡ, ವಿಶ್ವದ ಅತ್ಯಂತ ಹಳೆಯ ಮೆಗಾಲಿಥಿಕ್‌-ಬೃಹತ್‌ ಶಿಲಾ ಸ್ಮಾರಕಗಳ ತಾಣಗಳಲ್ಲಿ ಒಂದು ಎನ್ನುವುದು ಸಂಶೋಧಕರ ಅಭಿಪ್ರಾಯ.

ಚಾರಣಕ್ಕೆ ಒಳ್ಳೆಯ ತಾಣ:

ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ ಇರುವ ಈ ತಾಣದ ಕೆಲ ಮಾಹಿತಿಯನ್ನು ಹಾಗೂ ಸಾಗುವ ಮಾರ್ಗಸೂಚಿಯನ್ನು ಬೋರ್ಡ್‌ಗಳಲ್ಲಿ ಬರೆದು ಹಾಕಿದ್ದಾರೆ. ಬೆಟ್ಟದ ಕೆಳಗೆ ಚಾರಣ ಆರಂಭಕ್ಕೂ ಮೊದಲೇ ಎಲ್ಲವನ್ನೂ ವಿವರವಾಗಿ ಓದಿಕೊಂಡು ಚಾರಣ ಆರಂಭಿಸಬಹುದಾಗಿದೆ. ಚಾರಣದ ಹಾದಿ ಕುರಿತು ಗೊಂದಲವಾಗದಂತೆ ದಾರಿಯುದ್ದಕ್ಕೂ ಬಂಡೆಕಲ್ಲುಗಳ ಮೇಲೆ ಬಣ್ಣದ ಬಾಣದ ಗುರುತುಗಳನ್ನು ಹಾಕಿದ್ದಾರೆ. ಮ್ಯಾಪ್‌ನಲ್ಲಿ ತೋರಿಸಿರುವ ಹಾದಿಯಲ್ಲಿ ಸಾಗಿದಂತೆ ರಾಕ್‌ ಆರ್ಟ್‌, ಬೃಹತ್‌ ಶಿಲಾ ರಚನೆಗಳು ಕಾಣಸಿಗುತ್ತವೆ.

ದ್ವಿತೀಯ ಸಮಾಧಿಗಳು! :

ಸತ್ತವರನ್ನು ಹೂಳುವ ಸ್ಥಳವನ್ನು ವಾಸಿಸುವ ಸ್ಥಳದಿಂದ ದೂರದಲ್ಲಿ ಕಟ್ಟುವ ಪದ್ಧತಿ ಶುರುವಾಗಿರಬಹುದಾದ ಕಾಲವದು. ಸತ್ತವರ ದೇಹವನ್ನು ಮಣ್ಣು ಮಾಡಿ ಕೆಲ ತಿಂಗಳುಗಳ ಬಳಿಕ ಮತ್ತೆ ಸಮಾಧಿ ಅಗೆದು ಕೆಲವು ಅಸ್ತಿಗಳನ್ನಷ್ಟೇ ಹೊರತೆಗೆದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಬೃಹತ್‌ ಶಿಲೆಗಳಿಂದ ಕಟ್ಟಿದ ಕೋಣೆಯಾಕಾರದ ಸ್ಮಾರಕಗಳಲ್ಲಿ ಇರಿಸುತ್ತಿದ್ದುದ್ದರಿಂದ ಈ ಸ್ಮಾರಕಗಳನ್ನು ದ್ವಿತೀಯ ಸಮಾಧಿಗಳೆಂದೂ ಗುರುತಿಸುತ್ತಾರೆ. ಕಾಲದ ಹೊಡೆತದಿಂದ ಮತ್ತು ನಿಧಿ ಇರಬಹುದೆಂಬ ಮಾನವರ ದುರಾಸೆಗೆ ಕೆಲವು ಸಮಾಧಿ ಹಾಳಾಗಿದ್ದು, ಈಗ ಅಲ್ಲಿ ಯಾವುದೇ ಅಸ್ತಿಗಳು ಕಾಣಸಿಗದೆ ಬರಿ ಖಾಲಿ ಕೋಣೆಗಳು ಇವೆ. ಕೆಲವು ಸಮಾಧಿಗಳನ್ನು ಈಗಲೂ ಬೆಟ್ಟದಲ್ಲಿ ಸ್ವಲ್ಪ ದೂರದಲ್ಲಿ ಕಾಣಬಹುದಾಗಿದೆ. ಇವು ಶಿಲಾಯುಗದ ಬುಡಕಟ್ಟು ಜನರ ನಂಬಿಕೆ ಮತ್ತು ವಿಶಿಷ್ಟ ಸಂಪ್ರದಾಯದ ಕುರುಹಗಳಾಗಿ ಇಂದಿಗೂ ಉಳಿದುಕೊಂಡಿವೆ.

-ಪ್ರಕಾಶ ಡಂಗಿ, ಬಾಗಲಕೋಟೆ

ಟಾಪ್ ನ್ಯೂಸ್

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.