Vijayapura : ಅಕ್ರಮ ಮರಳು ಸಾಗಾಣಿಕೆ ಲಾರಿ ತಡೆದು ಪೊಲೀಸರಿಗೆ ಒಪ್ಪಿಸಿದ ಜೆಡಿಎಸ್ ಶಾಸಕ
Team Udayavani, Jul 2, 2020, 9:51 PM IST
ವಿಜಯಪುರ : ಅವಧಿ ಮೀರಿದ ಪಾಸ್ ಇರಿಸಿಕೊಂಡು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿ ತಡೆದ ಜಿಲ್ಲೆಯ ಶಾಸಕರೊಬ್ಬರು, ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ, ವಿಜಯಪುರ ನಗರದ ಹೊರ ಭಾಗದಲ್ಲಿ ಎನ್ ಎಸ್ -13 ಸೋಲಾಪುರ ರಸ್ತೆಯಲ್ಲಿ ಸಿಂದಗಿ ರಸ್ತೆ ಮಾರ್ಗವಾಗಿ ಸೊಲ್ಲಾಪುರ ಕಡೆಗೆ ಹೊರಟಿದ್ದ ಮರಳು ತುಂಬಿದ್ದ ಲಾರಿಯನ್ನು ತಡೆದಿದ್ದಾರೆ. ಇದರಿಂದ ಅಕ್ರಮ ಮರಳು ಸಾಗಾಟ ಮಾಡುವ ಹಳೆಯ ಪಾಸ್ ಹೊಂದಿದ್ದು ಬಹಿರಂಗವಾಗಿದೆ.