UV Fusion: ಎಳೆಯರೊಂಗಿಗೆ ಗೆಳೆಯರಾಗಿ


Team Udayavani, Mar 15, 2024, 10:37 AM IST

5-uv-fusion

ಅಜ್ಜಿ ಕತೆ ಹೇಳುವ ಕಾಲವೊಂದಿತ್ತು. ತಂಗಾಳಿಯ ರಾತ್ರಿಯಲ್ಲಿ ತನ್ನ ಸುತ್ತಲೂ ಮೊಮ್ಮಕ್ಕಳನ್ನು ಕೂರಿಸಿಕೊಂಡು ವೈವಿಧ್ಯಮಯ ಕತೆಗಳನ್ನು ಹೇಳುತ್ತಿದ್ದರು. ರಾಮಾಯಣ, ಮಹಾಭಾರತ, ವೀರನಾರಿಯರು, ಕಾಲ್ಪನಿಕ ಕತೆಗಳು,ರಾಜರ ಕತೆಗಳು,ಸಾಹಸ ಕತೆಗಳು, ಭಯಂಕರ ಕತೆಗಳು ಹೇಗೆ ವಿವಿಧ ಬಗೆಯ ಕತೆಗಳನ್ನು ಹೇಳುತ್ತಿದ್ದರು.

ಇದರಿಂದ ಮಕ್ಕಳಲ್ಲಿ ಕಲ್ಪನಾಶಕ್ತಿ,ಆಲೋಚನಾ ಶಕ್ತಿ, ಆಲಿಸುವ ಕೌಶಲ, ಗಮನ ಕೇಂದ್ರೀಕರಿಸುವ ಕೌಶಲಗಳು ಅಜ್ಜಿಯ ಪ್ರೀತಿಯೊಂದಿಗೆ ಅಜ್ಜಿಯ ಮಡಿಲಿನಲ್ಲಿ ಬೆಳೆಯುತ್ತಿದ್ದವು. ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ,ಒಗ್ಗಟ್ಟು,ಸಹಕರಿಸುವ ಮನೋಭಾವನೆಯು ಬೆಳೆಯುತ್ತಿತ್ತು.

ಆದರೆ ಇಂದೇನಾಗಿದೆ….?

ಅವೆಲ್ಲವೂ ಈಗ ಮಾಯವಾಗಿದೆ. ಕತೆ ಹೇಳುವ ಅಜ್ಜಿಯ ಜಾಗದಲ್ಲಿ ಟಿ.ವಿ, ಮೊಬೈಲ್,‌ ಕಂಪ್ಯೂಟರ್‌ಗಳು ಕುಳಿತಿವೆ. ಇಂದಿನ ಮಕ್ಕಳೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಳೆಯುವಂತಾಗಿದೆ, ಟಿ.ವಿ, ಮೊಬೈಲ್‌ಗ‌ಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದರಿಂದ ಪರಸ್ಪರರಲ್ಲಿನ ಪ್ರೀತಿ, ಸಹಕಾರ,ಒಗ್ಗಟ್ಟು ಮನೋಭಾವನೆಗಳು ಇಲ್ಲವಾಗಿವೆ. ಏಕಾಂಗಿತನಕ್ಕೆ ಮಕ್ಕಳು ಮೊರೆ ಹೋಗುತ್ತಿದ್ದಾರೆ. ಕದ್ದುಮುಚ್ಚಿ ಮೊಬೈಲ್‌ ನೋಡುವುದು, ಅದರಲ್ಲೇ ಅತಿಯಾದ ಸಮಯ ಕಳೆಯುವುದನ್ನು ಮಾಡುತ್ತಿದ್ದಾರೆ. ಜಂಗಮವಾಣಿಯ ವ್ಯಾಮೋಹಕ್ಕೆ ಬಿದ್ದು ಎಲ್ಲರನ್ನೂ ಎಲ್ಲವನ್ನೂ ಮರೆಯುತ್ತಿದ್ದಾರೆ ಅದರ ದಾಸರಾಗುತ್ತಿದ್ದಾರೆ.

ಮೊಬೈಲ್‌ ಎನ್ನುವುದು ಮಕ್ಕಳ ಎಲ್ಲ ಬುದ್ಧಿಶಕ್ತಿಯನ್ನೂ ಕಸಿದುಕೊಳ್ಳುವ ಮಾಯಾಜಾಲವಿದ್ದಂತೆ ಅದು. ಮಕ್ಕಳು ಕೂತಲ್ಲಿ ನಿಂತಲ್ಲಿ ಎಲ್ಲೇ ಇದ್ದರೂ ಅವರ ಗಮನ ಮೊಬೈಲ್‌ ಕಡೆಗೇ ಇರುತ್ತದೆ. ಅಪ್ಪ, ಅಮ್ಮ, ಸ್ನೇಹಿತರು, ಸಂಬಂಧಿಕರು,

ಸಹೋದರ-ಸಹೋದರಿಯರು ಎಲ್ಲರನ್ನೂ ದೂರವಾಗಿಸಿ ಬಿಡುತ್ತದೆ ಈ ಮಾಯಾವಿ.

ಮಕ್ಕಳು ಇಂದು ರಜಾ ದಿನಗಳಲ್ಲಿ ಆಟ ಆಡುತ್ತಿದ್ದಾರೆ ..ಯಾವುದರಲ್ಲಿ? ಮೊಬೈಲ್‌ ನಲ್ಲಿ ಕಂಪ್ಯೂಟರ್‌ನಲ್ಲಿ ಇದರಿಂದ ಮಕ್ಕಳ ಮಾನಸಿಕ, ದೈಹಿಕ, ಸಾಮಾಜಿಕ ಬೆಳವಣಿಗೆಯಾಗುವುದೇ…? ಖಂಡಿತ ಇಲ್ಲ. ಬೇಡ, ಇಂತಹ ಅನುಭವಗಳು ಇಂತಹ ದಿನಗಳು ಬೇಡವೇ ಬೇಡ ನಾವು ಮತ್ತೆ ಹಳೆಯ ಜೀವನಕ್ಕೆ ಹೋಗಬೇಕು ಎಲ್ಲರೂ ಒಂದಾಗಬೇಕು, ಒಂದಾಗಿ ಚೆಂದಾಗಿ ಆಡಿ ಕುಣಿದು ಮಕ್ಕಳಲ್ಲಿ ಮಕ್ಕಳಾಗಿ ನಲಿದು ಆರೋಗ್ಯವಂತರಾಗಿ ಬಾಳಬೇಕು.

ಸಾಮಾಜಿಕ ಜಾಲತಾಣವೆನ್ನುವ ಮಾಯಾವಿಯ ಬದುಕಿನಿಂದ ಹೊರಬಂದು ನೈಜತೆಯ ಬದುಕಿಗೆ ಎಡೆಮಾಡಿಕೊಡಬೇಕು ನೈಜತೆಯ ಬದುಕಲ್ಲಿ ಬಾಳಬೇಕು.ಸಂಬಂಧಗಳು ಮತ್ತೆ ಬೆಸೆಯಬೇಕು ಅಜ್ಜಿಯ ಕತೆ ಕೇಳಲು ನಾವು ತಯಾರಾಗಬೇಕು.ಬೆಳದಿಂಗಳಲ್ಲಿ ಊಟ ಸವಿಯಲು ಸಿದ್ಧರಾಗಬೇಕು.

ಬದುಕು ಎಂದ ಮೇಲೆ ಜಂಜಾಟಗಳು ಬದುಕಿನ ದಿನನಿತ್ಯದ ಹೋರಾಟಗಳು ಇದ್ದದ್ದೇ ಎಲ್ಲೆಲ್ಲಿಯೂ ಯಾವಾಗಲೂ ಬ್ಯುಸಿ. ಈ ಬ್ಯುಸಿ ಬದುಕಿನಲ್ಲಿಯೂ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಅವರ ಭವಿಷ್ಯಕ್ಕಾಗಿ ಅವರ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗಾಗಿ ಇಂದಿನವರಾದ ನಾವು ಅಲ್ಪವಾದರೂ ತ್ಯಾಗ ಮಾಡಲು ಶ್ರಮಿಸಬೇಕಿದೆ.  ಅವರಿಗೆ ಪೂರ್ಣವಾಗಿ ಬದುಕು ಸಿಗಬೇಕಿದೆ.

ಮಕ್ಕಳ ಮನಸ್ಸು ಭವಿಷ್ಯವನ್ನು ಹಾಳುಮಾಡದೆ ಅವರ ಪರಿಪೂರ್ಣ ಬೆಳವಣಿಗೆಗೆ ನಾವು ಶ್ರಮಿಸಿ ಮಕ್ಕಳನ್ನು ನೈಜತೆಯಲ್ಲಿ ಬೆಳೆಸೋಣ,ಮೊಬೈಲ್‌ – ಅಂತರ್ಜಾಲ ಗಳ ಮಹಾಮಾರಿಯಿಂದ  ದೂರವಿರಿಸೋಣ ಸಂಬಂಧಗಳ ಮಹತ್ವವನ್ನು ತಿಳಿಸೋಣ.

ಮೊಬೈಲ್‌ ದಾಸ್ಯದಿಂದ ನಾವು ಮೊದಲು ಹೊರಬಂದು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸೋಣ.ನಿಜವಾದ ಪ್ರೀತಿಯ ತೋರಿ ಬೆಳೆಸೋಣ.

-ಭಾಗ್ಯ ಜೆ.

ಮೈಸೂರು

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.