ಅಕ್ಷರಗಳಲ್ಲಿ ಅಮರರಾದ ಕಲಾವಿದ


Team Udayavani, Dec 9, 2018, 6:00 AM IST

yakshagana-sss.jpg

ಯಕ್ಷಗಾನ ರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯ ಲಯಸಂಪನ್ನ ನೃತ್ಯ ಭಂಗಿ-ಹಾವ-ಭಾವಗಳಿಂದಲೇ ಪ್ರೇಕ್ಷಕರನ್ನು ಪ್ರಬಲವಾಗಿ ಸೆಳೆದುಕೊಂಡವರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಸಾಂಪ್ರದಾಯಿಕ ಹೆಜ್ಜೆಗಾರಿಕೆಯೊಂದಿಗೆ ಹೊಸ ಕಲ್ಪನೆಯ ಹೆಜ್ಜೆಗತಿಗಳನ್ನು ಬೆರೆಸಿ ಯಕ್ಷನೃತ್ಯದ ಹೊಸ ಪರಿಭಾಷೆಯನ್ನು ಹುಟ್ಟುಹಾಕಿ ಪ್ರೇಕ್ಷಕರಲ್ಲಿ ರೋಮಾಂಚನಕಾರಿ ಅನುಭವವನ್ನು ಮೂಡಿಸಿದವರು. ಪದ್ಮಶ್ರೀ ಪುರಸ್ಕೃತರಾಗಿ ಈ ಕ್ಷೇತ್ರಕ್ಕೆ ವಿಶೇಷ ಗೌರವದ ಕಿರೀಟವನ್ನು ತೊಡಿಸಿದವರು. 

ಕಳೆದ ವರ್ಷವಷ್ಟೆ ನಿಧನರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಆರು ದಶಕ ಕಾಲದ ಕಲಾಯಾನದ ವಿವಿಧ ಮಗ್ಗುಲುಗಳನ್ನು ನೋಡಿ, ಮೆಚ್ಚಿ ಆನಂದಿಸಿದ ಅವರ ಅಭಿಮಾನಿಗಳು, ಸಹಕಲಾವಿದರು, ಮೇಳ-ಪ್ರದರ್ಶನಗಳಲ್ಲಿ ಸಹಯಾನ ನಡೆಸಿದ ಭಾಗವತರು, ಯಕ್ಷಗಾನ ಕಲಾವಿಮರ್ಶಕರು, ಮಕ್ಕಳು, ಬಂದು-ಮಿತ್ರರು ಸಲ್ಲಿಸಿರುವ ನುಡಿ-ನಮನಗಳ ಸಂಕಲನ ಇದು. ಇಲ್ಲಿನ ಹೆಚ್ಚಿನ ಬರಹಗಳಲ್ಲಿ ಜೀವಂತರಾಗಿದ್ದಾಗಲೇ ದಂತಕತೆಯಾಗಿದ್ದ ಚಿಟ್ಟಾಣಿಯವರ ಬಗೆಗಿನ ಅಭಿಮಾನ ಹೇಗೋ ಹಾಗೆಯೇ ಅವರ ಕಲೆಗಾರಿಕೆ-ಕಸುಬುಗಾರಿಕೆಯ ವಸ್ತುನಿಷ್ಠ ಅವಲೋಕನವೂ ಇದೆ. ಅವರು ಯಕ್ಷಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್‌ ಪದವಿ ಗಳಿಸಿರುವ ಸಂಪಾದಕರು ಇಲ್ಲಿ ತಾವು ಸಂಕಲಿಸಿರುವ ಬರಹಗಳ ಬಗ್ಗೆ ಹೇಳುತ್ತ “ಚಿಟ್ಟಾಣಿಯವರ ಲಯಸಿದ್ಧಿ’ ನೃತ್ಯದ ಲಯದಲ್ಲಿ ಮಾತ್ರವಲ್ಲ, ಅದು ಪಾತ್ರಗಳ ಶೀಲಸ್ವಭಾವವೂ ಹೌದು; ಸಾಂಪ್ರದಾಯಿಕ ಕುಣಿತದೊಂದಿಗೆ ಹೊಸ ಕುಣಿತವನ್ನೂ ನೀಡಿದರು; ಅದಿಂದು “ಚಿಟ್ಟಾಣಿ ಕುಣಿತ’ವೆಂದೇ ಕರೆಸಿಕೊಳ್ಳುವಷ್ಟು ಪ್ರಸಿದ್ಧವಾಗಿದೆ’ ಎನ್ನುತ್ತಾರೆ. ಈ ಸಂಕಲದಲ್ಲಿರುವ “ನವರಸ ನಾಯಕ ಚಿಟ್ಟಾಣಿ’ ಎಂಬ ಅವರದೇ ಬರಹ ಈ ಮಾತಿಗೆ ಪುರಾವೆಗಳನ್ನು ಒದಗಿಸುತ್ತದೆ. 

“ಉದ್ಭವ ಕಲಾವಿದ’ (ಕಡತೋಕ ಗೋಪಾಲಕೃಷ್ಣ ಭಾಗವತ), “ಯಕ್ಷಗಾನದ ಕೋಲಿ¾ಂಚು-ಚಿಟ್ಟಾಣಿ’ (ಅಂಬಾತನಯ ಮುದ್ರಾಡಿ), “ರಂಗಮಂಚದ ಮಿಂಚು’ (ಉಮಾಕಾಂತ ಭಟ್ಟ), “ಮಮತೆಯ ಕಡಲು’ (ಸುಶೀಲಾ ರಾಮಚಂದ್ರ ಹೆಗಡೆ) ಮುಂತಾದ ಇಲ್ಲಿನ ನುಡಿಚಿತ್ರಗಳು ಅಭಿಮಾನದ ಅತಿರೇಕವಿಲ್ಲದೆ ಕಲಾ ಸಾಧಕನೊಬ್ಬನನ್ನು ಬೇರೆ ಬೇರೆ ನೆಲೆಗಳಿಂದ ಹೇಗೆ ನೋಡಬಹುದೆಂಬುದನ್ನು ಶ್ರುತಪಡಿಸುವ ಅಕ್ಷರರೂಪೀ ಗೌರವಾರ್ಪಣೆಯ ನುಡಿಕುಸುಮಗಳಾಗಿ ಸಾರ್ಥಕತೆ ಪಡೆದಿವೆ. ಜತೆಗೆ ಅವರ ನಿಲುವನ್ನು ಕಾಣಿಸುವ ಸಂದರ್ಶನ ಬರಹಗಳು, ಕಾವ್ಯರೂಪಿ ಶ್ರದ್ಧಾಂಜಲಿಗಳು, ಅವರ ಕಲಾಯಾನದ ಮಹಣ್ತೀದ ಕ್ಷಣಗಳನ್ನು ಕಾಣಿಸುವ ಅಪರೂಪದ ಛಾಯಾಚಿತ್ರಗಳು, ಅವರು ಪಡೆದ ವಿಶೇಷ ಪ್ರಶಸ್ತಿಗಳ ಪಟ್ಟಿ ಕೂಡ ಇದ್ದು , ಇವೆಲ್ಲವೂ ಈ ಗ್ರಂಥಕ್ಕೆ ಸೊಬಗು ಹಾಗೂ ಘನತೆಯನ್ನು ನೀಡಿವೆ.

– ಜಕಾ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.