Katapady ಹಸಿದವರಿಗೆ ಉಚಿತ ಊಟದ ಜೊತೆಗೆ ಯುಗಾದಿಯ ಪಾಯಸ ವಿತರಣೆ
Team Udayavani, Apr 14, 2020, 7:24 PM IST
ಕಟಪಾಡಿ: ಲಾಕ್ ಡೌನ್ ಆರಂಭದ ದಿನದಿಂದಲೇ ನಿರಂತರವಾಗಿ 21ದಿನಗಳ ಕಾಲ ಹಸಿದವರಿಗೆ ಊಟಕ್ಕೆ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಊಟವನ್ನು ಸಿದ್ದಪಡಿಸಿ ದಿನವೊಂದಕ್ಕೆ ಸುಮಾರು 300ರಷ್ಟು ಊಟವನ್ನು ಉಚಿತವಾಗಿ ವಿತರಿಸುತ್ತಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಯುಗಾದಿ ಹಬ್ಬದ ಸಂಭ್ರಮದ ದೃಷ್ಟಿಯಿಂದ ಉಚಿತ ಊಟದ ಜೊತೆಗೆ ಪಾಯಸವನ್ನು ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.