ಬೀಡಿ ಕಟ್ಟಿ ಉಳಿಸಿದ 2 ಲಕ್ಷ ರೂಪಾಯಿಯನ್ನು ಕೋವಿಡ್ ನಿಧಿಗೆ ಕೊಟ್ಟ 63 ರ ವೃದ್ಧ.!


ಸುಹಾನ್ ಶೇಕ್, May 6, 2021, 8:00 AM IST

Untitled-1

ಕೋವಿಡ್ ಸೋಂಕು ಜಗತ್ತಿನೆಲ್ಲೆಡೆ ತನ್ನ ನೆಲೆಯನ್ನು ಬೇರೂರಿ ಮಾನವ ಜನಾಂಗದ ಬುಡವನ್ನೇ ಅಲುಗಾಡಿಸಿ, ಎಷ್ಟೋ ಮಂದಿಯ ಜೀವ ಬಲಿ ತೆಗೆದುಕೊಳ್ಳುತ್ತಿದೆ . ವರ್ಷ ಕಳೆದರೂ ಕೋವಿಡ್ ಸ್ವರೂಪ,ರೌದ್ರ ನರ್ತನ, ಮರಣ ಮೃದಂಗ ಮುಂದುವರೆಯುತ್ತಿದೆ ವಿನಃ ಕಡಿಮೆಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ಕೋವಿಡ್ ಅಬ್ಬರಕ್ಕೆ ಕಡಿವಾಣ ಹಾಕಲು ಕೋವಿಡ್ ಲಸಿಕೆಗಳು ಸರ್ವ ಪ್ರಯತ್ನ ನಡೆಸುತ್ತಿವೆ. ಉಚಿತ ಲಸಿಕೆ ನೀಡಿ ಆ ಮೂಲಕ ಜನರಲ್ಲಿ ಲಸಿಕೆ ತೆಗೆದುಕೊಳ್ಳಲು ಇರುವ ಭೀತಿಯನ್ನು ಕಡಿಮೆ ಮಾಡಲು ದೇಶದ ವಿವಿಧ ರಾಜ್ಯಗಳು ಪ್ರಯತ್ನ ನಡೆಸಿವೆ. ಅದರಲ್ಲಿ ಕೇರಳ ರಾಜ್ಯ ಕೂಡ ಒಂದು.

ಕೇರಳ ರಾಜ್ಯ ವ್ಯಾಕ್ಸಿನ್ ಚಾಲೆಂಜ್ ಮೂಲಕ ಹಲವಾರು ಜನರಲ್ಲಿ ಕೋವಿಡ್ ಲಸಿಕೆಯ ಕುರಿತು ಜಾಗೃತಿ ಮೂಡಿಸಿದೆ. ಈ ಜಾಗೃತಿಗೆ ಸಾಮಾನ್ಯ ಜನರಿಂದಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ವ್ಯಾಕ್ಸಿನ್ ಚಾಲೆಂಜ್ ಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇಂಥ ಕೊಡುಗೆಗಳು ಈಗ ಗಮನ ಸೆಳೆಯುತ್ತಿವೆ.

63 ವರ್ಷದ ಜನಾರ್ಧನನ್. ಕೇರಳದ ಕಣ್ಣೂರಿನ ಒಬ್ಬ ಬೀಡಿ ಕಾರ್ಮಿಕ. ವಿಶೇಷ ಚೇತನರಾಗಿರುವ ಜನಾರ್ಧನನ್  ಆ ಸಂಬಂಧ ತಿಂಗಳಿಗೆ ಬರುವ ಪೆನ್ಷನ್ ಹಣ. ಹೆಂಡತಿ ಕಳೆದುಕೊಂಡ ಏಕಾಂತ, ಬೀಡಿ ಕಟ್ಟುವ ಕೈಗಳ ವೇಗಕ್ಕೆ ಆಗಾಗ ಬಂದು ಹೋಗುವ ಹಳೆಯ ಯೋಚನೆ ಇವಿಷ್ಟೇ ಇವರ ಬದುಕಿನ ದಿನ ನಿತ್ಯದ ಆಗು-ಹೋಗು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಮಾನಿ ಹಾಗೂ ಸಿಪಿಎಂ ಬೆಂಬಲಿಗನಾಗಿರುವ ಜನಾರ್ಧನನ್ ,ಮುಖ್ಯಮಂತ್ರಿ ರಾಜ್ಯದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ನಿರ್ಧಾರವನ್ನು ಮಾಡಿದಾಗ, ಜನಾರ್ಧನನ್ ಇದರ ಕುರಿತು ಏನಾದರೂ ಮಾಡಬೇಕೆಂದು ಯೋಚಿಸುತ್ತಾರೆ. ಆಗ ಬಂದ ಯೋಚನೆ ಒಂದು ಕ್ಷಣ ಎಂಥವವರನ್ನೂ ಅಚ್ಚರಿಗೊಳಿಸಬಹುದು. ವ್ಯಾಕ್ಸಿನ್ ಚಾಲೆಂಜ್ ಗೆ, ಮುಖ್ಯಮಂತ್ರಿ ಕೋವಿಡ್ ನಿಧಿಗೆ ತಾನು 35 ವರ್ಷಗಳಿಂದ ದುಡಿದು ನಿವೃತ್ತಿ ಆದ ಬೀಡಿ ಕೆಲಸದಿಂದ ಉಳಿಸಿದ ಉಳಿತಾಯ ಹಣವನ್ನು ನೀಡುವುದು. ಅದು 5-10 ಸಾವಿರ ಅಲ್ಲ. ಸುಮಾರು 2 ಲಕ್ಷ ರೂಪಾಯಿ.

ಮರು ದಿನ ಬೆಳಗ್ಗೆ ಈ ಕುರಿತು ಮಾತಾನಾಡಲು ಬ್ಯಾಂಕಿಗೆ ಹೋದ ಜನಾರ್ಧನನ್ ಅಲ್ಲಿ ಈ ಬಗ್ಗೆ ಹೇಳಿ ಹಣವನ್ನು ಕೋವಿಡ್ ನಿಧಿಗೆ ವರ್ಗಾಯಿಸಲು ಹೇಳುತ್ತಾರೆ. ಇದನ್ನು ಕೇಳಿದ ಬ್ಯಾಂಕ್ ಸಿಬ್ಬಂದಿ ಒಮ್ಮೆ ಆಶ್ಚರ್ಯದಿಂದ, ಜನಾರ್ಧನನ್ ಅವರಿಗೆ ಅವರ ಪರಿಸ್ಥಿತಿಯನ್ನು ವಿವರಿಸಿ ಅರ್ಧ ಹಣವನ್ನು ಮಾತ್ರ ಹಾಕಿ ಎಂದು ಕೇಳಿ ಕೊಳ್ಳುತ್ತಾರೆ. ಆದ್ರೆ ಜನಾರ್ಧನನ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೇ ಇದನ್ನು ಮಾಡುವುದರಿಂದ ಮಾತ್ರ ನನಗೆ ಮಾನಸಿಕ ನೆಮ್ಮದಿ ಹಾಗೂ ರಾತ್ರಿ ಒಳ್ಳೆ ನಿದ್ದೆ ಬರಲು ಸಾಧ್ಯ. ಅವಶ್ಯಕತೆಯಿದ್ದಾಗ ಹಣವನ್ನು ರಾಶಿ ಹಾಕಿ ಏನು ಪ್ರಯೋಜನ. ತಾನು ಹಣ ಹಾಕಿದರೆ ಸರ್ಕಾರದಿಂದ ಇನ್ನಷ್ಟು ನೆರವಾಗಬಹುದೆಂದು ಹೇಳಿ ಹಣವನ್ನು ಕೋವಿಡ್ ನಿಧಿಗೆ ವರ್ಗಾಹಿಸುತ್ತಾರೆ.

ಜನಾರ್ಧನನ್ ಈಗಲೂ ಬೀಡಿ ಕಟ್ಟುತ್ತಾರೆ. ಪೆನ್ಷನ್ ಹಣ ಹಾಗೂ ಈ ಬೀಡಿಯ ದುಡಿತ ಬದುಕಿಗೆ ಸಾಕು ಎನ್ನುತ್ತಾರೆ. ಜನಾರ್ಧನನ್ 2 ಲಕ್ಷ ಹಣವನ್ನು ಕೋವಿಡ್ ನಿಧಿಗೆ ಕೊಟ್ಟಾಗ ಅವರ ಖಾತೆಯಲ್ಲಿ ಉಳಿದದ್ದು ಕೇವಲ 850 ರೂಪಾಯಿ. ಇವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಒಳ್ಳೆಯ ಸ್ಥಿತಿಯಲ್ಲಿ ಇದ್ದಾರೆ. ಅಪ್ಪನ ಈ ಸೇವೆ ಮಕ್ಕಳಿಗೆ ಗೊತ್ತು ಆದದ್ದು ಸಾಮಾಜಿಕ ಜಾಲತಾಣದ ಮೂಲಕ ಎಂಬುದು ವಿಶೇಷ

ಜನಾರ್ಧನನ್ ಅವರ ಹೃದಯವಂತಿಕರಯನ್ನು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

– ಸುಹಾನ್ ಶೇಕ್

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.