ಅದೃಷ್ಟ ಅಂದ್ರೆ ಹೀಗಿರಬೇಕು!
Team Udayavani, Sep 7, 2018, 6:13 AM IST
ಅದೃಷ್ಟದ ಬಂಪರ್ ಹೊಡೆದರೆ ಹೀಗೆ ಹೊಡೆಯಬೇಕು! ಪಂಜಾಬ್ನಲ್ಲಿ ಕೂಲಿ ಕಾರ್ಮಿಕನೊಬ್ಬ ಸಾಲ ಮಾಡಿ ಕೊಂಡಿದ್ದ ಲಾಟರಿ ಟಿಕೇಟು, ಆತನನ್ನು ರಾತ್ರೋರಾತ್ರಿ ಆತನನ್ನು ಕೋಟ್ಯಾಧೀಶನನ್ನಾಗಿಸಿದೆ. ಈತನ ಹೆಸರು ಮನೋಜ್ ಕುಮಾರ್. ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಮಾಂಡ್ವಿ ಎಂಬ ಹಳ್ಳಿಯವನು. ಇತ್ತೀಚೆಗೆ, ಪಂಜಾಬ್ ರಾಜ್ಯ ಲಾಟರಿಯ ಟಿಕೆಟ್ ಒಂದನ್ನು ಖರೀದಿಸುವ ಮನಸ್ಸು ಮಾಡಿದ್ದ ಆತ. ಆದರೆ, ಆತನಲ್ಲಿ ಒಂದು ರೂಪಾಯಿಯೂ ಹಣವಿರಲಿಲ್ಲ. ಬಂದ ಕೂಲಿಯೆಲ್ಲಾ ಅಂದು ಖಾಲಿಯಾಗಿತ್ತು. ಆದರೆ, ಮನಸ್ಸಿನಲ್ಲಿ ಅದೇನೋ ಸೆಳೆತ. ಲಾಟರಿಯನ್ನು ಕೊಳ್ಳಲೇಬೇಕೆಂಬ ತುಡಿತ.
ಯಾಕೋ ಮನಸ್ಸು ಲಾಟರಿ ಕೊಳ್ಳಲು ತುಡಿಯುತ್ತಿರುವುದನ್ನು ಗಮನಿಸಿದ ಆತ ತನ್ನ ಸ್ನೇಹಿತನಿಂದ 200 ರೂ. ಸಾಲ ಪಡೆದು ಟಿಕೆಟ್ ಖರೀದಿಸಿದ್ದ. ಆದರೆ, ಅದೇ ಲಾಟರಿಗೆ ಒಂದೂವರೆ ಕೋಟಿ ಬಹುಮಾನ ಬಂದಿದೆ. ಆಗಸ್ಟ್ 29ರಂದು ನಡೆದ ಡ್ರಾನಲ್ಲಿ ಈ ಬಹುಮಾನಕ್ಕೆ ಭಾಜನರಾಗಿರುವ ಮನೋಜ್, ವರ್ಷಗಳಿಂದ ತನ್ನ ಕುಟುಂಬ ಎದುರಿಸುತ್ತಿದ್ದ ಕಷ್ಟದ ಜೀವನ ದೇವರ ದಯೆಯಿಂದ ಕೊನೆಯಾಗಿದೆ ಎಂದಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?
Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ