ಲೈಟ್ ಆನ್, ಗಾಡಿ ಆಫ್ 2ನೇ ಹಂತ
ಹೊಸದಿಲ್ಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಅಭಿಯಾನ
Team Udayavani, Nov 20, 2021, 6:35 AM IST
ಹೊಸದಿಲ್ಲಿ: ಹೊಸದಿಲ್ಲಿ ವಾಯು ಗುಣಮಟ್ಟ ಸತತ 6ನೇ ದಿನವೂ “ಅತ್ಯಂತ ಕಳಪೆ’ ಕೆಟಗರಿಯಲ್ಲಿ ಮುಂದುವರಿದಿದ್ದು, ಶುಕ್ರವಾರ ಈ ಸೂಚ್ಯಂಕ 332ಕ್ಕೆ ತಲುಪಿದೆ.
ವಾಹನಗಳ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸದಿಲ್ಲಿಯ ಆಮ್ ಆದ್ಮಿ ಸರಕಾರ “ರೆಡ್ ಲೈಟ್ ಆನ್, ಗಾಡಿ ಆಫ್’ ಅಭಿಯಾನದ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ಕೊಟ್ಟಿದೆ. ಅಲ್ಲದೇ ಸಮ-ಬೆಸ ಯೋಜನೆಯನ್ನೂ ಮರು ಜಾರಿ ಮಾಡಲು ನಿರ್ಧರಿಸಿದೆ.
ನಗರದ 100 ಕ್ರಾಸಿಂಗ್ನಲ್ಲಿ ಈ ಅಭಿಯಾನ ಆರಂಭವಾಗಿದೆ. ಐಟಿಒ ಕ್ರಾಸಿಂಗ್ಗೆ ಶುಕ್ರವಾರ ಭೇಟಿ ನೀಡಿದ ಹೊಸದಿಲ್ಲಿ ಪರಿಸರ ಸಚಿವ ಗೋಪಾಲ್ ರಾಯ್, ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಮಾಲಿನ್ಯದ ವಿರುದ್ಧ ಹೋರಾಡುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.
“ಪ್ರತೀ ದಿನ ಒಬ್ಬ ವ್ಯಕ್ತಿ ಟ್ರಾಫಿಕ್ ಸಿಗ್ನಲ್ನಲ್ಲಿ ಸರಾಸರಿ 20-25 ನಿಮಿಷಗಳ ಕಾಲ ಇಂಧನ ವ್ಯಯಿಸುತ್ತಾನೆ. ಇದು ಕೂಡ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಹೀಗಾಗಿ, ಟ್ರಾಫಿಕ್ನಲ್ಲಿ ಕೆಂಪು ದೀಪ ಉರಿದಾಗ, ಎಲ್ಲರೂ ವಾಹನಗಳನ್ನು ಸಂಪೂರ್ಣವಾಗಿ ಆಫ್ ಮಾಡುವ ಮೂಲಕ ಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅಭಿಯಾನದ ಉದ್ದೇಶ’ ಎಂದು ರಾಯ್ ಹೇಳಿದ್ದಾರೆ.
ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ
ನಾಸಾ ಉಪಗ್ರಹದಲ್ಲಿ ಸೆರೆ: ನ.11ರಂದು ನಾಸಾದ ಸುವೋಮಿ ಎನ್ಪಿಪಿ ಉಪಗ್ರಹವು ಸೆರೆಹಿಡಿದಿರುವ ಚಿತ್ರಗಳಲ್ಲಿ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಏಳುವ ಹೊಗೆಯು ಹೊಸದಿಲ್ಲಿಯತ್ತ ಸಂಚರಿಸುವುದು ದಾಖಲಾಗಿದೆ. ಉಪಗ್ರಹದಲ್ಲಿನ “ವಿಸಿಬಲ್ ಇನ್ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್’ (ವಿಐಐಆರ್ಎಸ್) ಮೂಲಕ ಈ ಚಟು ವಟಿಕೆಯನ್ನು ಪತ್ತೆಹಚ್ಚಲಾಗಿದೆ. ಇದು ಸಮುದ್ರ ಮತ್ತು ಭೂಪ್ರದೇಶದಲ್ಲಿನ ತಾಪ ಮಾನ ಬದಲಾವಣೆ ಹಾಗೂ ಬೆಂಕಿಯ ಚಟುವಟಿಕೆಯನ್ನು ಪತ್ತೆಹಚ್ಚುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ