ರಕ್ಷಾಬಂಧನ ಒಂದು ಕೇವಲ ಆಚರಣೆಯಲ್ಲ; ಹೀಗಿದೆ ಅದರರ್ಥ


Team Udayavani, Aug 3, 2020, 12:15 PM IST

rakshabandhan-img

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹಬ್ಬಗಳ  ಮಹತ್ವವನ್ನು ಅರಿತು ಆಚರಿಸಿದಾಗ ಅದರ ನೈಜ ಆಶಯ ಅರ್ಥವಾಗುತ್ತದೆ.

ಪ್ರತೀ ಹಬ್ಬದ ಹಿಂದೆ ಅದರದೇ ವೈಶಿಷ್ಟ್ಯಇದೆ. ‘ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎಂಬ ಮಾತಿದೆ.

ಪುರಾಣ, ಚರಿತ್ರೆ ಇತಿಹಾಸವನ್ನು ಓದಿ ಅರ್ಥೈಸಿಕೊಳ್ಳಬೇಕಾಗಿದೆ.  ಇದು ಇಂದಿನ ಅಗತ್ಯತೆಯೂ ಹೌದು.

ಶ್ರೀಕೃಷ್ಣನ ಕೈಗೆ ಗಾಯವಾಗಿ ನೆತ್ತರು ಸುರಿದಾಗ, ತನ್ನ ಸೀರೆಯ ಅಂಚನ್ನು ಹರಿದು ಶ್ರೀಕೃಷ್ಣನ ಕೈಮಣಿಕಟ್ಟಿಗೆ ಪಟ್ಟಿ ಕಟ್ಟಿದ್ದು ದ್ರೌಪದಿ. ಪ್ರತಿಯಾಗಿ ಶ್ರೀಕೃಷ್ಣ ಆಕೆಯ ವಸ್ತ್ರಾಪಹರಣದ ವೇಳೆ ನೆರವಿಗೆ ಬಂದ ಎಂಬ ಉಲ್ಲೇಖ ಮಹಾಭಾರತದಲ್ಲಿದೆ.

ಇತಿಹಾಸದಲ್ಲಿಯೂ ಇಂತಹ ಹಲವಾರು ಉದಾಹರಣೆಗಳು ಸಿಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಎಂದರೆ ಅಲೆಗ್ಸ್ಯಾಂಡರ್ ದಿ ಗ್ರೇಟ್ ಭಾರತದ ಮೇಲೆ ದಂಡೆತ್ತಿ ದಾಳಿ ಮಾಡಲು ಬರುತ್ತಾನೆ. ಅವನನ್ನು ಹಲವು ರಾಜರುಗಳು ಎದುರಿತ್ತಾರೆ. ಅವರ ಪೈಕಿ ಪೋರಸ್ ಎಂಬ ಬಲಿಷ್ಠ ದೊರೆ ಅಲೆಗ್ಸ್ಯಾಂಡರ್ ಗೆ ಪ್ರಬಲ ಎದುರಾಳಿಯಾಗಿದ್ದನು. ‘ಯುದ್ಧದಲ್ಲಿ ತನ್ನ ಗಂಡನ ಕೊಲ್ಲದಿರು’ ಎಬ ಸಂದೇಶದೊಂದಿಗೆ ಪೋರಸ್ ಗೆ ದಾರವೊಂದನ್ನು ಅಲೆಗ್ಗ್ಸಾಂಡರ್ ಪತ್ನಿ ರೋಕ್ಸಾನ ಕಳುಹಿಸಿಕೊಡುತ್ತಾಳೆ.

ಇನ್ನೊಂದು ಉಲ್ಲೇಖದಲ್ಲಿ ಬಹದ್ದೂರ್  ಷಾ ನ ವಿರುದ್ಧ ಹೋರಾಡಲು ಚಿತ್ತೂರಿನ ವಿಧವೆ ರಾಣಿ ಕರ್ಣಾವತಿ ರಕ್ಷೆಯ ದಾರವನ್ನ ಮೊಘಲ್ ಚಕ್ರವರ್ತಿ ಹುಮಾಯೂನನಿಗೆ ಕಳುಹಿಸಿ ಸಹಾಯ ಬೇಡುವ ನಿದರ್ಶನ ಚರಿತ್ರೆಯಲ್ಲಿದೆ. ಇಷ್ಟೇ ಅಲ್ಲದೇ ವೀರತನಕ್ಕೆ ಹೆಸರಾದ ರಜಪೂತರು ಯುದ್ಧಕ್ಕೆ ಹೊರಟಾಗ ಅವರ ಪತ್ನಿಯಿಂದ ರಕ್ಷಾ ದಾರವೊಂದನ್ನ ಕೈಗೆ ಕಟ್ಟಿಸಿಕೊಳ್ಳುವ ವಾಡಿಕೆಯಿತ್ತಂತೆ. ಇವೆಲ್ಲವೂ ಇಂದು ಆಚರಿಸಲಾಗುತ್ತಿರುವ ರಕ್ಷಾ ಬಂಧನದ ಸಾರವನ್ನ ಸಾರುವ ಕಥೆಗಳು.

ದೇಶದೆಲ್ಲೆಡೆ ಸಂಭ್ರಮ ಸಡಗರದಿ ಪವಿತ್ರ ರಾಖಿ ಹಬ್ಬ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ, ಕಜರಿ ಪೌರ್ಣಿಮೆ ಆಚರಣೆ ಪ್ರಸಿದ್ಧಿ. ಗೋಧಿ, ಬಾಲ್ರಿ ಕೃಷಿ ಚಟುವಟಿಕೆಗಳು ಆರಂಭವಾಗುವ ದಿನ ಇದಾಗಿದೆ. ಪಶ್ಚಿಮ ಬಂಗಾಲದಲ್ಲಿ, ಸಮುದ್ರ ರಾಜನಿಗೆ ಈ ಪೌರ್ಣಮಿ ಆಚರಣೆಯಂದು ತೆಂಗಿನಕಾಯಿ ನಾರಿಯಲ್ ಅರ್ಪಿಸಲಾಗುತ್ತದೆ. ನಮ್ಮ ದಕ್ಷಿಣ ಭಾರತದಲ್ಲಿ ಶ್ರಾವಣ ಪೌರ್ಣಮಿಯಂದು ನಡೆಯೋ ಮಹತ್ವಪೂರ್ಣವಾದ ಆಚರಣೆಯೇ ರಕ್ಷಾಬಂಧನ ಹಬ್ಬ.

ಈ ದಿನದಂದು ಸಹೋದರರ ಶ್ರೀರಕ್ಷೆ ತನ್ನ ಮೇಲಿರಲೆಂಬ ಆಶಯದೊಂದಿಗೆ, ಸಹೋದರಿಯು ತನ್ನ ಸಹೋದರರಿಗೆ ಆರತಿ ಮಾಡಿ ಬಲಗೈಗೆ  ರಕ್ಷೆಯ ಪ್ರತೀಕವಾಗಿ ಕೇಸರಿ ದಾರ ಕಟ್ಟಿ, ಸಿಹಿ ತಿನ್ನಿಸುವುದು ಪ್ರತೀತಿ. ಕಟ್ಟುವುದು ಕೇವಲ ಒಂದು  ದಾರ, ಒಂದು ದಿನದ ಆಚರಣೆ ಇರಬಹುದು. ದಾರ ಕೆಲವೇ ದಿನ ಕೈಯಲ್ಲಿರಬಹುದು… ಆದರೆ ಮಲ್ಲಿಗೆಯ ಕಂಪು ಊರೆಲ್ಲ ಪಸರಿಸುವಂತೆ, ಅಣ್ಣ ತಂಗಿಯ ಸಂಬಂಧವನ್ನ  ಜಗತ್ತಿಗೇ ಸಾರುವ, ನವಿರಾದ, ಮಧುರವಾದ ಈ ಪವಿತ್ರ ಬಾಂಧವ್ಯಕ್ಕೆ ಸರಿಸಾಟಿ ಇನ್ಯಾವುದೂ ಇರಲಾರದು. ರಾಖಿ ಕಟ್ಟೋಣ , ಸಿಹಿ ಹಂಚೋಣ, ಇಡೀ ಜಗತ್ತಿಗೆ ಪವಿತ್ರ ಸಂದೇಶ ಸಾರೋಣ.

 ಮಲ್ಲಿಕಾ ಕೆ. ಮಂಗಳೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.