ಏನಿದು ಕ್ಲಬ್ ಹೌಸ್ ಆ್ಯಪ್: ಇದರ ಜನಪ್ರಿಯತೆಗೆ ಕಾರಣಗಳೇನು ?


Team Udayavani, Jun 9, 2021, 11:40 AM IST

club-hosue

ಕ್ಲಬ್‌ ಹೌಸ್‌ … ಕಳೆದ ಕೆಲವು ದಿನಗಳಿಂದ ಬಹುಚರ್ಚೆಯಲ್ಲಿರುವ ವಿಷಯ. ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಮಾದರಿಯಲ್ಲೆ ಅತ್ಯಲ್ಪ ಅವಧಿಯಲ್ಲಿ ಜನರನ್ನು ಸೆಳೆದಂತಹ ಆ್ಯಪ್. ಇದು ಕೂಡ ಒಂದು ಸಾಮಾಜಿಕ ಜಾಲತಾಣ. ಆದರೆ ಇದರಲ್ಲಿ ಇತರ ಜಾಲತಾಣಗಳಂತೆ ಪೋಸ್ಟ್‌ ಹಾಕಲು ಸಾಧ್ಯವಿಲ್ಲ ಮತ್ತು ಟೈಪ್‌ ಮಾಡಲಾಗುವುದಿಲ್ಲ. ಅದರ ಬದಲು ಇಲ್ಲಿ ವಾಯ್ಸ್‌ ಚಾಟ್‌ ಮೂಲಕ ಸಂವಹನ ನಡೆಸಬಹುದು.

ಇಷ್ಟು ವರ್ಷಗಳ ಕಾಲ ಫೋಟೋ, ವಿಡಿಯೋ, ಸಂದೇಶಗಳ ಮೂಲಕ ವ್ಯವಹರಿಸಲು ಹಲವು ಸೋಶಿಯಲ್ ಮೀಡಿಯಾಗಳಿದ್ದವು. ಆದರೇ ವಾಯ್ಸ್ ಚಾಟ್ ನಡೆಸಲು ಪ್ರತ್ಯೇಕವಾದ ಆ್ಯಪ್ ಗಳಿರಲಿಲ್ಲ. ಇದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಇದೀಗ ಬಂದಿರುವ ಕ್ಲಬ್ ಹೌಸ್ ಆ್ಯಪ್ ಈ ಎಲ್ಲಾ ಕೊರತೆಗಳನ್ನು ನೀಗಿಸಿದೆ. ಇಲ್ಲಿ ಸಾಮಾನ್ಯರಿಂದ ಹಿಡಿದು ಜನಪ್ರಿಯ ವ್ಯಕ್ತಿಗಳಿದ್ದಾರೆ. ಪ್ರತಿ ಮಾತುಕತೆಯೂ ಕೂಡ ಲೈವ್ ಮೂಲಕವೇ ಜರುಗುತ್ತವೆ. ಆದ್ದರಿಂದ ಆ್ಯಪ್ ಎಂಗೇಜ್ ಮೆಂಟ್ ಪ್ರಮಾಣವೂ ಹೆಚ್ಚಾಗುತ್ತಿದೆ.

ಮೊದಲು  ಐಫೋನ್‌ನಲ್ಲಿ ಈ ತಂತ್ರಜ್ಞಾನ ಲಭ್ಯವಿತ್ತು. ಈಗ ಇದು ಆ್ಯಂಡ್ರಾಯ್ಡ್‌ ಗೂ ಲಗ್ಗೆ ಇಟ್ಟಿದೆ. ಇದರ  ಫೀಚರ್​ ಗಳು ಕೂಡ ಅತ್ಯುತ್ತಮವಾಗಿರುವುದರಿಂದ ಡೌನ್​ಲೋಡ್​ ಪ್ರಮಾಣ ಹೆಚ್ಚಾಗಿದೆ. ಹೊಸ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ಇನ್​ಸ್ಟಾಗ್ರಾಮ್ ಪ್ರೊಫೈಲ್ ಸೇರ್ಪಡೆ ಮಾಡುವ ಅವಕಾಶವಿದೆ.

ಈ ಅಪ್ಲಿಕೇಶನ್ ನನ್ನು ಆಲ್ಫಾ ಎಕ್ಸ್ ಫ್ಲೊರೇಶನ್ ಕಂಪೆನಿ ಮೂಲಕ ಪೌಲ್ ಡೇವಿಸನ್ ಹಾಗೂ ರೋಹನ್ ಸೇಠ್ 2020ರ ಮಾರ್ಚ್ ನಲ್ಲಿ ಬಳಕೆಗೆ ತಂದರು (ಐಒಎಸ್). 2021ರ ಮೇನಲ್ಲಿ  ಆ್ಯಂಡ್ರಾಯ್ಡ್ ನಲ್ಲಿ ಈ ಅಪ್ಲಿಕೇಶನ್ ಜಾರಿಗೆ ಬಂತು. ಕ್ಲಬ್​ಹೌಸ್ ಎಂಬುದು ಇನ್ವಿಟೇಷನ್ ಓನ್ಲಿ ಸೋಷಿಯಲ್ ಮೀಡಿಯಾ ಆ್ಯಪ್. ಇದರ ಮೂಲಕವಾಗಿ ಚಾಟ್​ ರೂಮ್​ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ವಾಯ್ಸ್ ಚಾಟಿಂಗ್ ​ಮಾಡುವ ಅವಕಾಶ ಇದೆ.

ಈ ಆ್ಯಪ್​ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ​ಉದಾ: ಎಲನ್ ಮಸ್ಕ್ ಕ್ಲಬ್ ಹೌಸ್ ಮೂಲಕ ಮಾತನಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಈ ಮಾತುಕತೆಯನ್ನು ಯಾರೂ ಬೇಕಾದರೂ ಕೇಳಿಸಿಕೊಳ್ಳಬಹುದು. ನಿಮಗೆ ಪ್ರಶ್ನೆ ಕೇಳಬೇಕೆಂದು ಅನಿಸಿದರೆ ‘ಕೈ ಗುರುತು’ ಇರುವ ಲೋಗೋವನ್ನು  ಒತ್ತಿದರಾಯಿತು. ರೂಂ ಕ್ರಿಯೆಟ್ ಮಾಡಿದವರು ಪ್ರಶ್ನೆ ಕೇಳಲು ಅನುವು ಮಾಡಿಕೊಡುತ್ತಾರೆ.

ಇಲ್ಲಿ ನಿಮ್ಮದೆ ಆದ ಅಕೌಂಟ್ ಕ್ರಿಯೆಟ್ ಮಾಡಬಹುದು. ಪ್ರಸಿದ್ದ ವ್ಯಕ್ತಿಗಳನ್ನು, ನಿಮ್ಮ ಸ್ನೇಹಿತರನ್ನು “Follow” ಮಾಡಬಹುದು. ಇದೀಗ ಈ ಅಪ್ಲಿಕೇಶನ್ 2 ಮಿಲಿಯನ್ ಗಿಂತಲೂ ಹೆಚ್ಚು ಆ್ಯಂಡ್ರಾಯ್ಡ್ ಡೌನ್ ಲೋಡ್ ಗಳಾಗಿದೆ. ಮಾರ್ಕ್ ಜುಕರ್ ಬರ್ಗ್, ಎಲನ್ ಮಸ್ಕ್ ರಂತಹ ಜನಪ್ರಿಯ ವ್ಯಕ್ತಿಗಳು  ಕೂಡ ಈ ಆ್ಯಪ್ ಬಳಸುತ್ತಿದ್ದಾರೆ.

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.