ಕಡಲ್ಕೊರೆತ ತಡೆಗೆ ಊರವರಿಂದಲೇ Sea Wall ನಿರ್ಮಾಣ
Team Udayavani, Jun 6, 2020, 6:38 PM IST
ಮಂಗಳೂರು: ಪ್ರತಿ ವರ್ಷ ಮಳೆಗಾಲ ಬಂತೆಂದರೆ ಸಾಕು. ಈ ಊರಿಗೆ ಕಡಲ್ಕೊರೆತದ್ದೇ ಭೀತಿ. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ನೀಡಿ ಅಂತ ನಿತ್ಯ ಜನಪ್ರತಿನಿದಿಗಳ , ಅಧಿಕಾರಿಗಳ ಕಚೇರಿ ಅಲೆದಿದ್ದೇ ಬಂತು. ಕೊನೆಗೂ ಆಳುವ ವರ್ಗದಿಂದ ಪರಿಹಾರ ಮರೀಚಿಕೆ ಎಂದರಿತ ಈ ಊರವರು ಇದೀಗ ಸ್ವಂತ ಶ್ರಮದಿಂದ ಕಡಲ್ಕೊರೆತ ತಡೆಯೋದಿಕ್ಕೆ ಮುಂದಾಗಿದ್ದಾರೆ. ಹೌದು ಇದು ಕಡಲತಡಿಯಲ್ಲಿ ವಾಸಿಸುವ ಕಡಲ ಮಕ್ಕಳು ತಮ್ಮ ಸ್ವಂತ ಶ್ರಮದಿಂದಲೇ ಕಡಲ್ಕೊರೆತ ತಡೆಗೆ ಮುಂದಾಗಿರುವ ಸ್ಟೋರಿ.