ತನು-ಮನ ಸೆಳೆಯುವ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ


ಗಣೇಶ್ ಹಿರೇಮಠ, Mar 21, 2021, 1:51 PM IST

templ

ಅದು‌  2018. ಹೈದರಾಬಾದ್ ನಲ್ಲಿದ್ದ ನಾನು ಸಹದ್ಯೋಗಿಯ ಮದುವೆಗೆಂದು ಧಾರವಾಡ ಜಿಲ್ಲೆಯ‌ ಪುಟ್ಟ ಹಳ್ಳಿಯೊಂದಕ್ಕೆ ಆಗಮಿಸಿದ್ದೆ. ಮದುವೆ ಸಂಭ್ರಮದಲ್ಲಿ ಸಮಯ ಕಳೆದು ಹೋಗಿದ್ದೆ ಗೊತ್ತಾಗಿರಲಿಲ್ಲ. ಬಹು ದಿನಗಳ ನಂತರ ಮದುವೆ ನೆಪದಲ್ಲಿ‌ ಸೇರಿದ ಸ್ನೇಹಿತರೆಲ್ಲರು ಕಾಲೇಜಿನ ದಿನಗಳು, ಕ್ಲಾಸ್ ರೂಮಿನ ತರಲೆ- ತುಂಟಾಟಗಳನ್ನ ಮೆಲುಕು ಹಾಕಿದೇವು.

ಹೈದರಾಬಾದ್ ಗೆ ವಾಪಸ್ ತೆರಳಲು  ರಾತ್ರಿ 10 ಗಂಟೆಗೆ ಬಸ್ ಟಿಕೆಟ್ ಬುಕ್ ಕಾಯ್ದಿರಿಸಲಾಗಿತ್ತು.ಕೈಯಲ್ಲಿ ಇನ್ನೂ ನಾಲ್ಕೈದು ಗಂಟೆ ಸಮಯ ಉಳಿದಿತ್ತು. ಆಗ ನೆನಪಾಗಿದ್ದೆ ಅಣ್ಣಿಗೇರಿ. ಸ್ನೇಹಿತರೆಲ್ಲ ಸೇರಿ ಅರ್ಧ ಗಂಟೆಯಲ್ಲಿ ಅಣ್ಣಿಗೇರಿ ಊರಿನಲ್ಲಿ ಪ್ರತ್ಯಕ್ಷರಾಗಿದ್ದೇವು.

ಗದಗ ಹಾಗೂ ಹುಬ್ಬಳ್ಳಿ ಮಾರ್ಗ ಮಧ್ಯೆದಲ್ಲಿರುವ ಈ ಊರು ಐತಿಹಾಸಿಕವಾಗಿ ತುಂಬಾ ಮಹತ್ವ ಪಡೆದಿದೆ. ಹಿಂದೊಮ್ಮೆ 638 ವರ್ಷಗಳ ಹಿಂದಿನ ರಾಶಿಗಟ್ಟಲೆ ತಲೆ ಬುರುಡೆಗಳು ಪತ್ತೆಯಾಗಿ ಅಣ್ಣಿಗೇರಿ ಹೆಸರು ರಾಜ್ಯಾದ್ಯಂತ ಪ್ರಚಾರವಾಗಿತ್ತು. ಇತಿಹಾಸಕ್ಕೂ ಈ ಊರಿಗೆ ನಂಟು ಇರುವುದು ನನಗೆ ಗೊತ್ತಾಗಿದ್ದೆ ಆವಾಗಲೆ.

ತನು-ಮನ ಸೆಳೆಯುವ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ

ಬಸ್ ನಿಲ್ದಾಣದಿಂದ ನೇರವಾಗಿ ನಾವು ತೆರಳಿದ್ದು ಅಣ್ಣಿಗೇರಿಯಲ್ಲಿರುವ ಪ್ರಾಚೀನ ಕಾಲದ ಅಮೃತೇಶ್ವರ ದೇವಸ್ಥಾನಕ್ಕೆ. ನಾವು ಅಲ್ಲಿ ಭೇಟಿ ನೀಡಿ ಮೂರು ವರ್ಷಗಳ ಕಳೆದಿದ್ದರೂ ಇಂದಿಗೂ ಆ ದೇವಾಲದಯ ಸುಂದರ ನೋಟ ಇಂದಿಗೂ ಕಣ್ಣಿಗೆ ಕಟ್ಟಿಂದತಿದೆ.

ಅಮೃತೇಶ್ವರ ದೇವಸ್ಥಾನವು ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಸುಂದರ ಕಪ್ಪು ಕಲ್ಲಿನ ದೇವಾಲಯವಾಗಿದೆ. ಈ ದೇವಸ್ಥಾನದ ಮುಖ್ಯ ದೇವರು ಶಿವ. ಅಣ್ಣಿಗೇರಿ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯದ ಪ್ರಮುಖ ಭಾಗದ ಐತಿಹಾಸಿಕ ಪಟ್ಟಣವಾಗಿತ್ತು, ಹೊಯ್ಸಳರು, ಯಾದವರು ಆಳ್ವಿಕೆ ನಡೆಸಿದ ಕುರುಹುಗಳು ಇಲ್ಲಿವೆ.

ತನು-ಮನ ಸೆಳೆಯುವ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ

1050 ರಲ್ಲಿ ಕಟ್ಟಲಾದ ಅಮೃತೇಶ್ವರ ದೇವಾಲಯ ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು 76 ಕಂಬಗಳನ್ನು ಹೊಂದಿದೆ. ದೇವಾಲಯದ ಗೋಡೆಗಳು ಪೌರಾಣಿಕ ಚಿತ್ರಣಗಳ ಕೆತ್ತನೆಗಳನ್ನು ಒಳಗೊಂಡಿದೆ. ಈ ದೇವಾಲಯವು ಇಟಗಿಯಲ್ಲಿರುವ ಮಹಾದೇವ ದೇವಸ್ಥಾನದ ನಂತರದ ರಚನೆಗಳಿಗೆ ಮಾದರಿಯಾಗಿದೆ.

ಅಮರಶಿಲ್ಪಿ ಜಕಣಾಚಾರಿಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ.  ಬೇಲೂರು ಹಾಗೂ ಹಳೇಬೀಡು, ಲಕ್ಷ್ಮೇಶ್ವರದ ಸೋಮೇಶ್ವರ ಸೇರಿದಂತೆ ಮುಂತಾದ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅವರ ಉಳಿ ಏಟಿನಲ್ಲಿ ಸುಂದರವಾಗಿ ರೂಪಗೊಂಡಿರುವ ದೇವಸ್ಥಾನಗಳ ಪೈಕಿ ಅಣ್ಣಿಗೇರಿ ಅಮೃತಲಿಂಗೇಶ್ವರ ದೇವಾಲಯವೂ ಒಂದು.ತನು-ಮನ ಸೆಳೆಯುವ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ

ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು.

1157ರಲ್ಲಿ ಕಲಚೂರಿ ವಂಶದ 2ನೇ ಬಿಜ್ಜಳನು ಬಸವಕಲ್ಯಾಣವನ್ನು ವಶಪಡಿಸಿಕೊಂಡಾಗ ಚಾಲುಕ್ಯರು ಅಲ್ಲಿಂದ ಅಣ್ಣಿಗೇರಿಗೆ ತಮ್ಮ ರಾಜಧಾನಿಯನ್ನು ಬದಲಿಸಿದರು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ.

ತನು-ಮನ ಸೆಳೆಯುವ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯ

ಸುಮಾರು ಎರಡು ಗಂಟೆಗಳ ಕಾಲ‌ ದೇವಸ್ಥಾನ ‌ಸುತ್ತಾಡಿದೇವು.‌ ಕಪ್ಪು ಶಿಲೆಯಲ್ಲಿ ಕೊರೆದ ಶಿಲ್ಪ ‌ಕಲೆಗಳು ನಮ್ಮನ್ನ ಮೂಕ ವಿಸ್ಮೀತರನ್ನಾಗಿಸಿದವು. ದೇವಸ್ಥಾನದಿಂದ‌ ಹೊರಬಂದು ಹೈದರಾಬಾದ್ ಬಸ್ ನಲ್ಲಿ ಕುಳಿತಾಗಲೂ ನನ್ನ ಮನಸ್ಸು ಅಮೃತೇಶ್ವರ ದೇವಸ್ಥಾನದಲ್ಲಿಯೇ ಅಲೆಯುತ್ತಿತ್ತು.

ತಲುಪುದು ಹೇಗೆ ?

ಅಣ್ಣಿಗೇರಿ ಹುಬ್ಬಳ್ಳಿಗೆ ತುಂಬಾ ಹತ್ತಿರದಲ್ಲಿದೆ. ಹುಬ್ಬಳ್ಳಿ ಕರ್ನಾಟಕದ ಪ್ರಮುಖ ನಗರವಾಗಿದ್ದು, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಹೊಂದಿದೆ. ಹುಬ್ಬಳ್ಳಿಯಿಂದ 35 ಕಿ.ಮೀ ದೂರದಲ್ಲಿರುವ ಅಣ್ಣಿಗೇರಿಗೆ ಸಾಕಷ್ಟು ಬಸ್ ಸೌಲಭ್ಯ ಕೂಡ ಇದೆ. ಇತ್ತ ಗದಗನಿಂದಲೂ ಅಣ್ಣಿಗೇರಿಗೆ ತಲುಪಬಹುದು.

ಟಾಪ್ ನ್ಯೂಸ್

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.