ಸಿಟಿ ಬಸ್ನಲ್ಲಿ ತುಳು ಲಿಪಿ !
Team Udayavani, Jan 9, 2020, 7:10 PM IST
ಮಹಾನಗರ: ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂದು ತುಳುನಾಡಿಗರದ್ದು, ಹಲವು ವರ್ಷಗಳ ಬೇಡಿಕೆ. ಈ ನಿಟ್ಟಿನಲ್ಲಿ ಇದೀಗ ನಗರದಲ್ಲಿ ಓಡುವ ಸಿಟಿ ಬಸ್ಸೊಂದರಲ್ಲಿಯೂ ಬೆಂಬಲ ವ್ಯಕ್ತವಾಗಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿಬರುತ್ತಿದೆ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಅವರ ಮಾಲಕತ್ವದ ಗಣೇಶ್ ಪ್ರಸಾದ್ (ರೂಟ್ ನಂ: 27 ) ಎಂಬ ಬಸ್ ಇದೀಗ ಫೇಮಸ್ ಆಗಿದೆ.