ಸಾಮಾಜಿಕ ಅಂತರ ಕಾಪಾಡಲು ಮಂಗಳೂರು ಕಾರಾಗೃಹದ ಕೈದಿಗಳ ಸ್ಥಳಾಂತರ
Team Udayavani, Apr 18, 2020, 6:26 PM IST
ಮಂಗಳೂರು: ಕೋವಿಡ್-19 ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಬೇಕಾದ ಪರಿಸ್ಥಿತಿ ಇರುವ ಕಾರಣ ಮಂಗಳೂರು ಕಾರಾಗೃಹದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ದೃಷ್ಟಿಯಿಂದ ಕೈದಿಗಳ ಸ್ಥಳಾಂತರ ಮಾಡಲಾಗುತ್ತಿದೆ. ಕಾರಗೃಹದಿಂದ ವಿಚಾರಣಾಧೀನ 80 ಕೈದಿಗಳ ಸ್ಥಳಾಂತರ ಮಾಡಲಾಗಿದೆ.