Old Students Get Together: ಹಳೇ ನೆನಪುಗಳ ಮೆಲುಕು ಸಮ್ಮಿಲನ


Team Udayavani, Mar 21, 2024, 3:05 PM IST

11-uv-fusion

ಹದಿಹರೆಯವನ್ನು ಮತ್ತೆ ಮೈ ತುಂಬಿಕೊಂಡ ಯುವ ಮನಸುಗಳ ಒಗ್ಗೂಡುವಿಕೆಯ ಮಿಲನ “ಸಮ್ಮಿಲನ’. ಎರಡು ತಿಂಗಳಿಂದ ಈ ಕಾರ್ಯಕ್ರಮಕ್ಕಾಗಿ ಹಳೇ ವಿದ್ಯಾರ್ಥಿಗಳು ಮಾಡಿದ ತಯಾರಿ, ಪಟ್ಟ ಪರಿಶ್ರಮ, ಅದನ್ನು ಮೀರಿದ ಖುಷಿ ಈ ಸಂಭ್ರಮದ ದಿನ ಎಲ್ಲರ ಮೊಗದಲ್ಲಿ ಕಾಣಸಿಕ್ಕಿತ್ತು. ಈ ಸಂಭ್ರಮಕ್ಕೆ ದಿನಕ್ಕೊಂದು ಆಮಂತ್ರಣ ಪತ್ರಿಕೆ ತಯಾರಾಗುತ್ತಿತ್ತು – ಎಲ್ಲ ಪ್ರಾಕ್ತನ ವಿದ್ಯಾರ್ಥಿಗಳ ವಾಟ್ಸಾಪ್‌ ಸ್ಟೇಟಸ್‌ನಲ್ಲೂ ರಾರಾಜಿಸುತ್ತಿತ್ತು. ಈ ಸಂಭ್ರಮದ ದಿನಕ್ಕಾಗಿ ಎಲ್ಲರ ಕುತೂಹಲ ಅಂದೇ ಆರಂಭವಾಗಿತ್ತು.

ಅಂದು ಬೆಳಗ್ಗೆ ಅಂದ ಚಂದದ ಉಡುಗೆ ತೊಟ್ಟು ಪ್ರಾಕ್ತನ ವಿದ್ಯಾರ್ಥಿಗಳು ಬರುತಿದ್ದರೆ ನೋಡಲು ಕಣ್ಣಿಗೆ ಹಬ್ಬ. ಮನೆಗೆ ಮಕ್ಕಳು ಬರುವುದನ್ನು ತಂದೆ ತಾಯಿಯರು ಕಾಯುವಂತೆ ಕಾಲೇಜಿನ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳನ್ನು ಸ್ವಾಗತಿಸಲು ದಾರಿ ಕಾಯುತ್ತಿದ್ದರು. ತಾವು ಕಲಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆತರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವರು ಅವರ ಶಿಕ್ಷಕರೇ. ಆ ಖುಷಿ ಎಲ್ಲ ಉಪನ್ಯಾಸಕರ ಮುಖದಲ್ಲೂ ಮಿಂಚುತ್ತಿತ್ತು.

ತಮಗೆ ಮಾರ್ಗದರ್ಶನ ನೀಡುತ್ತಿದ್ದ ಎಲ್ಲ ಉಪನ್ಯಾಸಕರನ್ನು ನೋಡಿದ ಆ ಹಳೆ ವಿದ್ಯಾರ್ಥಿಗಳ ಮನಸು ಮಳೆಯಾಯಿತು. ಅದೆಷ್ಟೋ ವರ್ಷದ ಅನಂತರ ತಮ್ಮ ಉಪನ್ಯಾಸಕರನ್ನು, ಕಾಲೇಜನ್ನು ನೋಡಿ ನಿಷ್ಕಲ್ಮಶ ಮನಸು ತುಂಬಿ ಹೋಯಿತು. ತಾವೇ ಆಡಿ, ಹಾಡಿ, ಕುಣಿದು ಕುಪ್ಪಳಿಸಿದ ವೇದಿಕೆಗೆ ಮತ್ತೂಮ್ಮೆ ಬಂದಾಗ ಅವರಲ್ಲಾದ ಖುಷಿ ಮಾತಿಗೆ ನಿಲುಕದ ಅನುಭವ.

ಸಭಾ ಕಾರ್ಯಕ್ರಮ ಮುಗಿದ ಅನಂತರ ಶುರುವಾಯಿತು ನೋಡಿ ನಿಜವಾದ ಸಂಭ್ರಮ. ವೇದಿಕೆ ಮೇಲೆ ಮತ್ತೂಮ್ಮೆ ಹಾಡಿ ಕುಣಿಯಲು ಬಂದರು ಕಾಲೇಜಿನ ಪೂರ್ವ ಸಾಂಸ್ಕೃತಿಕ ಪ್ರತಿಭೆಗಳು. ನೃತ್ಯ, ಯಕ್ಷಗಾನ, ಕಥಕ್‌, ಹಾಡು, ನಾಟಕ ಒಂದಾ ಎರಡಾ? ವೃತ್ತಿ ಬದುಕಿನ ಜಂಜಾಟ ಬದಿಗಿಟ್ಟು ಮತ್ತೆ ವಿದ್ಯಾರ್ಥಿ ಜೀವನಕ್ಕೆ ಮರಳಿದ ಸಂಭ್ರಮ ಎಲ್ಲರಲ್ಲಿ.

ಕಾಲೇಜು ಮುಗಿದು ಅದೆಷ್ಟೇ ವರ್ಷ ಉರುಳಿದರೂ, ಈಗ ಯಾವುದೇ ವೃತ್ತಿ ಮಾಡುತ್ತಿದ್ದರೂ ಅದನ್ನೆಲ್ಲ ಒಂದು ದಿನದ ಮಟ್ಟಿಗೆ ಬದಿಗೊತ್ತಿ ಬಂದು ಸೇರಿದ್ದರು ಎಲ್ಲರೂ. ತಮ್ಮ ಸ್ನೇಹಿತರ ಜತೆ ಕಾಲೇಜಿನಲ್ಲಿ ಕಳೆದ ಪ್ರತೀ ಕ್ಷಣಗಳನ್ನು ಮೆಲುಕು ಹಾಕುತ್ತಾ, ತಾವು ಓದಿದ ತರಗತಿ ಕೊಠಡಿಗೆ ಹೋಗಿ ಒಂದೆರಡು ಕ್ಷಣ ಕಳೆದು ಬಂದರು. ಅದೆಷ್ಟೋ ವರ್ಷದ ಅನಂತರ ಮತ್ತೆ ತಮ್ಮ ಸ್ನೇಹಿತರ, ಉಪನ್ಯಾಸಕರ, ಜೂನಿಯರ್, ಸೀನಿಯರ್ನ ಬೇಟಿಯಾಗಿ ತಮ್ಮ ಅಮೂಲ್ಯ ಸಮಯವನ್ನು ಎಲ್ಲರೊಂದಿಗೆ ಸಂತಸದಿಂದ ಕಳೆದರು.

ಈ ಬಿಡುವಿಲ್ಲದ ಸಮಯದಲ್ಲಿ ಒಂದು ದಿನ ಬಿಡುವು ಮಾಡಿಕೊಂಡು ಬಂದು ಎಲ್ಲರೂ ಮತ್ತೆ ಮಗುವಾದ ದಿನ ಎಲ್ಲರಿಗೂ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.

ರಶ್ಮಿ ಉಡುಪ

ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.