Intimate Talk: ಶ್ರೇಷ್ಠ ನಾಟಕಗಳನ್ನು ಪ್ರದರ್ಶಿಸಿದ ಹೆಮ್ಮೆ ಇದೆ…


Team Udayavani, Sep 10, 2023, 11:44 AM IST

Intimate Talk: ಶ್ರೇಷ್ಠ ನಾಟಕಗಳನ್ನು ಪ್ರದರ್ಶಿಸಿದ ಹೆಮ್ಮೆ ಇದೆ…

ಚಾಮರಾಜನಗರದ “ಶಾಂತಲಾ ಕಲಾವಿದರು’ ಹವ್ಯಾಸಿ ರಂಗತಂಡಕ್ಕೆ ಈಗ ಸುವರ್ಣ ವರ್ಷದ ಸಂಭ್ರಮ. ಕಳೆದ 50 ವರ್ಷಗಳಲ್ಲಿ ನಿರಂತರವಾಗಿ ರಂಗಚಟುವಟಿಕೆ ನಡೆಸಿಕೊಂಡು ಬಂದದ್ದು ಈ ತಂಡದ ಹೆಗ್ಗಳಿಕೆ. ಈ ಅವಧಿಯಲ್ಲಿ ಮಾಡಿದ ಸಾಹಸ, ಎದುರಿಸಿದ ಸವಾಲು, ತಲುಪಿದ ಗುರಿ, ಭವಿಷ್ಯದ ಗುರಿ- ಮುಂತಾದ ಸಂಗತಿಗಳ ಬಗ್ಗೆ ಆಪ್ತ ಮಾತುಕತೆ…

1 “ಶಾಂತಲಾ ಕಲಾವಿದರು’ ತಂಡ ಆರಂಭವಾಗಿದ್ದು ಯಾವಾಗ ಮತ್ತೆ ಯಾಕೆ?
ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ನಾವೆಲ್ಲ ನಾಟಕಗಳನ್ನು ಮಾಡ್ತಾ ಇದ್ವಿ. ಕಾಲೇಜು ಮುಗಿದ ಮೇಲೂ ಹವ್ಯಾಸಕ್ಕಾಗಿ ನಾಟಕಗಳನ್ನ ಮಾಡ್ತಾ ಇದ್ವಿ. ಮುಂದೆ ನಾವೇಕೆ ಒಂದು ತಂಡ ಕಟ್ಟಬಾರದು ಅಂತ ಯೋಚನೆ ಬಂದು “ಶಾಂತಲಾ ಹವ್ಯಾಸಿ ಕಲಾವಿದರು’ ಅನ್ನೋ ತಂಡ ಕಟ್ಟಿದ್ವಿ. ಮೈಸೂರಿನ “ಸಮತೆಂತೋ’ ನಮಗೆ ಪ್ರೇರಣೆ. ನಾವೂ ಅವರಂತೆಯೇ ನಾಟಕ ಮಾಡಬೇಕೆಂಬ ಒತ್ತಾಸೆ ಮೂಡಿತು. ಆಗ ಟಿ. ಎನ್‌. ಸೀತಾರಾಂ ಅವರ “ಬದುಕ ಮನ್ನಿಸು ಪ್ರಭುವೇ’ ಮತ್ತು ಲಂಕೇಶರ “ಗಿಳಿಯು ಪಂಜರದೊಳಿಲ್ಲ’ ನಾಟಕಗಳನ್ನು 1973ರ ಅಕ್ಟೋಬರ್‌ 10ರಂದು ಚಾಮರಾಜನಗರದ ಗುರುನಂಜ ಶೆಟ್ಟರ ಛತ್ರದಲ್ಲಿ ಪ್ರಯೋಗಿಸಿದೆವು. ಆ ಸ್ಥಳದಲ್ಲಿ ಟಿ. ಪಿ. ಕೈಲಾಸಂ ಕೂಡ ನಮಗೂ ಮೊದಲು ನಾಟಕ ಮಾಡಿದ್ದರು!

2. ಬೆಂಗಳೂರು, ಮೈಸೂರು, ಧಾರವಾಡದಂತಹ ಕಡೆಗಳಲ್ಲೇ ಹವ್ಯಾಸಿ ತಂಡಗಳನ್ನು ಮುನ್ನಡೆಸುವುದು ಕಷ್ಟ. ಹೀಗಿರುವಾಗ ಚಾಮರಾಜನಗರದಂಥ ಪಟ್ಟಣದಲ್ಲಿ ತಂಡವನ್ನು ಬೆಳೆಸಲು ಹೇಗೆ ಸಾಧ್ಯವಾಯ್ತು?

ನಾವು ಹವ್ಯಾಸಿ ತಂಡ ಶುರು ಮಾಡಿದಾಗ ಕೆಲವು ನಿಬಂಧನೆಗಳನ್ನು ಹಾಕೊಂಡಿದ್ವಿ. ನಾವು ನಾಟಕ ಮಾಡಬೇಕು. ಅದನ್ನು ತಯಾರಿಸಲು ಆದ ಖರ್ಚನ್ನು ಟಿಕೆಟ್‌ ಕಲೆಕ್ಷನ್‌ನ ಹಣದಿಂದ ಭರಿಸಬೇಕು. ಯಾವುದೇ ಕಾರಣಕ್ಕೂ ದುಡ್ಡು ನಮ್ಮಲ್ಲಿ ಉಳಿಬಾರದು ಅನ್ನೋ ನಿಬಂಧನೆಗಳನ್ನು ಹಾಕಿಕೊಂಡು ಕೆಲಸ ಶುರು ಮಾಡಿದ್ವಿ. ಬಹಳ ವರ್ಷ ಆ ನಿಯಮಗಳನ್ನ ಪಾಲಿಸಿಕೊಂಡು ಬಂದ್ವಿ. ನಮ್ಮ ತಂಡದ ಗೆಳೆಯರ ಉತ್ಸಾಹ, ತಂಡ ಬೆಳೆಸಲು ಕಾರಣ. ಅಭಿರುಚಿ ಚಂದ್ರು, ಎ. ಡಿಸಿಲ್ವ, ಶ್ರೀನಿವಾಸ ರಂಗನ್‌, ಟಿ. ವಾಸನ್‌ ಮತ್ತು ಕುಮಾರ ಆರಾಧ್ಯರ ಸಹಕಾರದಿಂದ “ಶಾಂತಲಾ ಕಲಾವಿದರು’ ಸ್ಥಾಪನೆಯಾಗಿ ಬೆಳೆಯಿತು.

3. “ಶಾಂತಲಾ ಕಲಾವಿದರು’ ತಂಡ, ಚಾಮರಾಜನಗರದಂಥ ಪಟ್ಟಣಕ್ಕೆ ಇನ್ನಿತರ ತಂಡಗಳನ್ನು ಕರೆಸಿ ನಾಟಕ ಪ್ರದರ್ಶಿಸಿದ್ದು ಇನ್ನೊಂದು ಪ್ರಮುಖ ಕೆಲಸ. ಅದರ ಬಗ್ಗೆ ಹೇಳಿ.

ಮಂಡ್ಯ ರಮೇಶ್‌, ಏಣಗಿ ನಟರಾಜ್‌, ಕೃಷ್ಣಕುಮಾರ್‌ ನಾರ್ಣಕಜೆ, ಲಕ್ಷ್ಮೀ ಕಬ್ಬೇರಳ್ಳಿ, ಸರೋಜಾ ಹೆಗಡೆ ಮುಂತಾದ ಕಲಾವಿದರು “ತಿರುಗಾಟ’ದ ಸಮಯದಲ್ಲಿ ನಮ್ಮಲ್ಲಿಗೆ ಬಂದು ನಾಟಕ ಮಾಡಿದ್ರು. “ನೀನಾಸಂ ತಿರುಗಾಟ’, “ಚಿಣ್ಣ ಬಣ್ಣ’, “ಪ್ರೊಥಿಯು’, “ಪ್ರಯಾಣ’, “ಜನಮನದಾಟ’, “ಆಟ ಮಾಟ’, ಬೆಂಗಳೂರಿನ “ವಾಸ್‌³ ಥಿಯೇಟರ್‌’, “ಅದಮ್ಯ ರಂಗ’, ಹೀಗೆ ಹಲವಾರು ತಂಡಗಳು ಚಾಮರಾಜನಗರಕ್ಕೆ ಬಂದು ನಾಟಕ ಪ್ರದರ್ಶನಗಳನ್ನ ನೀಡಿವೆ. ಮಕ್ಕಳ ನಾಟಕ ಕಾರ್ಯಾಗಾರ ನಡೆಸಿದ್ದೇವೆ. ನೀನಾಸಮ್‌ ತಿರುಗಾಟ, ಪೊ›ಥಿಯೂ ತಿಪಟೂರು ಮುಂತಾದ ತಂಡಗಳಿಗೆ, ಆತಿಥೇಯರಾದ ನಾವು ಹಣ ಉಳಿಸುವ ಸಲುವಾಗಿ, ಮನೆಯಲ್ಲಿಯೇ ಅಡುಗೆ ಮಾಡಿಕೊಟ್ಟೆವು. ಅದು ಖರ್ಚು ಉಳಿಸಿತು. ಕೆಲವು ಸಮಯ ತಂಡಕ್ಕೆ ಖರ್ಚೇ ಬೀಳಲಿಲ್ಲ ! ಜೊತೆಗೆ, ಈ ತಂಡದ ಕಲಾವಿದರು- ಸಂಸ್ಥೆಗಳೊಡನೆ ಸ್ನೇಹ ವೃದ್ಧಿಸಿತು.

4. ಯಾವುದೇ ರಂಗತಂಡಕ್ಕೆ ಸ್ತ್ರೀ ಪಾತ್ರಗಳಿಗೆ ನಟಿಯರನ್ನು ಹುಡುಕುವುದು/ಒಪ್ಪಿಸುವುದು ಬಲು ಕಷ್ಟ. ಈ ಸವಾಲನ್ನು ಹೇಗೆ ನಿಭಾಯಿಸಿದಿರಿ?
ನಾವು ಕಾಲೇಜಿನಲ್ಲಿ ಇದ್ದಾಗ ಹೆಣ್ಣು ಪಾತ್ರಗಳನ್ನು ಹುಡುಗಿಯರೇ ಮಾಡುತ್ತಿದ್ದರು. 50 ವರ್ಷಗಳ ಹಿಂದೆ ಇದೊಂದು ಕ್ರಾಂತಿ. ನಾವು ತಂಡ ಕಟ್ಟಿದ ಮೇಲೆ ನನ್ನ ತಂಗಿ ಮತ್ತು ಸಹಪಾಠಿ ಹೆಣ್ಣು ಪಾತ್ರ ಮಾಡಿದರು. “ಜೋಕುಮಾರಸ್ವಾಮಿ’ ನಾಟಕ ಮಾಡಿದಾಗ, ನಾಟಕ ಪ್ರದರ್ಶನಕ್ಕೆ ಮೂರು ನಾಲ್ಕು ದಿನ ಇದೆ ಎನ್ನುವಾಗ, ಯಾರೋ ರಸ್ತೆಯಲ್ಲಿ ಚುಡಾಯಿಸಿದರು ಅಂತ ನಾಯಕಿ ಪಾತ್ರದಾಕೆ ಹಿಂದೆ ಸರಿದಳು. ಫ‌ಜೀತಿಗೆ ಇಟ್ಟುಕೊಂಡಿತು. ಆಗ “ಕುಮಾರಸ್ವಾಮಿ ನಾಟಕ ಮಂಡಳಿ’ ನಗರದಲ್ಲಿ ಮೊಕ್ಕಾಂ ಹಾಕಿತ್ತು. ಚಾಮರಾಜನಗರದವರೇ ಆದ ಮಹಿಳಾ ಪಾತ್ರಧಾರಿ ಪಂಕಜ ರವಿಶಂಕರ್‌ ಅಲ್ಲಿದ್ದರು. ಅವರನ್ನು ಮತ್ತು ಅವರ ಮಾಲೀಕರನ್ನು ಒಪ್ಪಿಸಿ ಅವರ ಥಿಯೇಟರಿನಲ್ಲಿಯೇ ನಾಟಕ ಮಾಡಿದೆವು. ಇನ್ನುಳಿದ ಸ್ತ್ರೀ ಪಾತ್ರಗಳನ್ನು ಮೈಸೂರಿನಲ್ಲಿದ್ದ ನನ್ನ ಪತ್ನಿಯ ಗೆಳತಿಯರು ನಿರ್ವಹಿಸಿದರು. ಒಮ್ಮೆಯಂತೂ ವೃತ್ತಿ ಕಂಪನಿಯ ನಾಟಕಗಳಲ್ಲಿ ಪಾತ್ರ ಮಾಡುವವರನ್ನು ಕರೆಯಿಸಿ ನಾಟಕ ಮಾಡಿದ್ದೂ ಉಂಟು.

5. ಶಾಂತಲಾ ಕಲಾವಿದರು ತಂಡದ ಮುಂದಿನ ಯೋಜನೆಗಳೇನು?
ಚಾಮರಾಜನಗರದಲ್ಲಿ ನಮಗೆ ‘ಚುಡಾ’ದಿಂದ ಸಿ ಎ ಸೈಟ್‌ ನೀಡಿದ್ದಾರೆ. ಅಲ್ಲಿ ರಂಗಮಂದಿರ ಕಟ್ಟುವ ಆಸೆ ಇದೆ. ಇದಕ್ಕಾಗಿ ಈಗಾಗಲೇ ತಯಾರಿಗಳನ್ನು ಆರಂಭಿಸಿದ್ದೀವಿ. ಈ ವರ್ಷ ರಂಗಮಂದಿರ ನಿರ್ಮಿಸಿ ಅಲ್ಲೇ ಕೆಲಸ ಮುಂದುವರಿಸಬೇಕು ಎನ್ನುವ ಯೋಜನೆ-ಯೋಚನೆ ಇದೆ. ಆ ಸ್ಥಳವನ್ನು ಕೇವಲ ನಾಟಕಗಳಿಗೆ ಮೀಸಲಾಗಿಡದೆ ಒಂದು ಸಾಂಸ್ಕೃತಿಕ ಕೇಂದ್ರ’ ವನ್ನಾಗಿ ಮಾಡಬೇಕು ಎಂಬ ಆಸೆ ಇದೆ. ಅದಕ್ಕೆ ಬಹಳಷ್ಟು ಹಣ ಖರ್ಚಾಗುತ್ತೆ. ಅದನ್ನ ಹೊಂದಿಸಿಕೊಂಡು ಮಾಡುವ ತಯಾರಿಯಲ್ಲಿ ಇದ್ದೇವೆ.

ಶಾಂತಲಾ ಕಲಾವಿದರು ರಂಗತಂಡದಿಂದ 50 ವರ್ಷ ನಿರಂತರವಾಗಿ ರಂಗ ಚಟುವಟಿಕೆ ನಡೆಸಿಕೊಂಡು ಬಂದಿದ್ದೇವೆ. ನಮ್ಮ ತಂಡದ ಏಳೆಂಟು ಜನ ರಂಗ ಶಿಕ್ಷಣದ ಪದವಿ ಪಡೆದಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಟಕದ ಶಿಕ್ಷಕರಾಗಿದ್ದಾರೆ. ರಂಗಕರ್ಮಿಗಳಾಗಿದ್ದಾರೆ. ನಮ್ಮ ತಂಡ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸುವ “ಯುವಜನೋತ್ಸವ’ ದಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು 3 ಬಾರಿ ಪ್ರತಿನಿಧಿಸಿದೆ.10-10-23ಕ್ಕೆ ಸಂಸ್ಥೆಗೆ 50 ವರ್ಷ ತುಂಬುತ್ತದೆ. ಅಕ್ಟೋಬರ್‌/ ನವೆಂಬರ್‌ನಲ್ಲಿ 50ನೇ ವರ್ಷದ ಸಂಭ್ರಮಾಚರಣೆ ಮಾಡಬೇಕು ಅಂದುಕೊಂಡಿದ್ದೇವೆ.

ವಾರದ ಅತಿಥಿ:
ಕೆ. ವೆಂಕಟರಾಜು, ಮ್ಯಾನೇಜಿಂಗ್‌ ಟ್ರಸ್ಟೀ, ಶಾಂತಲಾ ಕಲಾವಿದರು, ಚಾಮರಾಜನಗರ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.