Video: ಕಲಾವಿದನ ಕೈಚಳಕ.. ಉಪ್ಪಿನಕಾಯಿ ಬಳಸಿ ನಟಿ ಕಂಗನಾ ರಣಾವತ್ ಭಾವಚಿತ್ರ ಬಿಡಿಸಿದ ಕಲಾವಿದ
ಕಲಾವಿದನ ಕೈಚಳಕಕ್ಕೆ ನೆಟ್ಟಿಗರು ಫಿದಾ
Team Udayavani, Dec 22, 2023, 1:18 PM IST
ದೇಶದಲ್ಲಿ ನಾನಾ ರೀತಿಯ ಕಲಾವಿದರು ಕಾಣ ಸಿಗುತ್ತಾರೆ, ನಾವು ಸಾಮಾಜಿಕ ಜಾಲತಾಣದಲ್ಲಿ ದಿನಾ ನೋಡುವ ಹಾಗೆ ಅದೆಷ್ಟೋ ಕಲಾವಿದರು ನಮ್ಮ ಕಣ್ಣ ಮುಂದೆ ಬರುತ್ತಾರೆ ಅದರಲ್ಲೂ ಪ್ರತಿಯೊಬ್ಬರೂ ಒಬ್ಬರಿಗಿಂತ ಇನ್ನೊಬ್ಬರು ಭಿನ್ನ ಎಂಬ ರೀತಿಯಲ್ಲಿ ತಮ್ಮ ಚಾಕಚಕ್ಯತೆಯನ್ನು ಚಿತ್ರದ ಮೂಲಕ ತೋರಿಸುತ್ತಾರೆ.
ಇಲ್ಲೊಬ್ಬ ಕಲಾವಿದ ಅದೇ ಸಾಲಿಗೆ ಸೇರಿದ್ದಾನೆ ನಾವು ಊಟಕ್ಕೆ ಬಡಿಸಿಕೊಳ್ಳುವ ಉಪ್ಪಿನ ಕಾಯಿಯನ್ನು ಬಳಸಿಕೊಂಡು ಅದ್ಬುತ ಭಾವಚಿತ್ರಗಳನ್ನು ಬಿಡಿಸುತ್ತಾನೆ ಅಲ್ಲದೆ ಈತನ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಕಲಾವಿದ ಶಿಂತು ಮೌರ್ಯ ಅವರು ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವ ಭಾವಚಿತ್ರಕ್ಕೆ ಭಾರಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಂತು ಮೌರ್ಯ ತಿನ್ನಲು ಬಳಸುವ ಮಾವಿನ ಉಪ್ಪಿನಕಾಯಿಯನ್ನು ಬಳಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಅದ್ಭುತವಾದ ಭಾವಚಿತ್ರವನ್ನು ಬಿಡಿಸಿದ್ದಾರೆ. ಮೌರ್ಯ ಅವರ ಕಾಲ ಅಭಿಮಾನಕ್ಕೆ ಅವರ ಅಭಿಮಾನಿಗಳು ಬೌಲ್ಡ್ ಆಗಿದ್ದಾರೆ.
ನಟಿ ಕಂಗನಾ ರಣಾವತ್ ಅವರ ಭಾವಚಿತ್ರ ಬಿಡಿಸುವ ವಿಡಿಯೋ ಅನ್ನು ಮೌರ್ಯ ಅವರು ತಮ್ಮ ಇಸ್ಟಾ ಗ್ರಾಮ್ ಪೇಜ್ ನಲ್ಲಿ ಹಾಕಿದ್ದು ಒಂದು ತಟ್ಟೆಗೆ ಉಪ್ಪಿನಕಾಯಿ ಹಾಕಿ ಒಂದು ಖಾಲಿ ಹಾಳೆ ತೆಗೆದುಕೊಂಡು ಕೇವಲ ಬೆರಳಿನ ಮೂಲಕ ಅದ್ಭುತವಾದ ಭಾವಚಿತ್ರ ಬಿಡಿಸಿದ್ದಾರೆ. ಈ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೀಕ್ಷಣೆಯನ್ನೂ ಪಡೆದಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ