ಸ್ವಾತಿ ಮುತ್ತಿನ ಮಳೆಹನಿಯು


Team Udayavani, Feb 25, 2018, 8:20 AM IST

s-1.jpg

ಚಿತ್ರರಂಗಕ್ಕೆ ಬರಬೇಕು, ಕಲಾವಿದರಾಗಬೇಕು ಎಂದು ಬಯಸದ ಅದೆಷ್ಟೋ ಜನರಿಗೆ ಚಿತ್ರರಂಗ ಕೈಹಿಡಿದು ಪೋಷಿಸಿದೆ. ಅಷ್ಟೇ ಅಲ್ಲ, ದೊಡ್ಡ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಆ ಸಾಲಿಗೆ ಸ್ವಾತಿ ಕೊಂಡೆ ಎಂಬ ಹೊಸ ನಟಿಯನ್ನು ಸಹ ಸೇರಿಸಬಹುದು.

ಬ್ಯೂಟಿಫ‌ುಲ್‌ ಮನಸುಗಳು ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ ಅವರ ಮಗಳ ಪಾತ್ರ ಮಾಡಿದ್ದು ಇದೇ ಸ್ವಾತಿ. ಒಂದು ಸಣ್ಣ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸ್ವಾತಿ ಈಗ ವೆನಿಲ್ಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ ಇನ್ನೂ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ವಾತಿ ತುಮಕೂರಿನ ಹುಡುಗಿ, ಡಿಪ್ಲೊಮಾ ಓದಿರುವ ಸ್ವಾತಿಗೆ ಸಿನೆಮಾದ ಕನಸೇನು ಇರಲಿಲ್ಲ. ಆದರೆ, ಅಚಾನಕ್‌ ಆಗಿ ನೋಡಿದ ಆಡಿಷನ್‌ ಜಾಹೀರಾತಿಗೆ ಮರುಳಾಗಿ ಆಡಿಷನ್‌ ಕೊಟ್ಟು ಬಂದವರು ಸ್ವಾತಿ. 270ಕ್ಕೂ ಹೆಚ್ಚು ಮಂದಿಯನ್ನು ಹಿಂದಿಕ್ಕಿ ನಾಯಕಿ ಸ್ಥಾನವನ್ನು ಗಿಟ್ಟಿಸಿಕೊಂಡ ಸ್ವಾತಿಗೆ ಯಾಕೋ ಆ ಸಿನೆಮಾದ ಮೇಲೆ ನಂಬಿಕೆಯೇ ಬರಲಿಲ್ಲ. ಹಾಗಾಗಿ ಆಡಿಷನ್‌ನಲ್ಲಿ ಆಯ್ಕೆಯಾದ ಸಿನೆಮಾವನ್ನು ಸಾರಸಗಟಾಗಿ “ನೋ’ ಎಂದ ಸ್ವಾತಿಗೆ ಆ ನಂತರ ಸಿಕ್ಕಿದ್ದು ಬ್ಯೂಟಿಫ‌ುಲ್‌ ಮನಸುಗಳು ಸಿನೆಮಾ. 

ಇದರ ನಂತರ ಸ್ವಾತಿಗೆ ಸಿಕ್ಕ ಅವಕಾಶ ಎಂದರೆ ಕಮರೊಟ್ಟು ಚೆಕ್‌ಪೋಸ್ಟ್‌ ಎಂಬ ಹಾರರ್‌ ಸಿನಿಮಾದಲ್ಲಿ. ಈ ಸಿನೆಮಾದಲ್ಲಿ ಮದುವೆಯಾಗಿರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗಕ್ಕೆ ನಾಯಕಿಯಾಗಬೇಕೆಂಬ ಆಸೆಯಿಂದ ಬರುವವರು ಮದುವೆಯಾಗಿರುವ ಪಾತ್ರಗಳನ್ನು ಒಪ್ಪೋದಿಲ್ಲ. ಆದರೆ, ಸ್ವಾತಿ ಒಪ್ಪಿದ್ದಾರೆ. ಅದಕ್ಕೆ ಕಾರಣ, ಆ ಪಾತ್ರದ ಶೇಡ್‌. ಮೊದಲೇ ಹೇಳಿದಂತೆ ಇದು ಹಾರರ್‌ ಸಿನೆಮಾವಾದ್ದರಿಂದ ಇವರ ಪಾತ್ರದಲ್ಲಿ “ಆಪ್ತಮಿತ್ರ’ ಚಿತ್ರದ ಸೌಂದರ್ಯಾ ಶೇಡ್‌ ಇದೆಯಂತೆ. ಮುಖ್ಯವಾಗಿ ಈ ಚಿತ್ರದಲ್ಲಿ ನಟನೆಗೆ ಹೆಚ್ಚು ಅವಕಾಶವಿದ್ದ ಕಾರಣ ಒಪ್ಪಿಕೊಂಡರಂತೆ. ಕಮರೊಟ್ಟು ನಂತರ ಸ್ವಾತಿಗೆ ಸಿಕ್ಕಿದ್ದು ವೆನಿಲ್ಲಾ. ಈ ಚಿತ್ರ ಸಿಗಲು ಕಾರಣ ಛಾಯಾಗ್ರಾಹಕ ಕಿರಣ್‌ ಹಂಪಾಪುರ. ಕಮರೊಟ್ಟು ಚಿತ್ರಕ್ಕೂ ಕಿರಣ್‌ ಛಾಯಾಗ್ರಾಹಕರು. ಆ ಚಿತ್ರದಲ್ಲಿ ಸ್ವಾತಿಯ ನಟನೆ ನೋಡಿ ಖುಷಿಯಾದ ಕಿರಣ್‌, ವೆನಿಲ್ಲಾ ತಂಡಕ್ಕೆ ಸ್ವಾತಿ ಬಗ್ಗೆ ಹೇಳಿದರಂತೆ. ಇತ್ತ ಕಡೆ ಬ್ಯೂಟಿಫ‌ುಲ್‌ ಮನಸುಗಳು ಸಮಯದಲ್ಲಿ ಸ್ವಾತಿಯ ಪರ್‌ಫಾರ್ಮೆನ್ಸ್‌ ನೋಡಿ ಗೊತ್ತಿದ್ದ ಜಯತೀರ್ಥ ಕೂಡಾ ವೆನಿಲ್ಲಾದಲ್ಲಿ ಸ್ವಾತಿಗೆ ಅವಕಾಶ ಕೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. 

ಸ್ವಾತಿ ಯಾವುದೇ ಸಿನೆಮಾ ಒಪ್ಪಿಕೊಳ್ಳುವಾಗ ಕಥೆಯ ಜೊತೆಗೆ ತಂಡವನ್ನೂ ನೋಡುತ್ತಾರಂತೆ. ಯಾರು ಹೇಗೆ, ಅವರ ವರ್ತನೆ ಹೇಗಿದೆ ಎಂಬುದನ್ನೂ ನೋಡುತ್ತಾರಂತೆ. ಅದರ ಮೇಲೆ ಇವರ ನಡವಳಿಕೆ ಇರುತ್ತದೆಯಂತೆ. “”ನನಗೆ ಇಲ್ಲಿಯವರೆಗೆ ಚಿತ್ರರಂಗದಿಂದ ಯಾವುದೇ ರೀತಿಯ ಕೆಟ್ಟ ಅನುಭವ ಆಗಿಲ್ಲ. ಎಲ್ಲರೂ ಚೆನ್ನಾಗಿ ನಡೆಸಿಕೊಂಡಿದ್ದಾರೆ. ತುಂಬಾ ಪಾಸಿಟಿವ್‌ ಆಗಿದೆ” ಎನುತ್ತಾರೆ ಸ್ವಾತಿ.

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.