ಮಕ್ಕಳು ಶಾಲೆಗೆ ಸೇರಿದರೆ 5,000 ರೂ,1 ಗ್ರಾಂ ಚಿನ್ನ
Team Udayavani, Jul 6, 2018, 4:02 AM IST
ಮಕ್ಕಳನ್ನು ಶಾಲೆಗೆ ಸೆಳೆಯಲು ಸರ್ಕಾರಗಳು ಅಕ್ಕಿ, ಹಾಲು, ಮಧ್ಯಾಹ್ನದ ಬಿಸಿಯೂಟ ಕೊಡುವ ಯೋಜನೆಗಳನ್ನು ರೂಪಿಸಿದವು. ಆದರೂ ಮಕ್ಕಳು ಸರ್ಕಾರಿ ಶಾಲೆಯಿಂದ ವಿಮುಖರಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೊಯಮತ್ತೂರಿನ ಅಣ್ಣೂರ್ನಲ್ಲಿರುವಸರ್ಕಾರಿ ಶಾಲೆ ಸಖತ್ ಐಡಿಯಾ ಮಾಡಿದೆ. ಶಾಲೆಗೆ ದಾಖಲಾಗುವ ಮೊದಲ 10 ಮಕ್ಕಳಿಗೆ ತಲಾ 5,000 ರೂ. ನಗದು, 1 ಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲು ಮುಂದಾಗಿದೆ. 10 ಮಕ್ಕಳಿಗಿಂತಲೂ ಕಡಿಮೆ ಇರುವ ಶಾಲೆಗಳನ್ನು ಸರ್ಕಾರ ಮುಚ್ಚುತ್ತದೆ. ಹೀಗಾಗಿ ಶಾಲೆ ಉಳಿಸಲು ಮುಖ್ಯೋಪಾಧ್ಯಾಯರು ಮತ್ತು ಸ್ಥಳೀಯ ಉದ್ಯಮಿತಾವೇ ಈ ಬಹುಮಾನ ನೀಡಲು ಮುಂದಾಗಿದ್ದಾರೆ. ಈ ಘೋಷಣೆ ಬಳಿಕ ಮೂವರು ಮಕ್ಕಳು ಶಾಲೆಗೆ ಸೇರಿದ್ದಾರೆ. ಇನ್ನೂ ಹಲವರು ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಭರವಸೆನೀಡಿದ್ದಾರೆ ಎಂದು ಮುಖ್ಯೋಪಾಧ್ಯಾಯರು ಹೇಳಿದ್ದಾರೆ.
ಗ್ರಾಮದ ಸುತ್ತ ಖಾಸಗಿ ಶಾಲೆಗಳಿವೆ. ಅಲ್ಲಿ ಪೋಷಕರು ದುಬಾರಿ ಶುಲ್ಕ ಕಟ್ಟಿ ಮಕ್ಕಳನ್ನು ದಾಖಲಾತಿ ಮಾಡುತ್ತಾರೆ.
ಆದರೆ ಇಲ್ಲಿ ನಾವೇ ಅವರಿಗೆ ಹಣ ಕೊಡುತ್ತಿರುವುದು ವಿಪರ್ಯಾಸ ಎಂದು ಅವರು ಹೇಳಿದ್ದಾರೆ.