ಟ್ರಾನ್ಸ್‌ವುಮೆನ್‌ ಇನ್‌ಸ್ಪೆಕ್ಟರ್‌ ಆದ ಕಥೆ


Team Udayavani, Oct 2, 2020, 9:00 AM IST

905

ಹುಟ್ಟುತ್ತಾ ಪ್ರದೀಪ್‌ ಕುಮಾರ್‌ ಆಗಿದ್ದವನು ಬೆಳೆಯುತ್ತಾ ಪ್ರೀತಿಕಾ ಆಗಿದ್ದು ಸುಲಭವೇನಾಗಿರಲಿಲ್ಲ. ಪ್ರೀತಿಕಾ ತಮಿಳುನಾಡಿನ ಸೇಲಂನಲ್ಲಿ ಚಾಲಕ ಮತ್ತು ದರ್ಜಿ ದಂಪತಿಗೆ ಮಗನಾಗಿ ಜನಿಸಿದಳು.

ಕಷ್ಟದ ಬಾಲ್ಯವನ್ನು ಕಂಡ ಆಕೆ ತನ್ನಗಾಗುತ್ತಿದ್ದ ಬದಲಾವಣೆ ಅರಿಯದೇ ಬೇಸತ್ತಿದ್ದಳು. ಆಕೆಯ ಕಷ್ಟ ನೋಡಲಾಗದ ತಂದೆ ತಾಯಿ ಕಂಡ ಕಂಡ ದೇವಾಲಯ, ವೈದ್ಯರು, ಜೋತಿಷಿಗಳ ಬಳಿ ಕರೆದುಕೊಂಡು ಹೋದರು, ಆದರೆ ಯಾವುದೂ ಪ್ರಯೋಜನವಾಗಲಿಲ್ಲ.

ಅನಂತರ ಆಕೆ ಒಂಬತ್ತನೇ ತರಗತಿಯಲ್ಲಿರುವಾಗ ದೇಹದಲ್ಲಿ ಬದಲಾವಣೆ ಕಾಣಲಾರಂಭಿಸಿತು. ಆಕೆಗೆ ತನ್ನಲ್ಲಿ ಆಗುತ್ತಿದ್ದ ಬದಲಾವಣೆಗಳು ಒಂದೋಂದಾಗಿ ಗಮನಕ್ಕೆ ಬರಲಾರಂಭಿಸಿದ್ದವು. ಯಾರಲ್ಲೂ ಹೇಳಿಕೊಳ್ಳಲಾಗದ ಭಾವನೆ ಜತೆಗೆ ಜನರ ಒರಟು ಮಾತು ಇವೆಲ್ಲವೂ ದಿನನಿತ್ಯ ಸುಪ್ರಭಾತದಂತಾಗಿದ್ದವು. ಬದಲಾಯಿಸಲು ಯಾವುದು ಇವಳ ಕೈಯಲ್ಲಿರಲಿಲ್ಲ, ಆದರೆ ಭವಿಷ್ಯದ ನಿರ್ಧಾರ ಆಕೆಯ ಕೈಮೀರಿ ಹೋಗಿರಲಿಲ್ಲ.

ಇದನ್ನರಿತ ಪ್ರೀತಿಕಾ ಯಾರ ಮಾತಿಗೂ ಕಿವಿಗೊಡದೆ ಓದುವುದನ್ನು ನೆಚ್ಚಿಕೊಂಡಳು. ಅವಳ ನಂಬಿಕೆ ಅವಳಿಗೆ ಮೋಸ ಮಾಡಲಿಲ್ಲ. ಛಲ ಬಿಡದೆ, ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಅನಂತರ ಅವರು ಚೆನ್ನೈನಲ್ಲಿರುವ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿ ವೃತ್ತಿ ಜೀವನ ಆರಂಭಿಸಿದರು. ಅದಾದ ಬಳಿಕ ನಡೆದದ್ದು ಅವರ ಪರಿಶ್ರಮದ ಪರಿಣಾಮ ಎಂದರೆ ತಪ್ಪಾಗಲಾರದು. ತಮಿಳುನಾಡಿನ ಏಕರೂಪದ ಸೇವೆಗಳ ನೇಮಕಾತಿ ಮಂಡಳಿಗೆ ಪ್ರೀತಿಕಾ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆದರೆ ಆಕೆ ಟ್ರಾನ್ಸ್‌ವುಮೆನ್‌ ಎನ್ನುವ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಲಾಯಿತು.

ಆದರೂ ಪಟ್ಟು ಬಿಡದೆ ಹೈಕೋರ್ಟ್‌ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನಿಸಿದಳು. ಅದರಂತೆ ಮದ್ರಾಸ್‌ ಹೈಕೋರ್ಟ್‌ ಆಕೆಗಾಗಿ ಲಿಖೀತ ಪರೀಕ್ಷೆ ನಡೆಸಲು ಆದೇಶಿಸಿತು. ಇದನ್ನು ಸದುಪಯೋಗಿಸಿಕೊಂಡ ಪ್ರೀತಿಕಾ ಎಲ್ಲ ಪರೀಕ್ಷೆಗಳಲ್ಲಿಯೂ ಸೈ ಎನಿಸಿಕೊಂಡು ಯಶಸ್ವಿಯಾದರು.

2015 ನ. 6ರ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ಪ್ರಕಾರ ಪ್ರೀತಿಕಾ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡರು. ಎ. 2 2017ರಂದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಆಗಿ ಅಧಿಕಾರ ವಹಿಸಿಕೊಂಡರು. ಆಕೆ ತನ್ನಿಂದ ಆಗುವುದಿಲ್ಲ ಎಂದು ಕುಳಿತಿದ್ದರೆ ಭಾರತದ ಮೊದಲ ಟ್ರಾನ್ಸ್‌ವುಮೆನ್‌ ಸಬ್‌ಇನ್‌ಸ್ಪೆಕ್ಟರ್‌ ಆಗಲು ಸಾಧ್ಯವೇ ಆಗುತ್ತಿರಲಿಲ್ಲ.

 ಪ್ರೀತಿ ಭಟ್‌, ಗುಣವಂತೆ 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.