ಉಳ್ಳಾಲ: ಮೂರು ದಿನಗಳ ಕರ್ಫ್ಯೂ ಬಳಿಕ ಖರೀದಿಗೆ ಮುಗಿಬಿದ್ದ ಜನರು
Team Udayavani, Apr 2, 2020, 7:49 PM IST
ಉಳ್ಳಾಲ: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯಲು ವಿಧಿಸಲಾಗಿರುವ 21 ದಿನಗಳ ಲಾಕ್ ಡೌನ್ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೂರು ದಿನಗಳ ಸಂಪೂರ್ಣ ಕರ್ಪ್ಯೂ ಬಳಿಕ ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದ್ದು ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಖರೀದಿಸಲು ಮುಗಿಬಿದ್ದರು.