ಬನಾನಾ ಹರಕೆ, ಡಬ್ಬಿಂಗ್ ಗಾನಾ ಬಜಾನಾ!
Team Udayavani, Feb 27, 2023, 6:10 AM IST
ರಾಯಚೂರು: ಚುನಾವಣೆ ಎಂದರೆ ಎಷ್ಟು ಗಂಭೀರ ವಿಷಯವೋ ಅಷ್ಟೇ ಸ್ವಾರಸ್ಯಕರ- ವಿನೋದಭರಿತ ಸಂಗತಿಗೂ ಸಾಕ್ಷಿಯಾಗುತ್ತದೆ. ಇದಕ್ಕೊಂದು ಸೇರ್ಪಡೆ ಬಾಳೆಹಣ್ಣಿನ ಹರಕೆ ಟ್ರೆಂಡ್!
ಸಾಮಾನ್ಯವಾಗಿ ಎಪ್ರಿಲ್-ಮೇ ತಿಂಗಳು ಜಾತ್ರೆ ಸಮಯ ಎಂದೇ ಕರೆಯಲಾಗುತ್ತದೆ. ಇಂಥ ಜಾತ್ರೆಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಬಾಳೆಹಣ್ಣಿನ ಮೇಲೆ ಹೆಸರು ಬರೆದು ರಥಕ್ಕೆ ಎಸೆಯುವ ಹೊಸ ಪದ್ಧತಿ ಶುರುವಾಗಿದೆ. ಇದು ಎಲ್ಲೋ ಒಂದೆರಡು ಕಡೆ ನಡೆಯುತ್ತಿರುವ ಸಂಗತಿಯಲ್ಲ. ಪ್ರತೀ ಊರಲ್ಲೂ ಈ ರೀತಿಯ ಹರಕೆ ಸಾಮಾನ್ಯವಾಗುತ್ತಿದೆ. ಅಷ್ಟು ಮಾತ್ರ ವಲ್ಲ ಅದನ್ನು ಫೋಟೋ ತೆಗೆದು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡು ತ್ತಾರೆ.
“ನಮ್ಮ ಮುಂದಿನ ಎಂಎಲ್ಎ ಇವರೇ’ ಎಂದು ಹೆಸರು ಬರೆಯುವುದು ಉಚ್ಛಾಯಗಳಿಗೆ, ರಥಗಳಿಗೆ ಎಸೆದು ಹರಕೆ ತೀರಿಸುವುದೇ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಕಾಯಕವಾಗಿ ಬಿಟ್ಟಿದೆ.
ಡಬ್ಬಿಂಗ್ ಗಾನ ಬಜಾನಾ: ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಡೆ ರಾಜಕೀಯ ಚಟುವಟಿಕೆಗಳೂ ಬಿರುಸು ಪಡೆದಿವೆ.
ಸದ್ಯಕ್ಕಂತೂ ಅಭ್ಯರ್ಥಿಗಳ ಪ್ರಚಾರದ್ದೇ ಹಾವಳಿ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಖಾತೆಗಳನ್ನು ತೆರೆದು ಹತ್ತಾರು ಪೋಸ್ಟರ್ಗಳನ್ನು ಹಾಕಲಾಗುತ್ತಿದೆ. ಅದರಲ್ಲೂ ಡಬ್ಬಿಂಗ್ ಹಾಡುಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಕೆಲವೊಂದು ಸಿನೆಮಾ ಹಾಡುಗಳನ್ನೇ ತಮ್ಮ ನಾಯಕನ ಬಣ್ಣನೆಗೆ ಬಳಸಿಕೊಳ್ಳುತ್ತಿದ್ದು, ಇಂದ್ರ ಚಂದ್ರ ಎಂದೆಲ್ಲ ಹಾಡಿ ಹೊಗಳುವುದು, ಅವರಿಲ್ಲದೇ ಹೋದರೆ ಕ್ಷೇತ್ರದ ಜನ ಅನಾಥರಾಗುತ್ತಾರೆ ಎಂಬಂಥ ಸೆಂಟಿಮೆಂಟ್ ಡೈಲಾಗ್ಗಳನ್ನು ಅಳವಡಿಸಿ ಜನರ ಮನ ಪರಿವರ್ತನೆಗೆ ಯತ್ನಿಸಲಾಗುತ್ತಿದೆ. ಇನ್ನು ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾ ಗ್ರಾಂ ಸಹಿತ ವಿವಿಧ ಪೇಜ್ಗಳಲ್ಲಿ, ಸ್ಟೇಟಸ್ ಹಾಕಿ ಪ್ರಚಾರ ನಡೆಸಲಾಗುತ್ತಿದೆ.
ಇನ್ನೂ ಕೆಲವು ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿಸಿ ಬೆಂಬಲ ಯಾಚಿಸುತ್ತಿದ್ದಾರೆ. ಯುವಕ- ಯುವತಿಯರನ್ನು ಇದೇ ಕೆಲಸಕ್ಕೆ ನಿಯೋಜಿಸಿದ್ದು, ನಿತ್ಯ ಕರೆ ಮಾಡುವುದೇ ಅವರ ಕಾಯಕವಾಗಿದೆ.
-ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ