Value Of Life: 10,000 ಬರೀ ಸಂಖ್ಯೆ ಅಲ್ಲ ಜೀವನದ ಮೌಲ್ಯ


Team Udayavani, Mar 10, 2024, 2:55 PM IST

5-uv-fusion

ಜೀವನದಲ್ಲಿ ಅದೆಷ್ಟೋ ಕನಸು ಕಂಡಿರುತ್ತೇವೆ. ಆ ಕನಸನ್ನು ನನಸಾಗಿಸುವ ಕನಸೂ ಇರುತ್ತದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನೂ ಮಾಡುತ್ತೇವೆ. ಸತಾಯಿಸುವ ಸಮಯದೆದುರು ಬಗ್ಗದೆ ಕಾಯುತ್ತೇವೆ. ನೋವು- ಅವಮಾನಗಳನ್ನು ನಗುವಿನಿಂದಲೇ ಎದುರಿಸುತ್ತೇವೆ. ಎದುರಿಸುತ್ತಲೇ ಇರುತ್ತೇವೆ.

ನನಗೂ 10,000 ದ ಕನಸೊಂದಿದೆ. ಎಲ್ಲರಿಗೂ 10,000 ಎಂದು ಕೇಳಿದ ತತ್‌ಕ್ಷಣ ನೆನಪಾಗುವುದು ಹಣ. ಆದರೆ ನನಗೆ 10,000ದ ಕಲ್ಪನೆಯೇ ಬೇರೆ. ನನಗೆ ಈ ಸಂಖ್ಯೆಯನ್ನು ಕೇಳಿದ ತತ್‌ಕ್ಷಣ ನೆನಪಾಗೋದು ಒಬ್ಬ ವ್ಯಕ್ತಿಯ ಸುಂದರ ಜೀವನ. ಅಂದರೆ ಸುಂದರ ಜೀವನಕ್ಕೆ ಒಬ್ಬ ವ್ಯಕ್ತಿಗೆ ಇದು ಬೇಕೇಬೇಕು.  10,000 ವನ್ನು ಬಿಡಿಸಿ ಬರೆದಾಗ 1-ಆರೋಗ್ಯ, 0-ಕೆಲಸ, 0-ಹಣ, 0-ಕುಟುಂಬ, 0-ಕನಸು ಎಂದಿಟ್ಟುಕೊಳ್ಳಿ.

ಇದೆಲ್ಲವನ್ನು ಹೊಂದಿದರೆ ಮಾತ್ರ ಜೀವನ ಇಲ್ಲ ಅಂದ್ರೆ ಜೀವನಕ್ಕೆ ಅರ್ಥಾನೇ ಇಲ್ಲ. ಅದರಲ್ಲೂ ಮೊದಲನೇ ಅಂಕೆ 1 ಇಲ್ಲದೇ ಇದ್ದರೆ ಉಳಿದವುಗಳಿಗೆ ಯಾವ ಬೆಲೆಯೂ ಇಲ್ಲ. ಅರ್ಥಾತ್‌ ಜೀವನದಲ್ಲಿ ನಾವೇನೇ ಕೆಲಸ ಮಾಡಬೇಕಾದರೂ, ಹಣ ಗಳಿಸಬೇಕೆಂದುಕೊಂಡರೂ, ಕುಟುಂಬ ಬೇಕೆಂದಿದ್ದರೂ, ಕನಸು ಕಂಡು ಅದನ್ನು ನನಸಾಗಿಸಬೇಕೆಂದಿದ್ದರೂ ಆರೋಗ್ಯ ಬೇಕೇಬೇಕು. ಆರೋಗ್ಯ ಇಲ್ಲದಿದ್ದರೆ ಏನನ್ನು ಮಾಡಲೂ ಸಾಧ್ಯವಿಲ್ಲ. ಇನ್ನೊಂದು ಅರ್ಥದಲ್ಲಿ ಆರೋಗ್ಯ ಇಲ್ಲದಿದ್ದರೆ ಏನಿದ್ದರೂ ಪ್ರಯೋಜನವಿಲ್ಲ.

ಒಬ್ಬ ವ್ಯಕ್ತಿ ಬಾಲ್ಯದಿಂದಲೇ ತಾನೊಂದು ಉತ್ತಮ ಕೆಲಸ ಪಡೆಯಬೇಕು, ಹಣ ಸಂಪಾದಿಸಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅದೆಷ್ಟೋ ರಾತ್ರಿ ನಿದ್ದೆಗೆಟ್ಟು, ಬಿಡುವಿಲ್ಲದೆ ಕೆಲಸ ಮಾಡಿರುತ್ತಾನೆ. ಅದರೆ ದುರಾದೃಷ್ಟವೋ ಎಂಬಂತೆ ಕೈಕೊಡುವ ಆರೋಗ್ಯ ಎಲ್ಲ ಪ್ರಯತ್ನವನ್ನೂ ಮಣ್ಣುಪಾಲು ಮಾಡಿಬಿಡುತ್ತದೆ.

ಆತ ಕಂಡ ಕನಸನ್ನು ನನಸು ಮಾಡಲಾಗದೇ, ಏನು ಮಾಡಬೇಕೆಂದು ತಿಳಿಯದೇ, ಯಾರ ಬಳಿಯೂ ಹೇಳಲಾಗದೇ ಕೊರಗುತ್ತಾನೆ. ಆದ್ದರಿಂದ ಜೀವನದಲ್ಲಿ ಏನು ಮಾಡಬೇಕಾದರೂ ಆರೋಗ್ಯ ಅತೀ ಮುಖ್ಯ. ನಾವು ಪ್ರತೀ ಕ್ಷಣ ದೇವರ ಬಳಿ ಒಳ್ಳೆಯ ಆರೋಗ್ಯಕ್ಕಾಗಿ ಬೇಡಿಕೊಳ್ಳೋಣ ಸೊನ್ನೆಗಳಿಗೆ ಅವುಗಳದ್ದೇ ಆದ ಬೆಲೆ, ಮಹತ್ವ ಬರುವಂತೆ ಮಾಡೋಣ.

ಕನಸು ಇಲ್ಲದೇ ಜೀವನ ಇಲ್ಲ.. ಕನಸು ನನಸಾಗಬೇಕಾದರೆ ಕೈಯ್ಯಲ್ಲಿ ಹಣ ಬೇಕು. ಹಣ ಬೇಕು ಎಂದರೆ ಅದಕ್ಕೆ ಕೆಲಸ ಬೇಕು. ಎಲ್ಲ ಕೆಲಸವನ್ನು ಸರಿಯಾಗಿ ಮಾಡಬೇಕೆಂದರೆ ಶರೀರದಲ್ಲಿ ಆರೋಗ್ಯ ಚೆನ್ನಾಗಿರಬೇಕು. ಇವೆಲ್ಲವೂ ಸಾಧಿಸಬೇಕೆಂದರೆ ಕುಟುಂಬ ನಮ್ಮ ಬೆನ್ನಿಗೆ ನಿಲ್ಲಬೇಕು. ಎಲ್ಲರ ಸಹಕಾರ ಬೇಕು.  ಹಾಗಾಗಿ 10, 000 ಬರೀ ಸಂಖ್ಯೆಯಲ್ಲ, ಅದು ಜೀವನದ ವ್ಯಾಖ್ಯಾನ.

  ಪ್ರಜ್ವಲ್‌ ಸಿ.

ಮಂಗಳೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.