ಶಿಕ್ಷಕರ ದಿನಾಚರಣೆ 2020: ಸಹಜವಾಗಿ ಬದುಕುವ ಪಾಠ ಕಲಿಸಿದೆ….ಸತ್ಯದ ಕಡೆಗೆ ಮರಳಬೇಕಾಗಿದೆ

ಆರ್ಟಿಫಿಷಿಯಲ್ ಲೋಕದಲ್ಲಿದ್ದ ಮಕ್ಕಳಿಗೂ, ಹಿರಿಯರಿಗೂ ಸಹಜವಾಗಿ ಬದುಕುವ ಪಾಠ ಕಲಿಸಿದೆ

Team Udayavani, Sep 4, 2020, 5:32 PM IST

ಶಿಕ್ಷಕರ ದಿನಾಚರಣೆ 2020: ಸಹಜವಾಗಿ ಬದುಕುವ ಪಾಠ ಕಲಿಸಿದೆ….ಸತ್ಯದ ಕಡೆಗೆ ಮರಳಬೇಕಾಗಿದೆ

ಪಕ್ವಗೊಂಡ ಹಣ್ಣು ತಾನಾಗಿಯೇ ಮರದಿಂದ ಉದುರುವುದು. ಅದನ್ನು ಅನ್ಯಾಯ ದಿಂದ ಕಲ್ಲು ಹೊಡೆದು ಬೀಳಿಸುವ ಅಗತ್ಯವಿಲ್ಲ. ಅದೇ ರೀತಿ ಇಂದು ಕುಟುಂಬ ಸಂಬಂಧ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಕಲಿಯುವ ಅಗತ್ಯವಿಲ್ಲದೇ ಕುಟುಂಬದೊಂದಿಗಿದ್ದು ಹಿರಿಯರನ್ನು ನೋಡಿ ಕಲಿಯುವ ಅವಕಾಶ ದೊರೆತಿದೆ.ಅದರೊಂದಿಗೆ ಶೈಕ್ಷಣಿಕ ವರ್ಷದ ಕಲಿಕೆಯಿಂದಲೂ ವಿದ್ಯಾರ್ಥಿಗಳು ವಂಚಿತರಾಗಬಾರದೆಂದು ಆನ್ ಲೈನ್ ತರಗತಿಯಂತೆ ಹಲವಾರು ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದರಿಂದ ಶ್ರೀಮಂತರಂತೆ, ಮಾಧ್ಯಮವರ್ಗದವರ ಮಕ್ಕಳೂ ಶಿಕ್ಷಣ ಮುಂದುವರಿಸಲು ಸಹಕಾರಿಯಾಗಿದೆ. ಆದರೆ ಬಡವರ ಮಕ್ಕಳು……?

ಕಾರ್ಮಿಕ ವರ್ಗದವರಿಗೆ, ಗ್ರಾಮೀಣಭಾಗದಲ್ಲಿ ನೆಟ್ ವರ್ಕ್ ಇಲ್ಲದ ಸ್ಥಳಗಳಲ್ಲಿ ಬದುಕುವ ವಿದ್ಯಾರ್ಥಿಗಳಿಗೆ ಹಾಗೂ ಅಂತಃಕಡೆಗಳಲ್ಲಿ ವಾಸ್ತವ್ಯವಿರುವ ಶಿಕ್ಷಕರ ಪಾಡು…..ಇದು ಹೀಗೇ ಮುಂದುವರಿದಲ್ಲಿ…. ವಿದ್ಯಾರ್ಥಿಗಳ, ಶಿಕ್ಷಕರ ಈ ಮೂಲಕ ವಿದ್ಯಾಸಂಸ್ಥೆಗಳ ಅವಸ್ಥೆಯೇನಾದೀತು…

ಆದರೆ ಸಾಮಾಜಿಕವಾಗಿ ಇನ್ನೊಂದು ಮಗ್ಗುಲಲ್ಲಿ ಯೋಚಿಸಿದಾಗ……ಸಮಯಕೊಡಲಾಗದ ಹಿರಿಯರು ಮಕ್ಕಳ ಕೈಗೊಂದು ಮೊಬೈಲ್ ಕೊಟ್ಟು ಕೂರಿಸದೇ, ಅವರನ್ನು ಚಟುವಟಿಗೆಗಳಲ್ಲಿ ತೊಡಗಿಸಬೇಕು. ತಮ್ಮ ಮಕ್ಕಳ ಬಗ್ಗೆ ಸಿನೆಮಾ, ಧಾರಾವಾಹಿಗಳ ಪಾತ್ರಗಳನ್ನು ನೋಡಿ ಕನಸು ಕಾಣುತ್ತಿದ್ದ ಹಿರಿಯರ ಮೌನದ ಮೋಡಗಳು ಇಂದು…ಪೋಷಕರನ್ನೇ ಶಿಕ್ಷಕರಾಗಿ ಬಳಸುತ್ತಾ ಪ್ರಜ್ಞಾವಂತ ಮಕ್ಕಳ ಕೂಗಿಗೊಮ್ಮೆ ಕಿವಿಗೊಡೋಣ ಎಂಬಂತೆ ಮನೆಯಲ್ಲೇ ಇರುವ ಮಕ್ಕಳ ಮನಸ್ಸಿಗೆ ಆ ಮೂಲಕ ಸಮಾಜದ ಭ್ರಷ್ಟಾಚಾರದ ಧಗೆಗೆ ಮಳೆಯಾಗಿ ಸುರಿಯಬೇಕಾಗಿದೆ.

ವ್ಯಕ್ತಿ ಮತ್ತು ರಾಷ್ಟ್ರದ ಏಳಿಗೆ ಪರಸ್ಪರ ಗಾಢವಾದ ಸಂಬಂಧ ಹೊಂದಿದೆ. ಕೆಲವು ತಿಂಗಳುಗಳ ಹಿಂದೆ ಕನಸ್ಸಿನಲ್ಲೂ ಯೋಚಿಸಿರದ ಕಾಯಿಲೆ ಇಂದು ಮಾನವನ ಯೋಜನೆ, ಆಕಾಂಕ್ಷೆ, ಕನಸುಗಳನ್ನೆಲ್ಲಾ ನಿರ್ಲಕ್ಷಿಸುವಂತೆ ಮಾಡಿತ್ತು.. !ಲಾಕ್ಡೌನ್… ಆರ್ಟಿಫಿಷಿಯಲ್ ಲೋಕದಲ್ಲಿದ್ದ ಮಕ್ಕಳಿಗೂ, ಹಿರಿಯರಿಗೂ ಸಹಜವಾಗಿ ಬದುಕುವ ಪಾಠ ಕಲಿಸಿದೆ ತುತ್ತು ಬಾಯಿಗಿಡುವುದಕ್ಕಿಂತ.. ಅದು ಭೂಮಿಯ ಹೊಟ್ಟೆಯಿಂದ ಹೊರಬಂದು ನಮ್ಮ ಹೊಟ್ಟೆ ಸೇರುವವರೆಗೆ ಹಾದುಬಂದ ಎಲ್ಲಾ ಮಗ್ಗುಲುಗಳೂ ಮಡಿಲ ಮಕ್ಕಳಿಗೆ ಅರ್ಥವಾಗುವ ಸಮಯ ಇದಾಗಿದೆ.. !

ಹಾಗಾದಲ್ಲಿ ಮಾತ್ರ ಕಲಿಸುವ ಶಿಕ್ಷಕರಿಗೆ, ಕಲಿಯುವ ಮನಸ್ಸಿಗೆ ಎಂದೂ ಕೊರೊನ (ಅಬ್ಬರ ) ಬಾಧಿಸದು. ಮತ್ತು ಹಿರಿಯರ ಕನಸಿನ ಉತ್ಥಾನಕ್ಕೆ ಎಂದೂ ಬಾಧಿಸದು, ಪ್ರಗತಿಯ ನಭದಲ್ಲಿ ವಿಹರಿಸುವ ನಮ್ಮ ಯುವಜನಾಂಗಕ್ಕೆ ಯಾವುದೂ ತಡೆಯಾಗದು..  ವಾಸ್ಕೊಡಗಾಮನ ಬಗ್ಗೆ ಓದಿ ಅರಗಿಸಿದ ಮಕ್ಕಳಿಗೆ ರೈತರ ಪರಿಶ್ರಮದ ಬಗ್ಗೆ ಅರಿವಿಲ್ಲ. ದೊಡ್ಡ ದೊಡ್ಡ ಪದವಿ ಪರೀಕ್ಷೆಗಳನ್ನು ಎದುರಿಸುವ ಮಕ್ಕಳಿಗೆ ಜೀವನದ ಸಣ್ಣ ಸಮಸ್ಯೆಯನ್ನೂ ಎದುರಿಸಲು ಸಾಧ್ಯವಾಗದ ಇಂದಿನ ಶಿಕ್ಷಣ ಪದ್ಧತಿ, ಭಾರತೀಯ ಇತಿಹಾಸ, ಆಧುನಿಕ ವಿಜ್ಞಾನಕ್ಕೆ ಅಂದರೆ ಸತ್ಯಕ್ಕೆ ತೇಪೆಹಾಕಿರುವಂತೆ ಕಾಣುವ ಇಂದಿನ ಶಿಕ್ಷಣದ ಬದಲಿಗೆ ಭಾರತೀಯ ಪರಂಪರೆಯ ಬಗ್ಗೆ ಅಭಿಮಾನಪಡುವ ಇತಿಹಾಸ ಪಾರದರ್ಶಕವಾಗಿ ಪೋಷಕರಿಂದಲೂ ಪಡೆಯಲಿ….

ಮೂಗುದಾರ ಇಲ್ಲದೇ ಮುನ್ನುಗ್ಗುತ್ತಿದ್ದ ಈ ವಿಶ್ವವನ್ನು ಕಾಣದ ವೈರಸ್ಸೊಂದು ನಿಯಂತ್ರಣಕ್ಕೆ ತಂದಿರುವುದು ಜಗತ್ತಿನ ಚಿತ್ರಣವನ್ನೇ ಬದಲಿಸಿದೆ. ಇದರಿಂದ ಕಲಿಯುವ ಪಾಠ  ಅಧಿಕಾರದಲ್ಲಿರುವವರು ಸ್ವಾರ್ಥಕ್ಕಾಗಿ ಸ್ಥಾಪಿಸಿದ ಹಲವಾರು ಅಡಿ ಎತ್ತರದ ಪುತ್ಥಳಿಗಳನ್ನು ನೋಡಿ ಹುಬ್ಬೇರಿಸುವುದಕ್ಕಿಂತ, ಯುವಜನಾಂಗವು ಪೋಷಕರ ತ್ಯಾಗ, ಶಿಕ್ಷಕರ ಸಹನೆ, ವೈದ್ಯರ ಸೇವೆ, ರೈತರ ಪರಿಶ್ರಮಗಳನ್ನು ಈ ಸಂದರ್ಭಗಳಲ್ಲಿ ಅರಿತು ಗೌರವಿಸುವಂತಾದಾಗಲಿ, ಭವಿಷ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳು, ತೃಪ್ತ ತಂದೆತಾಯಿಗಳು, ಗೌರವಯುತ ಶಿಕ್ಷಕರೇ ಕಾಣುವಂತಾದಾಗಲು, ಬದುಕಿನ ಉದ್ದೇಶ ಅರಿಯಬೇಕಾಗಿದೆ, ಸತ್ಯದ ಕಡೆಗೆ ಮರಳಬೇಕಾಗಿದೆ…

ಕೂಲ್ಸೂಮ್ ಅಬೂಬಕ್ಕರ್, ಪ್ರಾಂಶುಪಾಲೆ
ಸಾಲಿಹಾತ್ ಅರೇಬಿಕ್ ಕಾಲೇಜು ಹೂಡೆ, ಉಡುಪಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.