ದೇಶದಲ್ಲಿ ಆ್ಯಂಡ್ರಾಯ್ಡ ವ್ಯವಸ್ಥೆ ಬದಲು; ಬದಲಾವಣೆ ಏನು?
ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು ನೀಡದ್ದರಿಂದ ಗೂಗಲ್ ಮೇಲೆ ಅವಲಂಬಿತವಾಗುವಂತಾಗಿತ್ತು.
Team Udayavani, Jan 27, 2023, 10:34 AM IST
ಹೊಸದಿಲ್ಲಿ: ಭಾರತದಲ್ಲಿ ಆ್ಯಂಡ್ರಾಯ್ಡ ಫೋನ್ ಗಳಲ್ಲಿ ತನ್ನ ಪ್ರಾಬಲ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆಸುತ್ತಿದ್ದ ಟೆಕ್ ದೈತ್ಯ ಗೂಗಲ್ ಕಡೆಗೂ ಮಣಿದಿದೆ. ಭಾರತದ ಆ್ಯಂಡ್ರಾಯ್ಡ ಫೋನ್ ಗಳಲ್ಲಿನ ತನ್ನ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ.
ಆ್ಯಂಡ್ರಾಯ್ಡ ವ್ಯವಸ್ಥೆ ಹೊಂದಿರುವ ಸ್ಮಾರ್ಟ್ ಫೋನ್ಗಳಲ್ಲಿ ವೀಡಿಯೋ ಬ್ರೌಸಿಂಗ್, ವೆಬ್ ಸರ್ಚಿಂಗ್, ವೀಡಿಯೋ ಹೋಸ್ಟಿಂಗ್ನಂಥ ಎಲ್ಲ ಕಾರ್ಯಾಚರಣೆಗಳಿಗೂ ಗೂಗಲ್ ಆ್ಯಪ್ಲಿಕೇಶನ್ ಗಳನ್ನೇ ಬಳಕೆ ಮಾಡುವ ಆಯ್ಕೆ ನೀಡಿತ್ತು. ಫೋನ್ ತಯಾರಕರ ಜತೆಗೆ ಏಕಪಕ್ಷೀಯ ಒಪ್ಪಂದದ
ಮೂಲಕ ಆ್ಯಂಡ್ರಾಯ್ಡ ಫೋನ್ಗಳಲ್ಲಿ ಗೂಗಲ್ನ ಆ್ಯಪ್ಲಿಕೇಶನ್ಗಳ ಪ್ರಾಬಲ್ಯ ಖಚಿತಪಡಿಸಿಕೊಳ್ಳಲು ಸಂಸ್ಥೆ ಪ್ರಯತ್ನಿಸಿತ್ತು.ಭಾರತದಲ್ಲಿ ಶೇ.97ರಷ್ಟು ಸ್ಮಾರ್ಟ್ಫೋನ್ಗಳು ಆ್ಯಂಡ್ರಾಯ್ಡ ವ್ಯವಸ್ಥೆಯನ್ನು ಹೊಂದಿದೆ.
ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು ನೀಡದ್ದರಿಂದ ಗೂಗಲ್ ಮೇಲೆ ಅವಲಂಬಿತವಾಗುವಂತಾಗಿತ್ತು. ಪ್ರಾಬಲ್ಯ ದುರ್ಬಳಕೆಯನ್ನು ಗಮನಿಸಿದ್ದ ಭಾರತದ
ಸ್ಪರ್ಧಾತ್ಮಕ ಆಯೋಗ (ಸಿಸಿಐ), ಗೂಗಲ್ಗೆ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ್ದ ಗೂಗಲ್ಗೆ ಹಿನ್ನಡೆಯಾಗಿತ್ತು. ಬಳಿಕ ಈಗ ಬದಲಾವಣೆಯನ್ನು ಘೋಷಿಸಿದೆ.
ಬದಲಾವಣೆ ಏನು?
ಆ್ಯಂಡ್ರಾಯ್ಡ ಫೋನ್ಬಳಕೆದಾರರಿಗೆ ತಮಗೆ ಇಷ್ಟ ಬಂದ ಸರ್ಚ್ ಎಂಜಿನ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುವುದರ ಜತೆಗೆ ತನ್ನ ಆ್ಯಪ್ಲಿಕೇಶನ್ಗಳಿಗೆ ಇನ್ಸ್ಟಾಲೇಶನ್ಗೆ ಮುಂಚೆಯೇ ಪ್ರತ್ಯೇಕ ಪರವಾನಿಗೆ ಮಾಡಿಕೊಳ್ಳುವ ಅವಕಾಶವನ್ನೂ ಮೊಬೈಲ್ ತಯಾರಕರಿಗೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್