ಕಳೆದ 10 ವರ್ಷಗಳಿಂದ ಇವರ ಪ್ರತಿ ಸಂಡೇಯೂ ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಮೀಸಲು.!


Team Udayavani, Jun 10, 2021, 9:10 AM IST

ಕಳೆದ 10 ವರ್ಷಗಳಿಂದ ಇವರ ಪ್ರತಿ ಸಂಡೇಯೂ ಪ್ರಾಣಿ-ಪಕ್ಷಿಗಳ ಹಸಿವು ನೀಗಿಸಲು ಮೀಸಲು.!

ಬದುಕನ್ನು ನಮ್ಮಗಾಗಿಯೇ ಬದುಕಿಸಿಕೊಳ್ಲುವುದು,ಬಳಸಿಕೊಳ್ಳುವುದು ಹುಟ್ಟು ಜೀವಿಯ ಮೂಲ ಗುರಿ. ನಾವು ಬದಕುಬೇಕು ಇನ್ನೊಬ್ಬರನ್ನು ಬದಕಲು ಬಿಡಬೇಕು. ನಮ್ಮಿಂದಾಗುವಷ್ಟು ಸಹಾಯ,ಸಹಕಾರ,ಸಲಹೆಯನ್ನು ಇನ್ನೊಬ್ಬರ ಜೀವನಕ್ಕೆ ನೀಡಬೇಕೆನ್ನುವವರು ಕೈ ಲೆಕ್ಕಕ್ಕೆ ಸಿಗುವಷ್ಟು ಮಂದಿ ಮಾತ್ರ.

ಇನ್ನೊಂದು ಜೀವಿಯ ಹಸಿವು ಹಾಗೂ ದಾಹ ನೀಗಿಸುವ ಮನಸ್ಸುವುಳ್ಳ ವ್ಯಕ್ತಿಗಳು,ವ್ಯಕ್ತಿತ್ವಗಳು,ಸಂಘ ಸಂಸ್ಥೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಇಲ್ಲೊಬ್ಬರು ಪ್ರಾಣಿ- ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸವನ್ನು ಕಳೆದ 10 ವರ್ಷದಿಂದ ಮಾಡುತ್ತಾ ಬರುತ್ತಿದ್ದಾರೆ ಅವರೇ ಆಂಧ್ರದ ಕಡಪದ ನಿವಾಸಿ ಶೇಕ್ ಬಾಷಾ ಮೊಹಿಯುದ್ದೀನ್.

ಮೊಹಿಯುದ್ದೀನ್ ಅವರದು, ಮಧ್ಯಮ ವರ್ಗದ ಜೀವನ, ಕುಟುಂಬದ ಜವಾಬ್ದಾರಿ ನಿಭಾಯಿಸಲು, ಮನೆಯವರನ್ನು ನೋಡಿಕೊಂಡು ನೆಮ್ಮದಿಯಾಗಿರಲು ಪೇಟೆಯಲ್ಲಿ ಒಂದು ಜಿಮ್ ಬಿಟ್ಟರೆ ಹೇಳಿಕೊಳ್ಳುವಷ್ಟು ಅದ್ಧೂರಿ ಆಸ್ತಿಗಳಿಲ್ಲ.

ಅದು 2011 ಸಮಯ ಮೊಹಿಯುದ್ದೀನ್ ಸಿದ್ದವತಂ ಅರಣ್ಯ ಪ್ರದೇಶದಿಂದ ಸಾಗುತ್ತಿರುವಾಗ, ಅಲ್ಲೊಂದಿಷ್ಟು ಕೋತಿಗಳ ಗುಂಪು ನೀರಿಗಾಗಿ ಯಾರೋ ಬಿಸಾಡಿದ ಬಾಟಲಿನಲ್ಲಿದ್ದ ಹನಿಗಾಗಿ ಕಚ್ಚಾಟ ನಡೆಸುವುದನ್ನು ಗಮನಿಸುತ್ತಾರೆ. ತನ್ನ ಬಳಿಯಿದ್ದ ಬಾಟಲಿಯನ್ನು ಕೋತಿಗಳತ್ತ ಬಿಸಾಡಿದಾಗ, ಕೋತಿಗಳು ತಾ ಮುಂದು ನೀ ಮುಂದು ಎಂಬಂತೆ ನೀರಿಗಾಗಿ ಹಾತೊರೆಯುತ್ತವೆ. ಈ ದೃಶ್ಯ ಮೊಹಿಯುದ್ದೀನ್ ಅವರ ಮನಸ್ಸಿನಲ್ಲಿ ಇವುಗಳ ದಾಹ ನೀಗಿಸಲು ಏನಾದರೂ ಮಾಡಬೇಕೆನ್ನುವ ಯೋಚನೆಯನ್ನು ಹುಟ್ಟು ಹಾಕುತ್ತದೆ. ಅದೇ ದಿನ ಮೊಹಿಯುದ್ದೀನ್ ನದಿಯೊಂದರಿಂದ ನೀರನ್ನು ತಂದು ಕೋತಿಗಳಿಗೆ ನೀಡುತ್ತಾರೆ.

ಮುಂದಿನ ಭಾನುವಾರ ಆಟೋ ರಿಕ್ಷಾದಲ್ಲಿ ನೀರಿನ ಕ್ಯಾನ್ ಗಳನ್ನು ತಂದು ಕೋತಿಗಳ ಮುಂದೆ ಇಡುತ್ತಾರೆ. ಕೋತಿಗಳಿಗಾಗಿ ಬಾಳೆ ಹಣ್ಣು ಅದರೊಂದಿಗೆ ಆಹಾರವನ್ನು ತರುತ್ತಾರೆ. ವಾರ ಮುಗಿದ ಬಳಿಕ ಮುಂದಿನ ವಾರ ಮತ್ತೆ ಅದೇ ಮಾದರಿಯನ್ನು ಮೊಹಿಯುದ್ದೀನ್ ಮುಂದುವರೆಸುತ್ತಾರೆ. ಎಲ್ಲಿಯವರೆಗೆ ಅಂದರೆ ಭಾನುವಾರ ಬಂತೆಂದರೆ ಸಾಕು ಕೋತಿಗಳು ಬೇಗ ಎದ್ದು ಗುಂಪುಗೂಡಿ ಮೊಹಿಯುದ್ದೀನ್ ತರುವ ಆಹಾರಕ್ಕಾಗಿ ಕಾಯುತ್ತವೆ.

ಮೊಹಿಯುದ್ದೀನ್ ಗೆ ಈ ಕೆಲಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪ್ರತಿವಾರ ಪ್ರಾಣಿಗಳ ಜತೆ ಒಡನಾಟ ಹೆಚ್ಚುತ್ತದೆ. ರಸ್ತೆ ಬದಿ ಬಿಡಾಡಿ ಹಸುಗಳಿಗೆ ಹುಲ್ಲು, ಹಣ್ಣನ್ನು ನೀಡಲು ಶುರು ಮಾಡುತ್ತಾರೆ.  ಪ್ರಾಣಿ – ಪಕ್ಷಿಗಳಿಗಾಗಿ ಭಾನುವಾರದ ದಿನ ಮುಂಜಾನೆ ಬೇಗ ಎದ್ದು ಮಾರುಕಟ್ಟೆಗೆ ಹೋಗಿ ತರಕಾರಿ, ಹಣ್ಣು ಹಂಪಲನ್ನು ತಂದು ಭಕರಪೇಟೆ, ಸಿದ್ದವತಂ, ಅಟ್ಲೂರ್, ರಾಪುರು, ರಾಮಪುರಂ, ಗ್ವಾವಾಲಾ ಚೆರುವು ಘಾಟ್ ನ ಅರಣ್ಯ ಪ್ರದೇಶಕ್ಕೆ ಹೋಗಿ ಅವುಗಳನ್ನು ತನ್ನ ಪ್ರೀತಿಯ ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಾರೆ.

ಹಸುಗಳು, ಕೋತಿಗಳು, ಜಿಂಕೆ, ಅಳಿಲುಗಳು, ನಾಯಿಗಳು, ಬೆಕ್ಕುಗಳು, ಪಾರಿವಾಳಗಳು, ಗಿಳಿಗಳು, ಕಾಗೆಗಳು, ಗುಬ್ಬಚ್ಚಿಗಳಿಗೆ ಮೊಹಿಯುದ್ದೀನ್ ಅವರು ಸ್ನೇಹಿತ. ಪ್ರತಿ ಸಂಡೇಯೂ ಅವರ ಭೇಟಿಗೆ ಪ್ರಾಣಿ-ಪಕ್ಷಿಗಳು ಕಾಯುತ್ತಾ ಇರುತ್ತವೆ.

ಜಿಮ್ ಸೆಂಟರ್ ನ್ನು ನಿಭಾಯಿಸಿಕೊಂಡಿರುವ ಮೊಹಿಯುದ್ದೀನ್ ಅವರಿಗೆ ಕುಟುಂಬದ ಸಹಕಾರ ಈ ಕೆಲಸಕ್ಕಿದೆಯಂತೆ. ಲಾಕ್ ಡೌನ್ ಹಾಗೂ ಕೋವಿಡ್ ಸಂದರ್ಭದಲ್ಲಿಯೂ, ಚಳಿ,ಮಳೆ ಎನ್ನದೇ ಇದುವರೆಗೂ, ಕಳೆದ 10 ವರ್ಷಗಳಿಂದ ಮೊಹಿಯುದ್ದೀನ್ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡಲು ಮರೆತಿಲ್ಲ. ಪೊಲೀಸರು ಕೂಡ ಇವರ ಸೇವೆಗೆ ಕೈಜೋಡಿಸಿ ಲಾಕ್ ಡೌನ್ ಸಮಯದಲ್ಲಿ ಸಹಕರಿಸಿದ್ದಾರೆ.

-ಸುಹಾನ್ ಶೇಕ್

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.