Relationship: ಸಮಯದೊಂದಿಗೆ ಬದಲಾಗುವ ಸಂಬಂಧ ಅವಶ್ಯವೇ?


Team Udayavani, Dec 3, 2023, 7:15 AM IST

9-uv-fusion

ಸಂತೋಷ ಅಥವಾ ದುಃಖವಿರಲಿ ಜತೆಗಿರುವ ಹಾಗೂ ಜತೆಗೂಡುವ ಬಂಧನವೇ ಗೆಳೆತನ. ಗೆಳೆತನ ಎಷ್ಟು ವಿಸ್ಮಯವೆಂದರೆ ಸಮಯ ಬದಲಾದಂತೆ ಗೆಳೆಯ ಗೆಳತಿಯರು ಬದಲಾಗುತ್ತಾರೆ. ಹಲವರಲ್ಲಿ ಕೆಲವರಷ್ಟೇ ಉಳಿಯುತ್ತಾರೆ. ಉಳಿದವರು ನೆನಪುಗಳನ್ನು ಬಿಟ್ಟು ಹೊರಟುಬಿಡುತ್ತಾರೆ.

ಗೆಳೆತನದ ವಿಶೇಷ ಎಂದರೆ ಇದಕ್ಕೊಂದು ಚೌಕಟ್ಟಿಲ್ಲ. ಕೆಲವರು ಜೀವಕ್ಕೆ ಜೀವ ಕೊಡಲು ತಯಾರಿರುತ್ತಾರೆ. ಬದುಕಿನ ಕೊನೆಯವರೆಗೂ ಎಲ್ಲ ಸಂದರ್ಭಗಳಲ್ಲೂ ಜತೆಗೆ ನಿಲ್ಲುತ್ತಾರೆ. ಇನ್ನೂ ಕೆಲವರು, ಗೆಳೆಯರು ಅನಿಸಿಕೊಂಡವರು ಸ್ವಾರ್ಥಿಗಳಾಗಿಬಿಡುತ್ತಾರೆ. ತಮ್ಮ ಲಾಭಕ್ಕಾಗಿ ಜೀವ ಹಿಂಡಲೂ, ಜೀವ ತೆಗೆಯಲೂ ಹೇಸುವುದಿಲ್ಲ. ಹೀಗಾಗಿಯೇ ಕೆಲವರಿಗೆ ಗೆಳೆತನವೊಂದು ಎಲ್ಲ ಸಂಬಂಧಗಳಿಗೂ ಮೀರಿದ ಪವಿತ್ರ ಬಂಧ, ಇನ್ನೂ ಕೆಲವರಿಗೆ ಅರ್ಥವಿಲ್ಲದ ಸಂಬಂಧ.

ಕೆಲವೊಮ್ಮೆ ಗೆಳೆತನವನ್ನು ಗಾಢವಾಗಿ ನಂಬುತ್ತೇವೆ, ಒಂದರ್ಥದಲ್ಲಿ ಅವಲಂಭಿಸಿಬಿಡುತ್ತೇವೆ. ಗೆಳೆತನದÇÉೇ ನೋವು, ನಲಿವು, ಒಲವು ಎಲ್ಲವನ್ನೂ ಕಾಣುತ್ತಾರೆ. ಸ್ನೇಹದಿಂದಲೇ ಜೀವನ ಪಾಠ ಕಲಿಯುತ್ತಾರೆ. ಆದರೆ ಜೀವದ ಗೆಳೆಯರು ದೂರವಾದಾಗ, ಅವರೇ ದ್ರೋಹ ಮಾಡಿದಾಗ ತಡೆದುಕೊಳ್ಳುವುದು ಮಾತ್ರ ತುಂಬಾ ಕಷ್ಟ. ಆದರೆ ಸಂಬಂಧಗಳು ಕಾಲಕ್ಕೆ ತಕ್ಕಂತೆ ಬದಲಾಗುವ ಈ ಆಧುನಿಕ ಕಾಲದಲ್ಲಿ ಇದೂ ಒಂದು ಜೀವನಾನುಭವವೇ! ಅಂದರೆ ಗೆಳೆತನವೆಂಬ ಪವಿತ್ರ ಸಂಬಂಧಕ್ಕೆ ಬೆಲೆಯಿಲ್ಲವೇ, ಕಾಲದೊಂದಿಗೆ ವ್ಯಕ್ತಿಗಳೂ ಬದಲಾಗುತ್ತಾರಾ ಎಂದೆನಿಸುತ್ತದೆ.

ಯಾವುದೇ ವ್ಯಕ್ತಿ ತನಗೆ ನೋವುಂಟಾದಾಗ ಕುಟುಂಬದೊಂದಿಗೆ ಹೇಳದೇ ಇರಬಹುದು ಆದರೆ ಸ್ನೇಹಿತ/ಸ್ನೇಹಿತೆಯೊಂದಿಗೆ ಹೇಳುತ್ತಾನೆ. ಆದರೆ ಕೆಲವು ಸಂಬಂಧಗಳು  ಮೋಜಿಗೆ ಮಾತ್ರ ಸೀಮಿತವಾಗಿರುತ್ತವೆ. ಅಲ್ಲಿ ಸಂಬಂಧ ಕೇವಲ ಭ್ರಮೆಯಾಗಿರುತ್ತದೆ. ಕೆಲವರು ಸ್ನೇಹಕ್ಕಾಗಿ ತಮ್ಮ ಸಂತೋಷವನ್ನು ಬಲಿಕೊಟ್ಟರೆ, ಇನ್ನೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಗೆಳೆತನಕ್ಕೆ ಎಳ್ಳು-ನೀರು ಬಿಡುತ್ತಾರೆ. ಗೆಳೆತನದಲ್ಲಿ ಪಾರದರ್ಶಕತೆ, ತ್ಯಾಗ ಮನೋಭಾವ ಇಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ.

ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವಲ್ಲಿ ಗೆಳೆಯ / ಗೆಳತಿಯರ ಪಾತ್ರ ಅತಿ ಪ್ರಮುಖವಾಗಿದ್ದರೂ, ಜೀವನ ದೊಡ್ಡದು. ನಮ್ಮನ್ನು ಅವಲಂಭಿಸಿರುವ, ಪ್ರೀತಿಸುವ ಇನ್ನೂ ಅನೇಕ ಜೀವಗಳಿವೆ ಎಂದು ಮರೆಯಬಾರದು. ಸಮಯದೊಂದಿಗೆ ಬದಲಾಗುವ ಗೆಳೆಯರನ್ನು ಬಿಟ್ಟು ಮುಂದೆ ಸಾಗುವುದು ಉತ್ತಮ.

-ನಿವೇದಿತಾ

ಮಂಗಳೂರು

ಟಾಪ್ ನ್ಯೂಸ್

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.