Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ


Team Udayavani, Apr 24, 2024, 3:58 PM IST

11-mallige

ಎಲ್ಲ ಶುಭ ಸಮಾರಂಭಗಳಲ್ಲಿ ಮಲ್ಲಿಗೆ ಹೂವು ಅತ್ಯಂತ ಮಹತ್ವವನ್ನು ಪಡೆದಿದೆ. ಕೇವಲ ಶುಭ ಸಮಾರಂಭ ಮಾತ್ರವಲ್ಲ ದೇವರ ಪೂಜೆಗೂ ಮಲ್ಲಿಗೆ ಬಹಳ ವಿಶೇಷ.

ನಿಮಗೆ ಗೊತ್ತಾ ಈ ಮಲ್ಲಿಗೆಯ ನಡುವಲ್ಲಿ ದೇವರು ಮಲಗುತ್ತಾರೆ. ಆ ಸಮಯದಲ್ಲಿ ಮಲ್ಲಿಗೆಯ ಬೆಲೆ ಗಗನಕ್ಕೇರುತ್ತದೆ. ಜತೆಗೆ ಆ ಸಮಯದಲ್ಲಿ ದೇವಸ್ಥಾನದ ಒಳಗೆ ಹೋದರೆ ಮಲ್ಲಿಗೆಯ ಪರಿಮಳ ಒಂದು ರೀತಿಯ ಅಮೋಘ ಅನುಭವ ನೀಡುತ್ತದೆ ಎಂದು.

ಇಲ್ಲಿ ಯಾವುದರ ಬಗ್ಗೆ ಹೇಳುತ್ತಿದ್ದೇನೆಂದರೆ ಅದು ಬಪ್ಪನಾಡಿನಲ್ಲಿ ನಡೆಯುವ ಶಯನೋತ್ಸವದ ಕುರಿತು. ಶಯೋತ್ಸವ ಎಂದರೆ ಇಲ್ಲಿ ಭಕ್ತರು ಹರಕೆಯ ರೂಪದಲ್ಲಿ ತಂದ ಮಲ್ಲಿಗೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಂತಹ ಮಲ್ಲಿಗೆಯಲ್ಲಿ ದೇವರು ಮಲಗುವಂತಹ ಸನ್ನಿವೇಶ ಈ ಸುಂದರ ಕ್ಷಣವನ್ನು ನೋಡಲು ಎರಡು ಕಣ್ಣು ಸಾಲದು.

ಈ ಸುಂದರ ಕ್ಷಣ ನಡೆಯುವುದು ಬಪ್ಪನಾಡಿನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ. ಶಿವರಾತ್ರಿಯಿಂದ ದೇವರಿಗೆ ಬಲಿ ಉತ್ಸವ ನಡೆದು ಕೊನೆಯ ಎಂಟು ದಿನದಲ್ಲಿ ಮೊದಲ ದಿನ ಸಸಿಹಿತ್ಲು ಭಗವತಿ ಭೇಟಿಯ ಅನಂತರ ಧ್ವಜಾರೋಹಣ ನಡೆದು ರಥೋತ್ಸವಕ್ಕಿಂತ ಮೊದಲ ಹಗಲು ರಥೋತ್ಸವದ ದಿನ ಶಯನೋತ್ಸವ ನಡೆಯುತ್ತದೆ. ಇಲ್ಲಿನ ವಿಶೇಷ ಏನೆಂದರೆ ರಥೋತ್ಸವದ ದಿನ ಸಸಿಹಿತ್ಲು ಭಗವತಿ ಭೇಟಿಯಾಗಿ ಅನಂತರ ದೇವಸ್ಥಾನವನ್ನು ನಿರ್ಮಿಸಿದ ಮುಸ್ಲಿಂ ವ್ಯಾಪಾರಿ ಬಬ್ಬ ಬ್ಯಾರಿ ಕುಟುಂಬಸ್ಥರಿಗೆ ನೀಡಿದ ಅನಂತರ ರಥೋತ್ಸವದ ನಡೆಯುತ್ತದೆ.

ಕರಾವಳಿಯ ಅನೇಕ ಕಡೆಗಳಿಂದ ಈ ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷಗಟ್ಟಲೆಯಲ್ಲಿ ಮಲ್ಲಿಗೆ ಸಲ್ಲಿಕೆಯಾಗುತ್ತದೆ. ಕಳೆದ ವರುಷ ನೋಡುವುದಾದರೆ ಸುಮಾರು ನಾಲ್ಕು ಲಕ್ಷ ಅಟ್ಟೆ ಮಲ್ಲಿಗೆ ಉಡುಪಿ, ಮಂಗಳೂರು ಭಾಗದಿಂದ ದೇವಿಗೆ ಸಮರ್ಪಿತವಾಗಿದೆ.

ಹರಕೆಯ ರೂಪದಲ್ಲಿ ಭಕ್ತರು ತಮ್ಮ ಇಚ್ಛೆಯಂತೆ ಒಂದು ಚೆಂಡು ಅಥವಾ ಒಂದು ಅಟ್ಟೆ ಮಲ್ಲಿಗೆಯನ್ನು ದೇವಿಗೆ ಸಮರ್ಪಿಸುತ್ತಾರೆ. ದುರ್ಗಾಪರಮೇಶ್ವರಿಗೆ ಶಯನದ ಅನಂತರ ಮರುದಿನ ಮುಂಜಾನೆ ಪೂಜೆ ನಡೆದು ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.

ಈ ಶಯನದ ಸಂದರ್ಭದಲ್ಲಿ ಎರಡು ದಿನಗಳ ಕಾಲ ದೇವಸ್ಥಾನ ಸಂಪೂರ್ಣ ಮಲ್ಲಿಗೆಯ ಸುವಾಸನೆಯಿಂದ ಕೂಡಿರುತ್ತದೆ. ಇಂತಹ ಸುಂದರ ಕ್ಷಣವನ್ನು ನೋಡಲು ಅನುಭವಿಸುವ ಒಂದು ರೀತಿ ಹಿತವಾಗಿರುತ್ತದೆ.

ಈ ವರುಷ ಮಾರ್ಚ್‌ 24ರಿಂದ 31ರ ವರೆಗೆ ಬಪ್ಪನಾಡಿನ ಜಾತ್ರಾ ಮಹೋತ್ಸವ ನಡೆದಿದ್ದು, ಮಾ. 30ರಂದು ಮಧ್ಯಾಹ್ನ ಹಗಲು ರಥೋತ್ಸವದ ಅನಂತರ ಸಂಜೆ ದೇವಿಗೆ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಿಸಲಾಗಿತ್ತು. ಇಂತಹ ಅಪರೂಪದ ಸುಂದರ ಕ್ಷಣವನ್ನು ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು.

-ಕಾರ್ತಿಕ್‌ ಮೂಲ್ಕಿ

ಎಸ್‌ಡಿಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

12

The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Casino Financial Institution Repayment Methods: A Comprehensive Guide

How to Play Roulette Free Online

How to Win with Free Casino Games Slots

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.