ಪ್ರಕೃತಿಯನ್ನು ಪ್ರೀತಿಸಿ, ಉಳಿಸಿ ಬೆಳೆಸೋಣ


Team Udayavani, Jun 5, 2020, 1:15 PM IST

ಪ್ರಕೃತಿಯನ್ನು ಪ್ರೀತಿಸಿ, ಉಳಿಸಿ ಬೆಳೆಸೋಣ

ಸಾಂದರ್ಭಿಕ ಚಿತ್ರ

ಗಿಡ, ಮರ-ಬೆಳೆಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತಾವರಣ ಮತ್ತು ದಿನೇದಿನೆ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ. ಇನ್ನೊಂದೆಡೆ ಲಾಕ್‌ಡೌನ್‌ ಪರಿಣಾಮ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆಯಾದರೂ ಇದು ನಿರಂತರವಲ್ಲ ಎಂಬುದೇ ಬೇಸರ.

ಜೂನ್‌ 5 ಬಂತೆಂದರೆ ಸಾಕು ಎಲ್ಲರ ಸ್ಟೇಟಸ್‌ಗಳಲ್ಲೂ ಪರಿಸರ ಸಂರಕ್ಷಣೆಯ ವಿಚಾರಗಳು ವಿಜೃಂಭಿಸುತ್ತವೆ. ಪರಿಸರ ಸಂರಕ್ಷಣೆ ಎಂಬುದು ಒಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯದ ಕಾಯಕವಾದರೆ ಸಂಭವಿಸುವಂತಹ ವಿಕೋಪವನ್ನು ತಡೆಯಬಹುದು. ನಮ್ಮ ಸುತ್ತ ¤ಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೆ ಹಾನಿಯಾದಂತೆ.

ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಕೊಂಡಾಡುವವರ ಪೈಕಿ ಯುವಕರೇ ಹೆಚ್ಚು! ಆದರೆ ಅದೇ ವಿದ್ಯಾವಂತರೇ ಇಂದು ಹೆಚ್ಚು ಪರಿಸರವನ್ನು ಹಾಳು ಮಾಡುತ್ತಿರುವುದು ಶೋಚನೀಯ. ನಮ್ಮ ಪೂರ್ವಜರು ಪ್ರಕೃತಿ ಜತೆಗೆ ಬದುಕಿದವರು. ಆದರೆ ನಾಗರಿಕತೆ ಬೆಳೆದಂತೆ ಪ್ರಕೃತಿಯ ಮಾರಣಹೋಮವೇ ನಡೆಯುತ್ತಿದೆ. ಪರಿಸರದ ಕಾಳಜಿ ಯಾರಿಗೂ ಇಲ್ಲವಾಗಿದೆ. ಪ್ರತಿ ವರ್ಷ ಜೂನ್‌ 5 ರಂದು ನಾವೆಷ್ಟು ಪರಿಸರವನ್ನು ಹಾನಿ ಮಾಡಿದ್ದೇವೆ ಎಂದು ಲೆಕ್ಕಾಚಾರ ಮಾಡುವಂತಾಗಿದೆ.

ಭೂಮಿಯ ಪ್ರತಿಯೊಂದು ಘಟಕವೂ ಸಹ ಭೌತಿಕ ಪರಿಸರದ ಮೇಲೆ ಅವಲಂಬಿತವಾಗಿದೆ. ಸಸ್ಯ, ಪ್ರಾಣಿ ಸೂಕ್ಷ್ಮಜೀವಿಗಳು ಮಳೆ, ಗಾಳಿ, ಮಣ್ಣು ಪ್ರತಿಯೊಂದು ಜತೆಗೂಡಿ ಒಂದು ಸುಂದರವಾದ ಪರಿಸರದ ನಿರ್ಮಾಣವಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ದೇಶದಲ್ಲಿ ಶೇ. 75% ರಷ್ಟು ಜನರು ಪರಿಸರವನ್ನು ನಂಬಿಕೊಂಡಿದ್ದು ಮಳೆಯನ್ನೇ ಕೃಷಿಗೆ ನೆಚ್ಚಿಕೊಂಡಿದ್ದರು ಮಾತ್ರವಲ್ಲದೆ ಪ್ರಕೃತಿಯನ್ನು ಅನುಸರಿಸುತ್ತಿದ್ದರು. ಅದರಿಂದ ಆಗುವ ಪ್ರಯೋಜನ ಪ್ರಕೃತಿಯಲ್ಲಿ ಅಪಾರವಾಗಿತ್ತು. ಮಾನವರಲ್ಲಿ ಜಾತಿ-ಧರ್ಮ ಭೇದ-ಭಾವಗಳಿದ್ದರೆ ಗಿಡಮರಗಳು ಭೇದ-ಭಾವಗಳಿಲ್ಲದೆ ಬೆಳೆದು ಮಳೆ, ಗಾಳಿ, ಖನಿಜಗಳು ಈ ರೀತಿ ಅಪಾರವಾಗಿ ಉಳಿದಿತ್ತು.

ಕೆಲವರಿಗೆ ಸೂರ್ಯನಿಂದ ಬರುವ ಬಿಸಿಲು ಇರುವ ಸಂದರ್ಭದಲ್ಲಿ ಈ ಪರಿಸರವೇ ತಂದೆಯ ರೀತಿ ಪೋಷಣೆ ಮಾಡುತ್ತಿತ್ತು. ಆದರೆ ಇಂದು ಪರಿಸರವನೆಲ್ಲ ನಾಶಪಡಿಸುತ್ತಿದ್ದಾರೆ. ಸೊಗಸಾಗಿ ಬೆಳೆದುನಿಂತ ಪ್ರತಿಯೊಂದು ಮರವನ್ನು ಸಹ ಈ ದಿನಗಳಲ್ಲಿ ಜನರು ಕಡಿದು ಬಿಡುತ್ತಿದ್ದಾರೆ. ಎಷ್ಟೇ ಕಡಿದರೂ ಮತ್ತೂಮ್ಮೆ ಚಿಗುರುವ ಗಿಡಮರವದು. ನಾವೆಲ್ಲ ಪ್ರತಿದಿನ ಪ್ಲಾಸ್ಟಿಕ್‌ ಬಳಕೆ ಮಾಡಿ ಪರಿಸರವನ್ನೆಲ್ಲ ನಾಶಪಡಿಸುತ್ತಿದ್ದೇವೆ. ಜಲ, ವಾಯು ಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಶುದ್ಧ ಗಾಳಿ, ನೀರನ್ನು ಹಣಕೊಟ್ಟು ಖರೀದಿಸುವ ಪರಿ ಸ್ಥಿತಿ ನಿರ್ಮಾ ಣ ವಾ ಗಿದೆ. ಮರಗಳ ನಾಶದಿಂದ ಪರಿಸರವನ್ನು ಸರ್ವನಾಶ ಮಾಡಿದಂತಾಗುತ್ತದೆ. ಈಗಲೇ ನಾವೆಲ್ಲ ಕೈಜೋಡಿಸಿ ಗಿಡ-ಮರಗಳನ್ನು ಬೆಳೆಸಿ ಭಾರತವನ್ನು ಒಂದು ಸುಂದರವಾದ ದೇಶವನ್ನಾಗಿ ನಿರ್ಮಿಸೋಣ.

– ಪ್ರಭಾಕರ ಪಿ., ಶ್ರೀ ಸಿದ್ಧಾರ್ಥ ಮಾಧ್ಯಮ
ಅಧ್ಯಯನ ಕೇಂದ್ರ, ತುಮಕೂರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.