Daughter: ಮಗಳೆಂಬ ಮನೆಯ ಮಹಾಲಕ್ಷ್ಮೀ


Team Udayavani, Mar 12, 2024, 4:30 PM IST

11-uv-fusion

ಸ್ತ್ರೀ ದೇವರ ವಿಶೇಷ ಸೃಷ್ಟಿ ಎಂಬುದು ಒಂದಿಲ್ಲೊಂದು ರೀತಿಯಲ್ಲಿ ನಮಗೆ ಅನುಭವಕ್ಕೆ ಬಂದಿರುತ್ತದೆ. ತಾಯಿಯಲ್ಲಿ ದೇವತೆಯನ್ನು ಕಂಡ ನಾನು ಈಗ ಮಗಳಲ್ಲಿ ಈ ಅದ್ಭುತ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ತಾಯಿಯ ಸ್ಥಾನವನ್ನು ಮಗಳು ತುಂಬಿದ್ದಾಳೆ. ಆಕೆಗಾಗಿ ಪ್ರತಿ ನಿಮಿಷವೂ ಮನಸ್ಸು ಮಿಡಿಯುತ್ತದೆ. ಆಕೆಯೇ ನನ್ನ ಬದುಕಿನ ದೊಡ್ಡ ಭಾಗವಾಗಿದ್ದಾಳೆ. ಆಕೆಯಿಂದಾಗಿ ಬೇಸರ ಬೇಸರ ವೆನಿಸುವುದಿಲ್ಲ, ಕಷ್ಟ ಭಾರವಾಗುವುದಿಲ್ಲ.

ಹೆಣ್ಣಾಗಲಿ ಗಂಡಾಗಲಿ ಹೆತ್ತವರಿಗೆ ಮಕ್ಕಳೇ ನಿಧಿಗಳು. ಆದರೆ ಕಾಲದ ಮಹಿ ಮೆಯೋ, ಸೃಷ್ಟಿಯ ಗರಿಮೆಯೋ, ಹೆಣ್ಣು ಮಗು ಜನಿಸಿದೆ ಎಂದಾಗ  ಮನೆಗೆ ಮಹಾಲಕ್ಷ್ಮೀ ಬಂದಳು ಎಂದು ಎಲ್ಲರೂ ಸಂಭ್ರಮಿಸುತ್ತಾರೆ. ಧಾನ್ಯದಲ್ಲಿ ಕಲ್ಲುಗಳೂ ಇದ್ದಂತೆ ಹೆಣ್ಣು ಮಗು ಎಂದರೆ ಹೀಗಳೆಯುವವರು ಈಗಲೂ ಇದ್ದಾರೆ. ಮಾನವೀಯತೆಯೇ ಇಲ್ಲದ ಜನರು ಮೋರಿಯಲ್ಲೊ, ಕಸದ ರಾಶಿಯಲ್ಲೋ ಬಿಸಾಡಿ ಹೋಗುತ್ತಾರೆ.

ಆದರೂ ಇತ್ತೀಚಿನ ದಿನಗಳಲ್ಲಿ ಗಂಡಿಗೆ ಸಮನಾಗಿ ಹೆಣ್ಣು ಮಕ್ಕಳು ನಿಂತು ವ್ಯವಹಾರ ನಡೆಸುತ್ತಾ ಒಬ್ಬಂಟಿಯಾಗಿ ಮನೆಯನ್ನು, ಮಕ್ಕಳನ್ನು, ಹೆತ್ತವರನ್ನು ನೋಡಿಕೊಳ್ಳುತ್ತಿರುವ ಉದಾಹರಣೆಗಳಿವೆ.

ಆಗಾಗ ನನ್ನ ತಾಯಿ ಹೇಳುತ್ತಿದ್ದ ಮಾತು ಈಗ ನಿಜ ಅನಿಸುತ್ತಿದೆ. ನಾಳೆ ದಿನ ನೀನು ತಾಯಿಯಾದಾಗ ಗೊತ್ತಾಗುತ್ತೆ ನನ್ನ ಬೆಲೆ ಏನೆಂದು. ಹೌದಲ್ಲವೇ ಹೆಣ್ಣಿಗೂ, ಗಂಡಿಗೂ ತಮ್ಮ ಹೆತ್ತವರ ಮೇಲೆ ಪ್ರೀತಿ ಇಮ್ಮಡಿಯಾಗುವುದು ತಾವು ತಂದೆ, ತಾಯಿಯಾದ ಮೇಲೆ ಎಂದರೆ ತಪ್ಪಾಗಲಾರದು.

ಅದರಲ್ಲೂ ಮಗಳು ಮನದಲ್ಲಿ- ಮನೆಯಲ್ಲಿ ಸಂಭ್ರಮ, ಪ್ರೀತಿ ತುಂಬುತ್ತಾಳೆ.  ಇದು ನನ್ನ ಅನುಭವಕ್ಕೂ ಬಂದ ಮಾತು. ಹಾಗಾಗಿ ಹೆಣ್ಣು ಮಗು ಎಂಬ ಅಸಡ್ಡೆ ತೋರದೆ ಆಕೆಗೂ ಸಮಾಜದಲ್ಲಿ ಸಮಾನವಾದ ಸ್ಥಾನ ಮಾನ ನೀಡುವ ನೆಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ.

-ಗ್ರೀಷ್ಮಾ

ಮಂಗಳೂರು

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.