JCB Runs On Railway Track: ರೈಲ್ವೆ ಹಳಿ ಮೇಲೆ ಸಲೀಸಾಗಿ ಓಡಿದ ಜೆಸಿಬಿ… ವಿಡಿಯೋ ವೈರಲ್
Team Udayavani, Oct 22, 2023, 2:48 PM IST
ದಿನ ಬೆಳಗಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋಗಳದ್ದೇ ಸದ್ದು, ಒಂದಕ್ಕಿಂತ ಒಂದು ಭಿನ್ನ ಕೆಲವು ಮನಸ್ಸಿಗೆ ಮುದ ನೀಡಿದರೆ ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತದೆ.
ನಾವಿಂದು ಹೇಳ ಹೊರಟಿರುವ ವಿಚಾರವು ಸ್ವಲ್ಪ ಆಶ್ಚರ್ಯಕರವಾಗಿದೆ ಸಾಮಾನ್ಯವಾಗಿ ಈ ರೀತಿ ಬೇರೆ ಯಾರಾದರೂ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಾಗಿ ವಾಹನದ ಜೊತೆ ಅವರು ಜೈಲುಕಂಬಿ ಎನಿಸುವ ಸನ್ನಿವೇಶ ಆದರೆ ಇಲ್ಲಿ ಆ ರೀತಿ ಮಾತ್ರ ಆಗಲಿಲ್ಲ.
ಕೆಲವರು ರಸ್ತೆಯ ಮೇಲೆಯೇ ವಾಹನ ಸವಾರಿ ಮಾಡುವಾಗ ಅಡ್ಡಾದಿಡ್ಡಿಯಾಗಿ ಸಂಚರಿಸಿ ಪಾದಚಾರಿಗಳ ಜೊತೆ ಇತರ ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡುತ್ತಾರೆ ಆದರೆ ಇಲ್ಲೊಬ್ಬ ವ್ಯಕ್ತಿ ರೈಲ್ವೆ ಹಳಿ ಮೇಲೆ ಅದೆಷ್ಟು ನಾಜೂಕಾಗಿ ಜೆಸಿಬಿ ಯಂತ್ರವನ್ನು ಚಲಾಯಿಸಿದ್ದಾನೆ ಎಂದು ನೋಡಿದರೆ ನಾವು ನಂಬಲು ಸಾಧ್ಯವಿಲ್ಲ ಅನ್ನುವ ಮಟ್ಟಕ್ಕೆ ಚಾಲನೆ ಮಾಡಿದ್ದಾನೆ ಇರುವ ಸಣ್ಣ ಹಳಿಯ ಮೇಲೆ ಜೆಸಿಬಿಯ ನಾಲ್ಕು ಚಕ್ರಗಳು ನಿಲ್ಲುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ.
ಅಂದಹಾಗೆ ಈ ಘಟನೆ ನಡೆದಿರುವುದು ಜೋಧ್ಪುರದ ಲುನಿ ರೈಲ್ವೇ ಜಂಕ್ಷನ್ನಲ್ಲಿ ಹಳಿ ಮಟ್ಟವನ್ನು ಹೆಚ್ಚಿಸಲು ಮತ್ತು ರೈಲು ಮಾರ್ಗವನ್ನು ಬದಲಾಯಿಸಲು ಜೆಸಿಬಿಯನ್ನು ಬಳಸಲಾಗಿತ್ತು. ಈ ಸಂದರ್ಭದಲ್ಲಿ ರೈಲ್ವೇ ಅಧಿಕಾರಿಗಳು ಹಳಿಗಳ ಮೇಲೆ ಜೆಸಿಬಿ ಹೋಗಲು ಅನುವು ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಆ ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಜೆಸಿಬಿ ಓಡಿದೆ.
ಆದರೆ ಜೆಸಿಬಿ ಚಾಲಕ ಅದೆಷ್ಟು ಪರಿಣತಿ ಹೊಂದಿದ್ದ ಎಂದರೆ ಅಷ್ಟು ಸಪುರದ ಹಳಿಯ ಮೇಲೆ ಬ್ಯಾಲೆನ್ಸ್ ತಪ್ಪದೆ ಸಲೀಸಾಗಿ ಜೆಸಿಬಿ ಯಂತ್ರ ಚಲಾಯಿಸಿದ್ದುದನ್ನು ಕಂಡು ಅಲ್ಲಿದ್ದವರು ಆಶ್ಚರ್ಯಚಕಿತರಾಗಿದ್ದಾರೆ ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
जोधपुर के लूणी रेलवे स्टेशन की पटरियों पर ट्रैन की जगह सरपट दौड़ती जेसीबी देखकर हर कोई चोंक गया आखिर क्या है माजरा… यह कोई सिरफिरा नहीं है@ABPNews @gssjodhpur @RailMinIndia @pravinyadav @PMOIndia #viral pic.twitter.com/Y8O6tXJlJ0
— करनपुरी (@abp_karan) October 20, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ