ಭಾರತದಲ್ಲಿ ಕೋವಿಡ್ ಕೋಲಾಹಲ ಡಾ. ದಿನೇಶ್ ಶೆಟ್ಟಿ ಹೇಳುವುದೇನು ಕೇಳಿ
Team Udayavani, Apr 23, 2020, 6:59 PM IST
ಕೋವಿಡ್ ವೈರಸ್ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲೂ ಜಾತಿ, ಧರ್ಮ ಮತ್ತು ರಾಜಕೀಯ ನೆಲೆಯಲ್ಲಿ ಇದನ್ನು ನೋಡುವುದು ಸರಿಯಲ್ಲ. ನಮ್ಮಲ್ಲಿ ವೈರಸ್ ಇನ್ನೂ ಪೀಕ್ ಮಟ್ಟಕ್ಕೆ ಹೋಗಿಲ್ಲ. ಇಟಲಿ, ಸ್ಪೇನ್ ದೆಶಗಳಲ್ಲಿ ವೈರಸ್ ಪೀಕ್ ಮಟ್ಟಕ್ಕೆ ತಲುಪಿ ಇಳಿಮುಖವಾಗುವ ಹಂತದಲ್ಲಿದೆ. ಆದರೆ ನಾವಿನ್ನೂ ‘Virus Spreading Curve’ನ ಎಡಭಾಗದಲ್ಲಿದ್ದೇವೆ. ಹಾಗಾಗಿ ನಾವು ಇನ್ನೂ ಸಹ ಕೋವಿಡ್ ವಿಚಾರದಲ್ಲಿ ಗಂಭೀರವಾಗುವ ಅಗತ್ಯವಿದೆ. ಮತ್ತು ಗ್ರಾಮೀಣ ಪ್ರದೇಶಗಳಿಗೂ ಮುಂಬರುವ ದಿನಗಳಲ್ಲಿ ವೈರಸ್ ಹರಡುವ ಅಪಾಯ ಸಾಧ್ಯತೆ ಇದ್ದೇ ಇದೆ. ಹಾಗಾಗಿ ನಾವು ಈಗ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಭವಿಷ್ಯದಲ್ಲಿ ನಮ್ಮ ನೆಮ್ಮದಿಯ ದಿನಗಳಿಗೆ ಕಾರಣವಾಗಲಿದೆ ಎಂಬ ಮಾತುಗಳನ್ನು ಡಾ. ದಿನೇಶ್ ಶೆಟ್ಟಿ ಅವರು ಈ ವಿಡಿಯೋ ಮೂಲಕ ಹೇಳಿದ್ದಾರೆ ಕೇಳಿ.