ಬಿಸಿಲನಾಡ ಜಲಪಾತಕ್ಕೆ ಜೀವ ಕಳೆ! ಪ್ರವಾಸಿಗರನ್ನು ಆಕರ್ಷಿಸುತ್ತಿದೆ ನಜರಾಪುರ ಫಾಲ್ಸ್…
Team Udayavani, Jul 12, 2020, 7:17 PM IST
ಯಾದಗಿರಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತರುವ ಮಳೆಗೆ ಬಿಸಿಲ ನಾಡಿನ ಪ್ರಸಿದ್ಧ ನಜರಾಪುರ ಫಾಲ್ಸ್ ಗೆ ಜೀವ ಕಳೆ ಬಂದಿದ್ದು, ಮೈತುಂಬಿ ಭೋರ್ಗೆರೆಯುತ್ತಿದೆ. ಜಿಲ್ಲೆಯ ಗುರುಮಠಕಲ್ ದಿಂದ ಕೇವಲ 4 ಕಿ.ಮೀ ದೂರದ ನೈಸರ್ಗಿಕ ಬೆಟ್ಟಗಳ ಮದ್ಯೆ ತಲೆ ಎತ್ತಿರುವ ಜಲಪಾತ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.