ನಿಮಗೆ ಈ ವಾಮನಮೂರ್ತಿ ಬಗ್ಗೆ ಗೊತ್ತಾ…? ಹಳ್ಳಿಯ ಟೈಲರ್ ಹಾಸ್ಯ ನಟನಾಗಿ ಬೆಳೆದಿದ್ದ

ಸಿಐಡಿ ಉನ್ನಿಕೃಷ್ಣನ್ ಬಿಎ, ಬಿಎಡ್ ಸಿನಿಮಾ ಇಂದ್ರನ್ಸ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.  

ನಾಗೇಂದ್ರ ತ್ರಾಸಿ, Sep 5, 2020, 5:00 PM IST

ನಿಮಗೆ ಈ ವಾಮನಮೂರ್ತಿ ಬಗ್ಗೆ ಗೊತ್ತಾ…? ಹಳ್ಳಿಯ ಟೈಲರ್ ಹಾಸ್ಯ ನಟನಾಗಿ ಬೆಳೆದಿದ್ದ

ಹಾಸ್ಯ ಯಾರಿಗೆ ತಾನೇ ಇಷ್ಟವಿಲ್ಲ. ಸಿನಿಮಾಗಳನ್ನು ಪ್ರೇಕ್ಷಕ ಹೆಚ್ಚಾಗಿ ಎರಡು ಕಾರಣಗಳಿಗಾಗಿ ತುಂಬಾ ಇಷ್ಟಪಡುತ್ತಾನೆ. ಮೊದಲನೆಯದು ಕಥಾಹಂದರ, ಎರಡನೇಯದು ಹಾಸ್ಯ ನಟನೆಗಾಗಿ. ಹೀಗೆ ನಟನೊಬ್ಬ ತನ್ನ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಮೂಲಕ ಅದಕ್ಕೊಂದು ಜೀವ ತುಂಬುವ ಮೂಲಕ ಪ್ರೇಕ್ಷಕ ಮಹಾಶಯನ ಮನಸ್ಸನ್ನು ಗೆದ್ದಿರುತ್ತಾರೆ. ಕನ್ನಡದಲ್ಲಿಯೂ ಡಿಂಗ್ರಿ ನಾಗರಾಜ್, ಉಮೇಶ್, ದೊಡ್ಡಣ್ಣ ಎರಡನೇ ಕಾಲಘಟ್ಟದ ಹಾಸ್ಯ ನಟರು, ತೀರಾ ಇತ್ತೀಚೆಗೆ ಚಿಕ್ಕಣ್ಣ ಹಾಸ್ಯದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ. ನಾನು ಈ ವಾರ ಪರಿಚಯಿಸಲು ಹೊರಟಿರುವ ಹಾಸ್ಯ ನಟ ಬೇರಾರು ಅಲ್ಲ ಮಲಯಾಳಂ ಚಿತ್ರರಂಗದ “ಇಂದ್ರನ್ಸ್”.

ಹೌದು ನೀವು ಮಲಯಾಳಂ ಸಿನಿಮಾ ಪ್ರಿಯರಾಗಿದ್ದರೆ ನಿಮಗೆ ಈ ಹಾಸ್ಯ ನಟನ ನೆನಪು ಮರೆಯಾಗಲು ಸಾಧ್ಯವೇ ಇಲ್ಲ. ಈ ನಟನ ಮುಖ ಬೆಳ್ಳಿ ಪರದೆ ಮೇಲೆ ಬರುತ್ತಿದ್ದಂತೆಯೇ ನಗುವೂ ನಮ್ಮ ಮುಖದ ಮೇಲೆ ಅರಳದಿರಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಇಂದ್ರನ್ಸ್ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ನೋಡಲು ವಾಮನ ಮೂರ್ತಿಯಂತಿರುವ ಇಂದ್ರನ್ಸ್ 1956ರಲ್ಲಿ ತಿರುವನಂತಪುರಂನ ಕುಮಾರಪುರಂನಲ್ಲಿ ಜನಿಸಿದ್ದರು. ಇವರ ನಿಜವಾದ ಹೆಸರು ಸುರೇಂದ್ರನ್ ಕೋಚುವೇಲು ಅಂತ.  ಕುಮಾರಪುರಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಂತರ ಎಂಎಸ್ಸಿ ಪದವಿ ಪಡೆದಿದ್ದರು.

ಕುಮಾರಪುರಂನ ಟೈಲರ್ ಹಾಸ್ಯ ನಟನಾಗಿ ಬೆಳೆದಿದ್ದ!

ತಿರುವನಂತಪುರಂನ ಕುಮಾರಪುಂನಲ್ಲಿನ ಮುರಿನಂಜಪಾಲಂ ರಸ್ತೆ ಸಮೀಪ “ ಇಂದ್ರನ್ಸ್ ಬ್ರದರ್ಸ್” ಹೆಸರಿನ ಟೈಲರ್ ಅಂಗಡಿಯೊಂದನ್ನು ಪ್ರಾರಂಭಿಸಿದ್ದರು. ಬಟ್ಟೆ ಹೊಲಿದು ಕೊಡುವ ಮೂಲಕ ಜೀವನ ಸಾಗಿಸುತ್ತಿದ್ದ ಸುರೇಂದ್ರನ್ ಸ್ಥಳೀಯವಾಗಿ ಜನಪ್ರಿಯರಾಗಿದ್ದರು. ನವಿರಾದ ಹಾಸ್ಯ ಮಾಡುತ್ತಿದ್ದ ಇವರು ನಂತರ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಅಮೆಚೂರ್ ಆರ್ಟ್ ಕ್ಲಬ್ ಗೆ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದ್ದರು.

ಅಂತೂ ಒಮ್ಮೆ ನಿರ್ಮಾಪಕ ಟಿಎಂಎನ್ ಚಾರ್ಲಿ 1981ರಲ್ಲಿ ತಮ್ಮ ನಿರ್ಮಾಣದ ಚೂ(ಜೂ)ಟಾಟ್ಟಂ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ (ವಸ್ತ್ರ ವಿನ್ಯಾಸಕಾರ) ಆಗಿ ಸಹಾಯ ಮಾಡುವಂತೆ ಆಫರ್ ನೀಡಿದ್ದರು. ಹೀಗೆ ಚಿತ್ರರಂಗಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಎಂಟ್ರಿ ಕೊಟ್ಟ ಇಂದ್ರನ್ ಹಲವು ಸಣ್ಣ, ಪುಟ್ಟ ಪಾತ್ರಗಳಲ್ಲಿ ಅಭಿನಯಿಸತೊಡಗಿದ್ದರು.

ಇದಕ್ಕೂ ಮುನ್ನ ಇಂದ್ರನ್ಸ್ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾಲಿವೀಡು ಎಂಬ ಧಾರವಾಹಿಯಲ್ಲಿ ನಟಿಸುವ ಮೂಲಕ ತಮ್ಮ ಬಣ್ಣದ ಬದುಕನ್ನು ಆರಂಭಿಸಿದ್ದರು. ಆದರೆ ಇದ್ಯಾವುದು ಅವರನ್ನು ದೊಡ್ಡ ಮಟ್ಟದಲ್ಲಿ ಗುರುತಿಸುವಲ್ಲಿ ವಿಫಲವಾಗಿದ್ದವು. 1993ರಲ್ಲಿ ಜಯರಾಂ, ಶೋಭನಾ ನಟನೆಯ ಮೇಲೆಪಾರಂಬಿಲ್ ಅನ್ವೀಡು ಸಿನಿಮಾದಲ್ಲಿ ಮದುವೆ ಬ್ರೋಕರ್ ಪಾತ್ರ ಇಂದ್ರನ್ಸ್ ಅವರ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿ ಪರಿಣಮಿಸಿತ್ತು!

1994ರಲ್ಲಿ ತೆರೆ ಕಂಡಿದ್ದ ಸಿಐಡಿ ಉನ್ನಿಕೃಷ್ಣನ್ ಬಿಎ, ಬಿಎಡ್ ಸಿನಿಮಾ ಇಂದ್ರನ್ಸ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.  1990ರ ದಶಕದ ನಂತರ ನೂರಾರು ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಇಂದ್ರನ್ಸ್ ಮಿಂಚಿದ್ದರು. 2018ರಲ್ಲಿ ಆಲೋರುಕ್ಕಂ ಸಿನಿಮಾದಲ್ಲಿನ ನಟನೆಗಾಗಿ ಕೇರಳ ರಾಜ್ಯದ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಒಬ್ಬ ಸಾಮಾನ್ಯ ಟೈಲರ್ ಆಗಿದ್ದ ವ್ಯಕ್ತಿ, ಯಾವುದೇ ಸ್ಟಾರ್ ಡಮ್ ಇಲ್ಲದೇ, ಯಾವುದೇ ಗಾಡ್ ಫಾದರ್ ಇಲ್ಲದೇ ಸುಕುಮಾರನ್ ಸಿನಿಮಾ ಜಗತ್ತಿನೊಳಗೆ ಪ್ರವೇಶಿಸಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮುಖದಲ್ಲಿ ನಗುವಿನ ಗೆರೆ ಮೂಡಿಸಿ ಗೆದ್ದಿರುವುದು ಸಣ್ಣ ಸಾಧನೆಯಲ್ಲ. ಕಾಸ್ಟ್ಯೂಮ್ ಡಿಸೈನರ್ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟು ನಂತರ ಹಾಸ್ಯ ನಟನಾಗಿ ಬೆಳೆದ ಇಂದ್ರನ್ಸ್ ಇಂದಿಗೂ ತಮ್ಮ ಸಿನಿ ಪಯಣದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಇಂದ್ರನ್ಸ್ ಹಾಸ್ಯ ನಟನೆಯಿಂದ ಹೊರಳಿ ಗಂಭೀರ ಪಾತ್ರವನ್ನು ನಿರ್ವಹಿಸಿದ್ದರು. ಮಲಯಾಳಂ ಸಿನಿಮಾ ಇಂಡಸ್ಟ್ರಿ ಇಂದ್ರನ್ಸ್ ಅವರ ಪ್ರತಿಭೆಯನ್ನು “ಶಯನಂ, ದೃಷ್ಟಾಂತಂ, ಕಥಾವಾಶೇಷನ್ ಮತ್ತು ರಮಣಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗುರುತಿಸಿತ್ತು. ಮಲಯಾಳಂ ಸ್ಟಾರ್ ನಟರ ಮುಂದೆ ನಾನೇನು ಅಲ್ಲ. ನಾನು ಪ್ರತಿಭಾವಂತ ನಿರ್ದೇಶಕರ ಜತೆ ಕೆಲಸ ಮಾಡಿದ್ದೇನೆ. ಅಲ್ಲದೇ ಹಿರಿಯರಾದ ತಿಲಕನ್ ಚೆಟ್ಟನ್, ಜಗದಿ ಚೆಟ್ಟನ್, ಕಲ್ಪನಾ, ಸುಕುಮಾರಿ, ಲಲಿತಾ ಸೇರಿದಂತೆ ಹಲವರ ಜತೆ ನಟಿಸಿದ್ದೇನೆ. ನನಗೆ ಅವರ ಬೆಂಬಲವೇ ವೃತ್ತಿ ಜೀವನಕ್ಕೆ ಸಹಾಯಕವಾಗಿದ್ದು, ನಾನು ಇಂತಹವರ ಕಾಲದಲ್ಲಿ ಅವರ ಜತೆಗೆ ನಟಿಸಿರುವುದೇ ನನಗೆ ಸಿಕ್ಕ ಭಾಗ್ಯವಾಗಿದೆ ಎಂದು ಇಂದ್ರನ್ಸ್ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.