ಗುಂಡಿನ ಗಮ್ಮತ್ತು;ಜೀವಕ್ಕೆ ತಂತು ಆಪತ್ತು!
Team Udayavani, Sep 13, 2018, 11:56 AM IST
ಮದ್ಯ ಸೇವನೆಯಿಂದಾಗಿ ಹಲವರು ಏನೇನೋ ಎಡವಟ್ಟು ಮಾಡಿಕೊಂಡಿರುವ ಘಟನೆ ಆಗಾಗ ವರದಿಯಾಗುತ್ತಾ ಇರುತ್ತದೆ. ಉತ್ತರ ಪ್ರದೇಶದ
ಅನ್ರೋಹಾದಲ್ಲಿನ ಭೂಪ ಕಂಠ ಮೀರಿ ಮದ್ಯಪಾನ ಮಾಡಿದ್ದ. ಹೀಗಾಗಿ ಆತ ವಿಚಿತ್ರ ರೀತಿಯಲ್ಲಿ ವರ್ತಿಸಿಕೊಂಡಿದ್ದ. ಮನೆಗೆ ತೆರಳುವ ಮೊದಲು ರಸ್ತೆ ಬದಿಯಲ್ಲಿದ್ದ ಹಾವನ್ನು ಹಿಡಿದುಕೊಂಡ. ಅದೇ ಸಂದರ್ಭದಲ್ಲಿ ಹತ್ತಿರ ಇದ್ದ ಕೆಲವರು ಆತನನ್ನು ಪ್ರಚೋದಿಸಲು ತೊಡಗಿಸಿ, ಮೊಬೈಲ್ನಲ್ಲಿ ಅದನ್ನು ಚಿತ್ರೀಕರಿಸತೊಡಗಿದರು. ಅದರ ಜತೆಗೆ ಆಡುತ್ತಾ, ಏನೇನೋ ಸರ್ಕಸ್ ಮಾಡುತ್ತಿದ್ದ. ಜತೆಗೆ ಅದರ ತಲೆಯನ್ನು ಕೈನಲ್ಲಿ ಹಿಡಿದುಕೊಂಡ. ಅದೇ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಯಾರೋ ಒಬ್ಬರು ಹಾವನ್ನೇಕೆ ನುಂಗ ಬಾರದು ಎಂದು ಪ್ರಶ್ನಿಸಿದರು. ಅದರಿಂದ ಉತ್ತೇಜಿತನಾದ ಆ ವ್ಯಕ್ತಿ ಹಾವನ್ನು ಬಾಯಿಗೆ ಹಾಕಿ ನುಂಗಿಯೇ ಬಿಟ್ಟ! ಕೆಲವೇ ಕ್ಷಣಗಳಲ್ಲಿ ಆತ ಅನಾರೋಗ್ಯಕ್ಕೀಡಾದ. ಸ್ಥಳೀಯರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರೂ, ಅಸುನೀಗಿದ. ದುರಂತವೆಂದರೆ, ಆತನ ಹುಚ್ಚು ಸಾಹಸ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಹೀಗಾಗಿ ಬ್ಯಾಡವೊ ಸಿಸ್ಯ, ಗುಂಡಿನ ದಾಸ್ಯ..
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್