ಜನರೇಷನ್ ಗ್ಯಾಪ್


Team Udayavani, Jul 4, 2021, 3:14 PM IST

ಜನರೇಷನ್ ಗ್ಯಾಪ್

ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ ಅಂತ ಆಗಾಗ ಮನೆಯ ಹಿರಿಯರು ಗೊಣಗುತ್ತಿರುವುದು ಕೇಳಿಯೇ ಇರುತ್ತೇವೆ. ಇದೊಂದು ಪ್ರತಿ ಮನೆಯ ಸಾಮಾನ್ಯ ಡೈಲಾಗ್‌. ಆದರೆ ನಾವಿದನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುವಂತಿಲ್ಲ. ಎಷ್ಟೋ ಕುಟುಂಬಗಳಲ್ಲಿ ಬಿರುಕು ಮೂಡಿ, ಮನಸ್ಸು ಹಾಳಾಗಲು ಇದೇ ಒಂದು ರೀತಿಯ ಮುಖ್ಯ ಕಾರಣ ಎನ್ನುವುದು ಕೂಡ ಅಷ್ಟೇ ನಿಜ. ಮೊದಲಿಗೆ ತಂದೆ-ತಾಯಿ ಹಾಗೂ ಮಕ್ಕಳ ಕುರಿತು ಹೇಳುವುದಾದರೆ ಬಹುಶಃ ಸ್ವಲ್ಪ ಗ್ರಾಮೀಣ ಭಾಗದಲ್ಲಿದ್ದುಕೊಂಡು ಶಿಕ್ಷಣವನ್ನು ಸರಿಯಾಗಿ ಪೂರೈಸದ ತಂದೆ ತಾಯಿಯರಿದ್ದಲ್ಲಿ ಅವರೊಂದು ರೀತಿಯ ಬಾವಿಯೊಳಗಿನ ಕಪ್ಪೆಯಂತೆ. ಹೊರ ಪ್ರಪಂಚದ ಪರಿವಿಲ್ಲದ ಇಂತಹ ಹೆತ್ತವರು ಹಾಗೂ ಅವರ ಮಕ್ಕಳ ನಡುವೆ ಮನೆಯ ಆಚಾರಗಳು, ಅಳವಡಿಸಿಕೊಂಡ ತಂತ್ರಜ್ಞಾನಗಳು, ಅಲ್ಲದೇ ಅವರ ಜೀವನ ಶೈಲಿಯ ತದ್ವಿರುದ್ಧ ಸಿದ್ಧಾಂತಗಳಿರುತ್ತವೆ.

ಸಮಯ ಹೆಚ್ಚು ವ್ಯಯವಾಗಿ ದೇಹಕ್ಕೆ ಆಯಾಸವಾದರೂ ಸರಿ ಇಂದಿನ ತಂತ್ರಜ್ಞಾನಗಳಿಗೆ ಸರ್ವತಾ ಒಗ್ಗುವ ಜಾಯಮಾನದವರಂತೂ ಅವರಲ್ಲ. ಮಕ್ಕಳಿಗೆ ಸುಲಭದಲ್ಲಿ ಆಗುವ ಕಾರ್ಯಗಳನ್ನು ಕಾಂಪ್ಲಿಕೇಟೆಡ್‌ ಮಾಡಲು ಸುತರಾಂ ಇಷ್ಟವಿರುವುದಿಲ್ಲ. ಜತೆಗೆ ಅಷ್ಟೊಂದು ತಾಳ್ಮೆ ಮತ್ತು ಸೂಕ್ಷ್ಮ ಮನಃಸ್ಥಿತಿಯ ಕೊರತೆಯೂ ಇರಬಹುದು. ಇದನ್ನೇ ಜನರೇಷನ್‌ ಗ್ಯಾಪ್‌ ಅನ್ನುವುದು. ಎಷ್ಟೋ ಹಿರಿ ಜೀವಗಳು ಈ ವಿಷಯದಿಂದ ಮಕ್ಕಳೊಂದಿಗೆ ಸರಿಯಾಗದೇ ಖನ್ನತೆಗೆ ಒಳಗಾದ ಸನ್ನಿವೇಶಗಳೂ ಇದೆ. ಇನ್ನು ತಂದೆ ತಾಯಿಯರ ರೀತಿ ರಿವಾಜುಗಳನ್ನು ಒಪ್ಪಿ ಕೊಳ್ಳಲಾಗದೆ ಅವರನ್ನು ಮಕ್ಕಳು ಬಿಟ್ಟು ಹೋದ ಪ್ರಸಂಗಗಳು ಸಾಕಷ್ಟು ಇವೆ. ಇನ್ನು ಕೆಲವೊಂದು ವಿವಾಹವಾದ ಅನಂತರ ಉಂಟಾಗುವ ಮನಸ್ತಾಪಗಳಿಗೂ ಇದೂ ಒಂದು ರೀತಿಯ ಕಾರಣವಿರಬಹುದು. ಬಂದ ಸೊಸೆಯ ಮೇಲೆ ಹೇರುವ ಸಂಪ್ರದಾಯಗಳು ಆಕೆಗೆ ಉಸಿರು ಗಟ್ಟಿಸುವಂತಾಗಿಸಬಹುದು.

ಸೊಸೆಗೆ ಆ ಮನೆಯ ಹಿರಿ ತಲೆಗಳ ಮನಃಸ್ಥಿತಿಯನ್ನು ಅರಿಯುವುದು ಕಷ್ಟ ಸಾಧ್ಯ. ಆಕೆ ಬೆಳೆದು ಬಂದ ರೀತಿ, ಪಡೆದ ಶಿಕ್ಷಣ ತಂತ್ರಜ್ಞಾನಗಳಿಗೆ ಒಗ್ಗಿಕೊಂಡ ರೀತಿ ಇವೆಲ್ಲವೂ ಹಿಂದಿನ ಜನರೇಷನ್‌ ನವರಿಗೆ ಸಹಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಈ ಅಂತರ ಸಂಸಾರದೊಳಗೆ ಒಡಕ್ಕನ್ನುಂಟು ಮಾಡಬಹುದು. ಕಾಲ್ನಡಿಗೆಯಿಂದ ಬಸ್‌, ಕಾರಿನವರೆಗೆ, ಪುಸ್ತಕದಿಂದ ಇ-ಬುಕ್‌, ಇ-ಪೇಪರ್‌ವರೆಗೆ, ಅರೆಯುವ ಕಲ್ಲಿನಿಂದ ಮಿಕ್ಸಿ ಗ್ರೆಯಿಂಡರ್‌ವರೆಗೆ, ಉಳುವ ಎತ್ತಿನಿಂದ ಟ್ರ್ಯಾಕ್ಟರ್‌, ಮಣ್ಣಿನ ಮಡಕೆಯಿಂದ ಸ್ಟೀಲ್‌ ಕುಕ್ಕರ್‌ಹೀಗೆ ಒಂದೇ ಎರಡೇ ಜನರೇಷನ್‌ಗೆ ತಕ್ಕಂತೆ ಕಾಲವೂ ತಂತ್ರಜ್ಞಾನವೂ ಬದಲಾಗುತ್ತಾ ಇದೆ. ಈಗ ಇದ್ದಂತೆ ಮುಂದೆ ನಮ್ಮ ಮಕ್ಕಳು ಮರಿಮಕ್ಕಳ ಕಾಲದಲ್ಲಿ ಇರಲಿಕ್ಕಿಲ್ಲ. ಅದಕ್ಕನುಗುಣವಾಗಿ ಹಿಂದಿನ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಈಗಿನ ಜನರೇಷನ್‌ಗೆ ಒಗ್ಗಿಕೊಂಡರೆ ಮಾತ್ರ ಎಲ್ಲವೂ ಸರಿಯಾಗಿ ಸಾಗುತ್ತದೆ. ಇಲ್ಲದೇ ಹೋದಲ್ಲಿ ಜನರೇಷನ್‌ ಗ್ಯಾಪ್‌ ಗಂಭೀರ ಸಮಸ್ಯೆಯಾಗುವುದು ಖಂಡಿತಾ!

 

ಚೈತನ್ಯಾ ಪ್ರಕಾಶ್‌

ಶ್ರೀರಾಮ ಪ.ಪೂ. ಕಾಲೇಜು, ಕಲ್ಲಡ್ಕ

ಟಾಪ್ ನ್ಯೂಸ್

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.