ಕಳೆದ 10 ವರ್ಷಗಳಿಂದ ಇವರ ಪ್ರತಿ ಸಂಡೇಯೂ ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಮೀಸಲು.!
Team Udayavani, Jun 10, 2021, 9:10 AM IST
ಬದುಕನ್ನು ನಮ್ಮಗಾಗಿಯೇ ಬದುಕಿಸಿಕೊಳ್ಲುವುದು,ಬಳಸಿಕೊಳ್ಳುವುದು ಹುಟ್ಟು ಜೀವಿಯ ಮೂಲ ಗುರಿ. ನಾವು ಬದಕುಬೇಕು ಇನ್ನೊಬ್ಬರನ್ನು ಬದಕಲು ಬಿಡಬೇಕು. ನಮ್ಮಿಂದಾಗುವಷ್ಟು ಸಹಾಯ,ಸಹಕಾರ,ಸಲಹೆಯನ್ನು ಇನ್ನೊಬ್ಬರ ಜೀವನಕ್ಕೆ ನೀಡಬೇಕೆನ್ನುವವರು ಕೈ ಲೆಕ್ಕಕ್ಕೆ ಸಿಗುವಷ್ಟು ಮಂದಿ ಮಾತ್ರ.
ಇನ್ನೊಂದು ಜೀವಿಯ ಹಸಿವು ಹಾಗೂ ದಾಹ ನೀಗಿಸುವ ಮನಸ್ಸುವುಳ್ಳ ವ್ಯಕ್ತಿಗಳು,ವ್ಯಕ್ತಿತ್ವಗಳು,ಸಂಘ ಸಂಸ್ಥೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಇಲ್ಲೊಬ್ಬರು ಪ್ರಾಣಿ- ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸವನ್ನು ಕಳೆದ 10 ವರ್ಷದಿಂದ ಮಾಡುತ್ತಾ ಬರುತ್ತಿದ್ದಾರೆ ಅವರೇ ಆಂಧ್ರದ ಕಡಪದ ನಿವಾಸಿ ಶೇಕ್ ಬಾಷಾ ಮೊಹಿಯುದ್ದೀನ್.
ಮೊಹಿಯುದ್ದೀನ್ ಅವರದು, ಮಧ್ಯಮ ವರ್ಗದ ಜೀವನ, ಕುಟುಂಬದ ಜವಾಬ್ದಾರಿ ನಿಭಾಯಿಸಲು, ಮನೆಯವರನ್ನು ನೋಡಿಕೊಂಡು ನೆಮ್ಮದಿಯಾಗಿರಲು ಪೇಟೆಯಲ್ಲಿ ಒಂದು ಜಿಮ್ ಬಿಟ್ಟರೆ ಹೇಳಿಕೊಳ್ಳುವಷ್ಟು ಅದ್ಧೂರಿ ಆಸ್ತಿಗಳಿಲ್ಲ.
ಅದು 2011 ಸಮಯ ಮೊಹಿಯುದ್ದೀನ್ ಸಿದ್ದವತಂ ಅರಣ್ಯ ಪ್ರದೇಶದಿಂದ ಸಾಗುತ್ತಿರುವಾಗ, ಅಲ್ಲೊಂದಿಷ್ಟು ಕೋತಿಗಳ ಗುಂಪು ನೀರಿಗಾಗಿ ಯಾರೋ ಬಿಸಾಡಿದ ಬಾಟಲಿನಲ್ಲಿದ್ದ ಹನಿಗಾಗಿ ಕಚ್ಚಾಟ ನಡೆಸುವುದನ್ನು ಗಮನಿಸುತ್ತಾರೆ. ತನ್ನ ಬಳಿಯಿದ್ದ ಬಾಟಲಿಯನ್ನು ಕೋತಿಗಳತ್ತ ಬಿಸಾಡಿದಾಗ, ಕೋತಿಗಳು ತಾ ಮುಂದು ನೀ ಮುಂದು ಎಂಬಂತೆ ನೀರಿಗಾಗಿ ಹಾತೊರೆಯುತ್ತವೆ. ಈ ದೃಶ್ಯ ಮೊಹಿಯುದ್ದೀನ್ ಅವರ ಮನಸ್ಸಿನಲ್ಲಿ ಇವುಗಳ ದಾಹ ನೀಗಿಸಲು ಏನಾದರೂ ಮಾಡಬೇಕೆನ್ನುವ ಯೋಚನೆಯನ್ನು ಹುಟ್ಟು ಹಾಕುತ್ತದೆ. ಅದೇ ದಿನ ಮೊಹಿಯುದ್ದೀನ್ ನದಿಯೊಂದರಿಂದ ನೀರನ್ನು ತಂದು ಕೋತಿಗಳಿಗೆ ನೀಡುತ್ತಾರೆ.
ಮುಂದಿನ ಭಾನುವಾರ ಆಟೋ ರಿಕ್ಷಾದಲ್ಲಿ ನೀರಿನ ಕ್ಯಾನ್ ಗಳನ್ನು ತಂದು ಕೋತಿಗಳ ಮುಂದೆ ಇಡುತ್ತಾರೆ. ಕೋತಿಗಳಿಗಾಗಿ ಬಾಳೆ ಹಣ್ಣು ಅದರೊಂದಿಗೆ ಆಹಾರವನ್ನು ತರುತ್ತಾರೆ. ವಾರ ಮುಗಿದ ಬಳಿಕ ಮುಂದಿನ ವಾರ ಮತ್ತೆ ಅದೇ ಮಾದರಿಯನ್ನು ಮೊಹಿಯುದ್ದೀನ್ ಮುಂದುವರೆಸುತ್ತಾರೆ. ಎಲ್ಲಿಯವರೆಗೆ ಅಂದರೆ ಭಾನುವಾರ ಬಂತೆಂದರೆ ಸಾಕು ಕೋತಿಗಳು ಬೇಗ ಎದ್ದು ಗುಂಪುಗೂಡಿ ಮೊಹಿಯುದ್ದೀನ್ ತರುವ ಆಹಾರಕ್ಕಾಗಿ ಕಾಯುತ್ತವೆ.
ಮೊಹಿಯುದ್ದೀನ್ ಗೆ ಈ ಕೆಲಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪ್ರತಿವಾರ ಪ್ರಾಣಿಗಳ ಜತೆ ಒಡನಾಟ ಹೆಚ್ಚುತ್ತದೆ. ರಸ್ತೆ ಬದಿ ಬಿಡಾಡಿ ಹಸುಗಳಿಗೆ ಹುಲ್ಲು, ಹಣ್ಣನ್ನು ನೀಡಲು ಶುರು ಮಾಡುತ್ತಾರೆ. ಪ್ರಾಣಿ – ಪಕ್ಷಿಗಳಿಗಾಗಿ ಭಾನುವಾರದ ದಿನ ಮುಂಜಾನೆ ಬೇಗ ಎದ್ದು ಮಾರುಕಟ್ಟೆಗೆ ಹೋಗಿ ತರಕಾರಿ, ಹಣ್ಣು ಹಂಪಲನ್ನು ತಂದು ಭಕರಪೇಟೆ, ಸಿದ್ದವತಂ, ಅಟ್ಲೂರ್, ರಾಪುರು, ರಾಮಪುರಂ, ಗ್ವಾವಾಲಾ ಚೆರುವು ಘಾಟ್ ನ ಅರಣ್ಯ ಪ್ರದೇಶಕ್ಕೆ ಹೋಗಿ ಅವುಗಳನ್ನು ತನ್ನ ಪ್ರೀತಿಯ ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಾರೆ.
ಹಸುಗಳು, ಕೋತಿಗಳು, ಜಿಂಕೆ, ಅಳಿಲುಗಳು, ನಾಯಿಗಳು, ಬೆಕ್ಕುಗಳು, ಪಾರಿವಾಳಗಳು, ಗಿಳಿಗಳು, ಕಾಗೆಗಳು, ಗುಬ್ಬಚ್ಚಿಗಳಿಗೆ ಮೊಹಿಯುದ್ದೀನ್ ಅವರು ಸ್ನೇಹಿತ. ಪ್ರತಿ ಸಂಡೇಯೂ ಅವರ ಭೇಟಿಗೆ ಪ್ರಾಣಿ-ಪಕ್ಷಿಗಳು ಕಾಯುತ್ತಾ ಇರುತ್ತವೆ.
ಜಿಮ್ ಸೆಂಟರ್ ನ್ನು ನಿಭಾಯಿಸಿಕೊಂಡಿರುವ ಮೊಹಿಯುದ್ದೀನ್ ಅವರಿಗೆ ಕುಟುಂಬದ ಸಹಕಾರ ಈ ಕೆಲಸಕ್ಕಿದೆಯಂತೆ. ಲಾಕ್ ಡೌನ್ ಹಾಗೂ ಕೋವಿಡ್ ಸಂದರ್ಭದಲ್ಲಿಯೂ, ಚಳಿ,ಮಳೆ ಎನ್ನದೇ ಇದುವರೆಗೂ, ಕಳೆದ 10 ವರ್ಷಗಳಿಂದ ಮೊಹಿಯುದ್ದೀನ್ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡಲು ಮರೆತಿಲ್ಲ. ಪೊಲೀಸರು ಕೂಡ ಇವರ ಸೇವೆಗೆ ಕೈಜೋಡಿಸಿ ಲಾಕ್ ಡೌನ್ ಸಮಯದಲ್ಲಿ ಸಹಕರಿಸಿದ್ದಾರೆ.
-ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Jammu Kashmir: ಗುಲ್ ಮಾರ್ಗ್, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…
ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?
Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ
Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ