ಹೆಸರು ಉಲ್ಟಾ ಮಾಡಿ ಕೇಡಿ ಅನ್ನಬಹುದು : ಡಿಕೆಶಿಗೆ ಸಿಟಿ ರವಿ ತಿರುಗೇಟು
ನನ್ನ ಮೇಲೆ ಇಡಿ ದಾಳಿಯಾಗಿಲ್ಲ,ನಾನು ಗಾಜಿನ ಮನೆಯಲ್ಲಿಲ್ಲ...
Team Udayavani, Dec 16, 2021, 3:04 PM IST
ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲೂಟಿ ರವಿ ಎಂದು ಟೀಕಿಸಿದುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಿಡಿ ಕಾರಿ ಆಕ್ರೋಶ ಹೊರ ಹಾಕಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ನನ್ನ ಮೇಲೆ ಲೂಟಿ ಹೊಡೆದ, ಲ್ಯಾಂಡ್ ಗ್ರ್ಯಾಬಿಂಗ್ ಹೊಡೆದ, ಭ್ರಷ್ಟಾಚಾರ ಮಾಡಿದ ಅನ್ನುವ ಎಫ್ ಐಆರ್ ಇಲ್ಲ.ಆದರೆ ನಾನು ಡಿಕೆ ಅನ್ನು ಕೇಡಿ ಅಂತಾ ಹೇಳುವುದಕ್ಕೆ ಹೋಗುವುದಿಲ್ಲ” ಎಂದರು.
”ನನ್ನ ಮೇಲೆ ಇಡಿ ದಾಳಿಯಾಗಿಲ್ಲ, ನನ್ನ ಆಸ್ತಿ ಪ್ರಮಾಣ ಜಾಸ್ತಿಯಾಗಿಲ್ಲ,ನೂರುಪಟ್ಟು ಜಾಸ್ತಿಯಾದವರು ಹೇಳಲಿ.ನನ್ನನ್ನ ಲೂಟಿ ರವಿ ಅನ್ನುವುದಕ್ಕೆ ಮುಂಚೆ ಯೋಚನೆ ಮಾಡಲಿ ಎಂದು ಕಿಡಿ ಕಾರಿದರು.
‘ನೀವು ಸಭ್ಯತೆಯನ್ನ ಮೀರಿದರೆ, ನಿಮ್ಮ ಭಾಷೆಯಲ್ಲೂ ಉತ್ತರಕೊಡಬೇಕಾಗುತ್ತೆ. ನನ್ನ ಮೇಲೆ ಇಡಿ ದಾಳಿಯಾಗಿಲ್ಲ,ನಾನು ಗಾಜಿನ ಮನೆಯಲ್ಲಿಲ್ಲ. ನನ್ನ ಸಾರ್ವಜನಿಕ ಬದುಕಿನ ಬಗ್ಗೆ ಮಾತನಾಡುವವರು ನಿಮ್ಮ ಸಾರ್ವಜನಿಕ ಜೀವನದ ಬಗ್ಗೆ ತಿಳಿದುಕೊಂಡು ಮಾತನಾಡಿ. ನಾನು ನಿಮ್ಮ ಹೆಸರು ಉಲ್ಟಾ ಮಾಡಿ ಕೇಡಿ ಅನ್ನಬಹುದು. ನನಗೂ ಮಾತನಾಡುವುದಕ್ಕೆ ಬರುತ್ತದೆ” ಅಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು