ರಾಜ್ಯಸಭೆಗೆ ಸ್ವಪನ್, ಜೇಠ್ಮಲಾನಿ: ಕೇಂದ್ರದ ನಾಮನಿರ್ದೇಶನ
Team Udayavani, Jun 1, 2021, 9:25 PM IST
ನವದೆಹಲಿ: ಮಾಜಿ ಪತ್ರಕರ್ತ ಸ್ವಪನ್ ದಾಸ್ಗುಪ್ತಾ ಹಾಗೂ ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿ ಅವರನ್ನು ಕೇಂದ್ರ ಸರ್ಕಾರ, ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.
ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಿದ್ದಾರೆ. ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದ ದಾಸ್ಗುಪ್ತಾ, ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಟಿಕೆಟ್ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಅವರು ಯಶಸ್ಸು ಕಂಡಿರಲಿಲ್ಲ. ಹಾಗಾಗಿ, ಅವರನ್ನು ಕೇಂದ್ರ ಸರ್ಕಾರ ಪುನಃ ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಿದೆ.
ಇವರ ಸದಸ್ಯತ್ವದ ಅವಧಿ 2022ರ ಏ. 24ರವರೆಗೆ ಇರಲಿದೆ. ಮತ್ತೂಂದೆಡೆ, ರಘುನಾಥ್ ಮೊಹಾಪಾತ್ರ ಅವರ ನಿಧನದಿಂದಾಗಿ ಕಳೆದ 7 ವರ್ಷಗಳಿಂದ ಖಾಲಿಯಿದ್ದ ರಾಜ್ಯಸಭಾ ಸ್ಥಾನಕ್ಕೆ ಮಹೇಶ್ ಜೇಠ್ಮಲಾನಿ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ. ಇವರ ಸದಸ್ಯತ್ವದ ಅವಧಿ 2024ರ ಜು. 13ರವರೆಗೆ ಮುಂದುವರಿಯಲಿದೆ.
ಇದನ್ನೂ ಓದಿ :ಏರಿಂಡಿಯಾ ಪೈಲಟ್ಗಳ ವಜಾ ಆದೇಶವನ್ನು ತಿರಸ್ಕರಿಸಿದ ದೆಹಲಿ ಉಚ್ಚ ನ್ಯಾಯಾಲಯ