ಯಶೋದಮ್ಮನ ಕತೆ


Team Udayavani, May 12, 2019, 6:00 AM IST

9

ಒಮ್ಮೆ ಬಾಲಕೃಷ್ಣ ತೊಟ್ಟಿಲಲ್ಲಿ ಮಲಗಿದ್ದವನು ಇದ್ದಕ್ಕಿದ್ದಂತೆ ಅಳಲಾರಂಭಿಸಿದ. ನಾರಿಯರೆಲ್ಲ ಅವನನ್ನು ಎತ್ತಿಕೊಳ್ಳಲು ಧಾವಿಸಿದರು. ಆದರೆ, ಎಂಥ ಪವಾಡ ಸಂಭವಿಸಿತೆಂದರೆ ಯಾರಿಗೂ ಅವನನ್ನು ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಯಾರೂ ಆನಲಾಗದ ಭಾರ ಅವನದಾಗಿತ್ತು. ನಾರಿಯರು ಎತ್ತಲು ಒದ್ದಾಡುವಾಗ ಜೋರಾಗಿ ನಗುತ್ತಿದ್ದ. ಅವರು ಸೋತು ಕೈಚೆಲ್ಲುತ್ತಿದ್ದರು. ಕೃಷ್ಣ ಮತ್ತೆ ಜೋರಾಗಿ ಅಳುತ್ತಿದ್ದ. ಈ ಬಾಲ-ಲೀಲೆಯಿಂದ ಎಲ್ಲರಿಗೂ ಸಾಕೋ ಸಾಕಾಯಿತು.

ಬಹುಶಃ ದೇವರಿಗೂ ಒಮ್ಮೆ ಆಟ ಆಡೋಣ ಅನ್ನಿಸಿರಬೇಕು. ಸ್ವತಃ ಭಾರವಾಗಿ ಲೌಕಿಕರನ್ನು ಅಚ್ಚರಿಗೊಳಿಸೋಣ ಎಂದು ಯೋಚನೆ ಅವನಲ್ಲಿ ಮೂಡಿರಬೇಕು. ಮಗು ಒಂದೇ ಸವನೆ ಅಳುವುದು ಕೇಳಿಸಿತು ; ದೂರದಲ್ಲಿ ಅದೇನೋ ಕೆಲಸದಲ್ಲಿ ನಿರತಳಾಗಿದ್ದ ಯಶೋದೆಗೆ.

“”ಯಾಕೆ, ಮಗು ಅಳುತ್ತಿದೆ?” ಎಂದು ಗೊಣಗುತ್ತ ಸಾಕ್ಷಾತ್‌ ಅಮ್ಮನೇ ಮಗುವಿನತ್ತ ಧಾವಿಸತೊಡಗಿದಳು. ಯಶೋದೆ ತನ್ನತ್ತ ಬರುವುದನ್ನು ನೋಡಿ ಮಗು ಕೃಷ್ಣ ಜೋರಾಗಿ ಅಳತೊಡಗಿದ. ಆದರೂ ಒಳಗೊಳಗೆ ನಗುತ್ತಿದ್ದ ; ತಾನೀಗ ಭಾರವಾಗಿ ಅಮ್ಮನನ್ನು ಪೀಡಿಸಬೇಕೆಂಬ ತುಂಟ ಯೋಚನೆಯಿಂದ.

ತಾಯಿ ಯಶೋದೆ ಈಗ ದೇವರನ್ನು ಎತ್ತಲಾಗದೆ ಕಂಗಾಲಾಗುವ ಸ್ಥಿತಿಯನ್ನು ಮತ್ತು ಮನುಷ್ಯಮಾತ್ರಳಾದ ಅಮ್ಮನಾಗಿ ಆಕೆ ಅನುಭವಿಸುವ ತಳಮಳವನ್ನು ನೋಡಿ ನಗುವುದಕ್ಕಾಗಿ ದೇವಾನುದೇವತೆಗಳು ಆಕಾಶದಲ್ಲಿ ನೆರೆದಿದ್ದರು. ಭೂಲೋಕದ ಬಾಲಲೀಲೆಯನ್ನು ನೋಡುವ ಕಾತರ ಮೇಲುಲೋಕದವರಿಗೆ.

ಯಶೋದಮ್ಮ ಬಂದಳಲ್ಲವೆ? ಬಂದವಳೇ ತೊಟ್ಟಿಲಿನೆಡೆಗೆ ಬಾಗಿದಳು. “ಯಾಕೆ ಅಳುತ್ತಿರುವೆ?’ ಎಂದು ಗದರಿದಳು.
ಕೃಷ್ಣ ತನ್ನ ಆಟವನ್ನು ತೋರಿಸಲೆಂದು ಜೋರಾಗಿ ಕೈಕಾಲು ಬಡಿಯುತ್ತ ಅಳತೊಡಗಿದ. ತನ್ನನ್ನು “ಎತ್ತು’ “ಎತ್ತು’ ಎಂಬ ಭಾವದಲ್ಲಿ ಅವಳನ್ನೇ ನೋಡತೊಡಗಿದ.

ಯಶೋದೆ ಅವನತ್ತ ಕೈಚಾಚಿದ್ದೇ ಒಂದೇ ಸವನೆ ಭಾರವಾಗತೊಡಗಿದ.
ಈ ದೈತ್ಯಭಾರವನ್ನು ಎತ್ತಲಾಗದೆ ಯಶೋದಮ್ಮ ಸಂಕಷ್ಟಪಡುವಳ್ಳೋ ಎಂದು ಸೇವಕಿಯರೆಲ್ಲ ಕಾಳಜಿಯಿಂದ ನೋಡುತ್ತಿದ್ದರು. ದೇವರ ಆಟದ ಮುಂದೆ ಮನುಷ್ಯ ಸೋಲುವುದನ್ನು ನೋಡಿಯೇ ಬಿಡೋಣ ಎಂದು ದೇವತೆಗಳೂ ಕೂಡ ಬೆರಗಿನಿಂದ ಅವಲೋಕಿಸುತ್ತಿದ್ದರು. ಆದರೆ, ಎಂಥ ವಿಚಿತ್ರ ನೋಡಿ ; ಯಶೋದೆ ಕೃಷ್ಣನನ್ನು ಹೂವಿನಂತೆ ಎತ್ತಿ ಬಿಟ್ಟಳು.

ದೇವರ ಆಟ ನಡೆಯಲಿಲ್ಲ. ಅಮ್ಮನೇ ಗೆದ್ದಳು.
ಮಗು ಸ್ವತಃ ದೇವರೇ ಆಗಿರಬಹುದು, ಆದರೆ, ಅಮ್ಮನಿಗೆ ಭಾರವೆ?

ಪಾಂಚಾಲಾ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.