ಕೋವಿಡ್ ಸೋಂಕಿತ ಕ್ಯಾನ್ಸರ್ ರೋಗಿಗೆ ಚಿಕಿತ್ಸೆ ನೀಡುವುದು ದೊಡ್ಡ ಸವಾಲು: ಡಿಸಿ ಜಗದೀಶ್
Team Udayavani, May 19, 2020, 7:23 PM IST
ಉಡುಪಿಯಲ್ಲಿ ಇಂದು ಪತ್ತೆಯಾಗಿರುವ ಒಟ್ಟು 5 ಕೋವಿಡ್ ಪ್ರಕರಣಗಳಲ್ಲಿ ಚಿತ್ರದುರ್ಗದಿಂದ ಮಣಿಪಾಲಕ್ಕೆ ಚಿಕಿತ್ಸೆಗೆ ಬಂದಿರುವ 17 ವರ್ಷದ ಕ್ಯಾನ್ಸರ್ ರೋಗಿಗೆ ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡುವುದ ಸವಾಲಿನ ಕೆಲಸವಾಗಿದ್ದು ಈ ಸಂಬಂಧ ತಜ್ಞ ವೈದ್ಯರ ತಂಡದ ಜೊತೆ ಸಮಾಲೋಚನೆ ನಡೆಯುತ್ತಿದೆ. ಮತ್ತು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಯೇ ರೋಗಿಗಳನ್ನು ಅಟೆಂಡ್ ಮಾಡುತ್ತಿರುವುದರಿಂದ ಸೀಲ್ ಡೌನ್ ಅಥವಾ ಕ್ವಾರೆಂಟೈನ್ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.